ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ವಿದ್ಯುತ್‌ ಸಂಪರ್ಕ ಕಡಿತ ಅಡಿಕೆ ಸಸಿಗೆ ಟ್ರ್ಯಾಕ್ಟರ್‌ನಲ್ಲಿ ನೀರುಣಿಸುವ ರೈತ

KannadaprabhaNewsNetwork | Published : Jun 10, 2025 11:17 AM

ತಾಲೂಕಿನ ಶಿವಪುರದಿಂದ ಗುಜನೂರು ಕಡೆಗೆ ಸಂಪರ್ಕ ಕಲ್ಪಿಸುವ 11 ಕೆವಿ ವಿದ್ಯುತ್‌ ತಂತಿ ಹರಿದಿದೆ. ಇದರಿಂದ ಕೊಳವೆ ಬಾವಿಗೆ ವಿದ್ಯುತ್‌ ಸಂಪರ್ಕವಿಲ್ಲ, ವರ್ಷ ಉರುಳಿದರೂ ಜೆಸ್ಕಾಂ ಅಧಿಕಾರಿಗಳು ದುರಸ್ತಿ ಮಾಡಿಲ್ಲ, ಇದರಿಂದ ಅಡಿಕೆ ಸಸಿಗಳಿಗೆ ಟ್ರ್ಯಾಕ್ಟರ್‌ ಮೂಲಕ ನೀರು ತಂದು ಹಾಕುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತಾಲೂಕಿನ ಶಿವಪುರದಿಂದ ಗುಜನೂರು ಕಡೆಗೆ ಸಂಪರ್ಕ ಕಲ್ಪಿಸುವ 11 ಕೆವಿ ವಿದ್ಯುತ್‌ ತಂತಿ ಹರಿದಿದೆ. ಇದರಿಂದ ಕೊಳವೆ ಬಾವಿಗೆ ವಿದ್ಯುತ್‌ ಸಂಪರ್ಕವಿಲ್ಲ, ವರ್ಷ ಉರುಳಿದರೂ ಜೆಸ್ಕಾಂ ಅಧಿಕಾರಿಗಳು ದುರಸ್ತಿ ಮಾಡಿಲ್ಲ, ಇದರಿಂದ ಅಡಿಕೆ ಸಸಿಗಳಿಗೆ ಟ್ರ್ಯಾಕ್ಟರ್‌ ಮೂಲಕ ನೀರು ತಂದು ಹಾಕುತ್ತಿದ್ದಾರೆ.

ತಾಲೂಕಿನ ಮೀರಾಕೂರನಹಳ್ಳಿ ಗ್ರಾಮದ ರೈತ ಹಣ್ಣಿ ಶೇಖಪ್ಪ ಎಂಬ ರೈತ, ತನ್ನ 5 ಎಕರೆ ಜಮೀನಿನಲ್ಲಿ ಅಡಿಕೆ ಸಸಿ ನಾಟಿ ಮಾಡಿದ್ದಾರೆ. ಜಮೀನಿನಲ್ಲಿ ಕೊಳವೆ ನೀರು ನೆಟ್ಟಿಕೊಂಡು ಬಹುವಾರ್ಷಿಕ ಬೆಳೆ ಬೆಳೆಯುತ್ತಿದ್ದಾರೆ. ಆದರೆ ಕೊಳವೆ ಬಾವಿಗೆ ಕಳೆದ ಒಂದು ವರ್ಷದಿಂದ 11 ಕೆವಿ ವಿದ್ಯುತ್‌ ಸಂಪರ್ಕ ದುರಸ್ತಿಗೆ ಬಂದರೂ, ಜೆಸ್ಕಾಂ ಅಧಿಕಾರಿಗಳ ಇತ್ತ ಕಡೆಗೆ ತಲೆ ಹಾಕಿಲ್ಲ. ರೈತರು ಕೇಳಿದಾಗ ಕ್ರಿಯಾ ಯೋಜನೆ ಮಾಡಬೇಕು, ಅನುದಾನ ಬಂದಿಲ್ಲ ಹೀಗೆ ಸಾಲು ಸಾಲು ನೆಪಗಳನ್ನು ಹೇಳುತ್ತಿದ್ದಾರೆ. ವಿದ್ಯುತ್‌ ತಂತಿ ದುರಸ್ತಿ ಇಲ್ಲದ ಕಾರಣ ರೈತರ ಬೆಳೆಗಳು ಒಣಗುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೋಸಿ ಹೋಗಿರುವ ರೈತರು, ತಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಟ್ರ್ಯಾಕ್ಟರ್‌ನಲ್ಲಿ ನೀರು ತಂದು ಬೆಳೆಗಳಿಗೆ ನೀರುಣಿಸುತ್ತಿದ್ದಾರೆ.

ಒತ್ತಾಯ:ಶಿವಪುರದಿಂದ ಗುಜನೂರು ಗ್ರಾಮದ ರೈತರ ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ 11 ಕೆವಿ ವಿದ್ಯುತ್‌ ತಂತಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಹೊಸಮನಿ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಹೊಳಗುಂದಿ ಶಿವರಾಜ ಒತ್ತಾಯಿಸಿದ್ದಾರೆ.ರೈತರ ಜಮೀನುಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, 11 ಕೆವಿ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾರ್ಯ ವಾರದೊಳಗೆ ಪೂರ್ಣಗೊಳ್ಳದಿದ್ದರೇ ಜೆಸ್ಕಾಂ ಕಚೇರಿಯ ಮುಂದೆ ಧರಣಿ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಜೆಸ್ಕಾಂ ಕಚೇರಿಗೆ ವಿದ್ಯುತ್‌ ದುರಸ್ತಿ ಮಾಡಿಸಿ ಎಂದು ರೈತರು ಮನವಿ ಸಲ್ಲಿಸಿದ್ದರೂ, ಈ ವರೆಗೂ ಅಧಿಕಾರಿಗಳು ಅತ್ತ ಗಮನ ಹರಿಸಿಲ್ಲ, ರೈತರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ತಾತ್ಸಾರ ಮಾಡುತ್ತಿದ್ದಾರೆ. ಇಲಾಖೆ ವರ್ತನೆ ಇದೇ ರೀತಿ ಮುಂದುವರೆದರೇ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಸಂಘದ ಅಧ್ಯಕ್ಷ ಹೊಸಮನಿ ಸಿದ್ದಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಶಿವಪುರದಿಂದ ಗುಜನೂರಿಗೆ ಸಂಪರ್ಕ ಕಲ್ಪಿಸುವ 11 ಕೆವಿ ವಿದ್ಯುತ್‌ ಸಂಪರ್ಕ ಕಾಮಗಾರಿ ಕುರಿತು. ಕ್ರಿಯಾ ಯೋಜನೆ ಮಂಜೂರಾಗಿದೆ. ಶೀಘ್ರದಲ್ಲೇ ಕಾಮಗಾರಿ ಮಾಡಿ ರೈತರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಜೆಸ್ಕಾಂ ಅಧಿಕಾರಿ ರಾಜಶೇಖರ ಹೇಳಿದರು.