ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರದ ವತಿಯಿಂದಲ್ಲೇ ಡಿ.೨೩ ರಂದು ರೈತ ದಿನಾಚರಣೆ ಆಚರಿಸಲು ಅಧಿವೇಶನದಲ್ಲಿ ಪ್ರಸ್ತಾಪಿಸಿ ಜಾರಿ ಮಾಡಲು ಸರಕಾರವನ್ನು ಒತ್ತಾಯಿಸಲಾಗುತ್ತದೆ, ರೈತ ಸಂಘಟನೆಗಳ ಕೂಗು ಇದಕ್ಕೆ ಹೆಚ್ಚಾಗಬೇಕು ಎಂದು ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ತಿಳಿಸಿದರು.ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕರುನಾಡ ರೈತ ಸಂಘದಿಂದ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ರೈತ, ಕೂಲಿ ಕಾರ್ಮಿಕರು ಶೇ.೭೫ ರಷ್ಟಿದ್ದಾರೆ, ಯಾವುದೇ ರಾಜ್ಯವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಇದುವರೆಗೂ ರೈತ ದಿನಾಚರಣೆ ಇಲ್ಲಿವರೆಗೆ ಆಚರಿಸಿಲ್ಲ. ಎಲ್ಲಾ ಆಚರಣೆಗಳನ್ನು ಆಚರಿಸುವ ಸರಕಾರಗಳು, ರೈತ ದಿನಾಚರಣೆಗೆ ಯಾಕೆ ನಿರ್ಲಕ್ಷ್ಯ ತೋರಿದ್ದಾರೆ, ಸರ್ಕಾರದ ಮೂಲಕವೇ ಆಚರಿಸಲು ಕ್ರಮ ವಹಿಸಬೇಕು ಎಂದರು.ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ
ರೈತರಿಗೆ ಸರ್ಕಾರ ನೆರವಾಗಲಿ
ಚಿತ್ರದುರ್ಗ ಜಿಲ್ಲೆಯ ಮುರುಗಮಠ ಮಠದ ಡಾ.ಬಸವಪ್ರಭು ಮಾತನಾಡಿ, ದೇಶದಲ್ಲಿ ತ್ರಿಮೂರ್ತಿಗಳಾದ ರೈತರು, ಸೈನಿಕರು, ಹಾಗೂ ಶಿಕ್ಷಕರು ಅವರ ಉದ್ದಾರ ಮಾಡುವುದು ಆಳುವ ಸರಕಾರದ ಜವಾಬ್ದಾರಿಯಾಗಬೇಕು, ರೈತರ ಕಾಯಕವು ಸಮಾಜದಲ್ಲಿ ಮೋಸ, ವಂಚನೆ ಇಲ್ಲದೇ, ಪ್ರಾಮಾಣಿಕ ವಾಗಿದ್ದು ಇಂತಹ ಕಾಯಕಕ್ಕೆ ನಾವು ಎಲ್ಲರೂ ಬೆಂಬಲಿಸುವಂತೆ ಮನವಿ ಮಾಡಿದರು.ಸಂಘಟನೆಯ ರಾಜ್ಯ ಅಧ್ಯಕ್ಷ ಡಾ.ಜಿ.ಸಿ.ನಾರಾಯಣಸ್ವಾಮಿ, ಸಂಸ್ಥಾಪಕ ಅಧ್ಯಕ್ಷ ಗೋಪಾಲಯ್ಯ, ಮುಖಂಡರಾದ ರಮೇಶ್, ರಾಜಪ್ಪ, ರವಿಕುಮಾರ್, ಅಪ್ಪಾ ಸಾಹೇಬ್ ಬುಗಡೆ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ತೋಟಗಾರಿಕೆ ಇಲಾಖೆಯ ಪರಮೇಶ್, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ವಿಜಯಲಕ್ಷ್ಮಿ ಇದ್ದರು.