ಕೊಪ್ಪಳ: ಬಲ್ದೋಟಾ ಅಧೀನದಲ್ಲಿರುವ ಬಸಾಪೂರ ಕೆರೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ನಗರದ ಹೊರವಲಯದ ಹೆದ್ದಾರಿಯಲ್ಲಿರುವ ಬಲ್ಡೋಟಾ ಕಾರ್ಖಾನೆ ಮುಂಭಾಗದಲ್ಲಿ ರೈತರಿಂದ ಜಾನುವಾರು ಹಾಗೂ ಕುರಿಗಳೊಂದಿಗೆ ಮುತ್ತಿಗೆ ಯತ್ನ ನಡೆಯಿತು.
ಪ್ರವೇಶಕ್ಕೆ ಯತ್ನ
ಬಲ್ಡೋಟಾ ಕಾರ್ಖಾನೆಯ ಮುಂಭಾಗದಿಂದ ಕೆರೆಯೊಳಗೆ ಹೋಗಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಅಡ್ಡಗಟ್ಟಿ ತಡೆದರು. ಇದರಿಂದ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಕಾರ್ಖಾನೆಯೊಳಗೆ ಜಾನುವಾರುಗಳೊಂದಿಗೆ ನುಗ್ಗಲು ಪ್ರಯತ್ನಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಲ್ಡೋಟಾ ಸುಪರ್ದಿಯಲ್ಲಿರುವ ಬಸಾಪೂರ ಕೆರೆಯೊಳಗೆ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಹೋರಾಟಗಾರರನ್ನು ಪೊಲೀಸರು ತಡೆದರು. ಕೊನೆಗೆ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಸ್ಥಳಕ್ಕಾಗಮಿಸಿ, ಹೋರಾಟಗಾರರ ಮನವೊಲಿಸುವ ಪ್ರಯತ್ನ ಮಾಡಿದರು.ಪೊಲೀಸರಿಂದ ನೋಟಿಸ್ರೈತರು ಜಾನುವಾರುಗಳೊಂದಿಗೆ ಬಲ್ಡೋಟಾ ಕಾರ್ಖಾನೆಗೆ ಮುತ್ತಿಗೆ ಹಾಕಲು ಪೊಲೀಸ್ ಇಲಾಖೆ ಅನುಮತಿ ಕೊಟ್ಟಿರಲಿಲ್ಲ. ಈ ವಿಚಾರದಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡಬೇಕು. ಅದನ್ನು ಬಿಟ್ಟು ಮುತ್ತಿಗೆ ಹಾಕುವ ಕ್ರಮ ಸರಿಯಲ್ಲ ಎಂದು ನಗರ ಠಾಣೆಯ ಪೊಲೀಸರು ಹೋರಾಟಕ್ಕೂ ಮುನ್ನವೇ ಹೋರಾಟಗಾರರಿಗೆ ನೋಟಿಸ್ ಸಹ ಜಾರಿ ಮಾಡಿದ್ದರು. ಇದು, ಕೂಡ ವಿವಾದಕ್ಕೆ ಕಾರಣಕ್ಕಾಗಿ ಪೊಲೀಸ್ ಇಲಾಖೆಯ ನೋಟಿಸ್ ಗೆ ಜಗ್ಗದೇ ಹೋರಾಟಗಾರರಿಂದ ಕಾರ್ಖಾನೆಗೆ ಮುತ್ತಿಗೆ ಹಾಕುವ ಯತ್ನವು ನಡೆಯಿತು.ತಪ್ಪು ವರದಿ ನೀಡಿದ ಅಧಿಕಾರಿ: ಶಾಸಕ ಪುಟ್ಟಣ್ಣಯ್ಯ ಆಕ್ರೋಶ
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಹೈಕೋರ್ಟ್ ಆದೇಶವನ್ನು ಬಲ್ದೋಟಾ ಕಂಪನಿ ಉಲ್ಲಂಘಿಸಿ, ಬಸಾಪೂರ ಕೆರೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿರುವ ಕ್ರಮ ಸರಿಯಲ್ಲ. ಇನ್ನಾದರೂ ಈ ವಿಚಾರದಲ್ಲಿ ಜಿಲ್ಲಾಡಳಿತ ಸ್ಪಷ್ಟ ಭರವಸೆಯನ್ನು ರೈತರಿಗೆ ನೀಡಬೇಕು. ಕೆರೆಯನ್ನು ರೈತರಿಗೆ ಕೊಡುವವರೆಗೂ ಹೋರಾಟ ಮುಂದುವರಿಯುತ್ತದೆ. ಶಾಂತಿಯುತ ಹೋರಾಟಕ್ಕೆ ನಾವು ಬದ್ಧರಾಗಿದ್ದೇವೆ. ರೈತರಿಗೆ ನೋಟಿಸ್ ನೀಡಿ ರೌಡಿಶೀಟ್ ತೆರೆಯುವ ಬೆದರಿಕೆಗಳನ್ನು ಪೊಲೀಸ್ ಇಲಾಖೆ ನಿಲ್ಲಿಸಬೇಕು” ಎಂದು ಆಗ್ರಹಿಸಿದರು.ಒತ್ತುವರಿ ವರದಿ ಸರ್ಕಾರಕ್ಕೆ ಸಲ್ಲಿಕೆ: ಡಿಸಿ
ಈ ವೇಳೆ ರೈತ ಸಂಘದ ಭೀಮಸೇನ ಕಲಕೇರಿ, ಜೆ.ಎಂ. ವೀರಸಂಗಯ್ಯ, ಮುಕ್ಕಣ್ಣ ಮೇಸ್ತಿ, ಯಮನೂರಪ್ಪ ಹಾಲಹಳ್ಳಿ, ಗುಡದಪ್ಪ ಸಂಗಟಿ, ಫಕೀರಪ್ಪ ಬಂಗ್ಲಿ, ಗುಡದಪ್ಪ ಗಿಣಿಗೇರಿ ಸೇರಿದಂತೆ ಇತರರು ಇದ್ದರು.