ರೈತರು ಆರೋಗ್ಯ ಬಗ್ಗೆ ಹೆಚ್ಚು ಗಮನ ನೀಡಬೇಕು

KannadaprabhaNewsNetwork |  
Published : Jan 10, 2025, 12:50 AM IST
9ಎಚ್ಎಸ್ಎನ್3 : ಹಳೇಬೀಡು ಸಮೀಪ ದ್ಯಾವಪ್ಪನಹಳ್ಳಿ ಗ್ರಾಮದಲ್ಲಿ ಮಹಾಲಕ್ಷ್ಮಿ ಮಂಜಪ್ಪ  ಆಸ್ಪತೆ- ಹಾಸನ, ತೋಟಗಾರಿಕಾ ಕಾಲೇಜು, ಮೂಡಿಗೆರೆ ಸ್ಥಳೀಯ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಟಾಟಸಿದ ಗಣ್ಯರು. | Kannada Prabha

ಸಾರಾಂಶ

ಗ್ರಾಮಾಂತರ ಪ್ರದೇಶದಲ್ಲಿ ಪ್ರತಿ ೩-೬ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಅಗತ್ಯವಿದ್ದು, ಈ ಶಿಬಿರದ ಪ್ರಯೋಜನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ ಎಂದು ಮಹಾಲಕ್ಷ್ಮಿ ಮಂಜಪ್ಪ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಉಮೇಶ್ ತಿಳಿಸಿದರು. ರೈತರು ನಿಮ್ಮ ಆರೋಗ್ಯ ಬಗ್ಗೆ ಹೆಚ್ಚು ಗಮನ ನೀಡಬೇಕು. ಸಾಮಾನ್ಯವಾಗಿ ರಕ್ತದೊತ್ತಡ, ಮಧುಮೇಹ, ಇಸಿಜಿ, ಕಣ್ಣಿನ ಪರೀಕ್ಷೆ ಸೇರಿದಂತೆ ವಿವಿಧ ತಪಾಸಣೆಗಳನ್ನು ಮಾಡಿಸಿಕೊಂಡರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಗ್ರಾಮಾಂತರ ಪ್ರದೇಶದಲ್ಲಿ ಪ್ರತಿ ೩-೬ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಅಗತ್ಯವಿದ್ದು, ಈ ಶಿಬಿರದ ಪ್ರಯೋಜನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ ಎಂದು ಮಹಾಲಕ್ಷ್ಮಿ ಮಂಜಪ್ಪ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಉಮೇಶ್ ತಿಳಿಸಿದರು.

ಹಳೇಬೀಡು ಸಮೀಪದ ದ್ಯಾವಪ್ಪನಹಳ್ಳಿ ಗ್ರಾಮದಲ್ಲಿ ಹಾಸನದ ಮಹಾಲಕ್ಷ್ಮಿ ಮಂಜಪ್ಪ ಆಸ್ಪತೆ, ತೋಟಗಾರಿಕಾ ಕಾಲೇಜು, ಮೂಡಿಗೆರೆ ಸ್ಥಳೀಯ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಟಾಟಸಿ ಮಾತನಾಡುತ್ತ, ನಮ್ಮ ಆಸ್ಪತ್ರೆಯಿಂದ ೭೦ ಉಚಿತ ಶಿಬಿರವನ್ನು ಆಯೋಜಿಸಲಾಗಿದ್ದು, ನನಗೆ ಸಂತೋಷವಾಗಿದೆ. ರೈತರು ನಿಮ್ಮ ಆರೋಗ್ಯ ಬಗ್ಗೆ ಹೆಚ್ಚು ಗಮನ ನೀಡಬೇಕು. ಸಾಮಾನ್ಯವಾಗಿ ರಕ್ತದೊತ್ತಡ, ಮಧುಮೇಹ, ಇಸಿಜಿ, ಕಣ್ಣಿನ ಪರೀಕ್ಷೆ ಸೇರಿದಂತೆ ವಿವಿಧ ತಪಾಸಣೆಗಳನ್ನು ಮಾಡಿಸಿಕೊಂಡರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.

ಪತ್ರಕರ್ತ ರಘುನಾಥ್ ಮಾತನಾಡುತ್ತ, "ವೈದ್ಯೋ ನಾರಾಯಣೋ ಹರಿ " ಎಂಬ ಮಾತಿನ ಮಹತ್ವ ಇಂದು ಪ್ರತೀತಿಯಾಗಿದೆ. ಇದು ನಿಸ್ವಾರ್ಥ ಸೇವೆಯ ಮಾದರಿ ಎಂದು ಶ್ಲಾಘಿಸಿದರು.

ಗ್ರಾಮ ಹಿರಿಯ ಮತ್ತು ಮುಖಂಡ ಡಿ.ಎಲ್.ಸೋಮಶೇಖರ್‌ ಮಾತನಾಡುತ್ತ, ಆರೋಗ್ಯ ಜೀವನದ ದೈನಂದಿನ ಅವಿಭಾಜ್ಯ ಭಾಗ. ವೈದ್ಯರು ದೇವರಷ್ಟೇ ಮಹತ್ವ ಹೊಂದಿದ್ದಾರೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಗ್ರಾಮ ಪಂಚಾಯತ್ ಸದಸ್ಯ ದೇವರಾಜ ಮತ್ತು ಉಪಾಧ್ಯಕ್ಷ ಪ್ರಕಾಶ್ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿ ಶ್ಲಾಘಿಸಿದರ. ತೋಟಗಾರಿಕಾ ಕಾಲೇಜಿನ ಡಾ. ಭರತ್ ಕುಮಾರ್ ಟಿ.ಪಿ. ( ಸಂಯೋಜಕ) ಮತ್ತು ಡಾ. ಮಲ್ಲಿಕಾ ಕೆ. (ಕೃಷಿ ಎಂಜಿನಿಯರಿಂಗ್ ಪ್ರಾಧ್ಯಾಪಕಿ) ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಲಕ್ಷ್ಮಿ( ನರಸಿಂಗ್‌ ಸೂಪರಿಂಟೆಂಡೆಂಟ್) ಅವರು ತಪಾಸಣೆಯಲ್ಲಿ ಭಾಗವಹಿಸಿ, ಗ್ರಾಮಸ್ಥರಿಗೆ ಆರೋಗ್ಯದ ಪ್ರಾಮುಖ್ಯತೆಯನ್ನು ವಿವರಿಸಿದರು.

ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೩ರವರೆಗೆ ನಡೆದ ಈ ಶಿಬಿರದಲ್ಲಿ ೩೦೦ ಹೆಚ್ಚು ಗ್ರಾಮಸ್ಥರಿಗೆ ಆರೋಗ್ಯದ ಮಹತ್ವವನ್ನು ತೋರಿಸುವಲ್ಲಿ ಯಶಸ್ವಿಯಾಯಿತು. ಆರೋಗ್ಯವೇ ನಿಜವಾದ ಸಂಪತ್ತು ಎಂಬ ಸಂದೇಶ ಈ ಕಾರ್ಯಕ್ರಮದ ಮೂಲಕ ಪ್ರತಿಫಲಿತವಾಯಿತು.

ಮಾಯಗೊಂಡನಹಳ್ಳಿ, ಚಟಚಟನಹಳ್ಳಿ, ಕೆಂಪೇಗೌಡನಹಳ್ಳಿ, ದ್ಯಾವಪ್ಪನಹಳ್ಳಿ, ಲಿಂಗಪನಕೊಪ್ಪಲು, ನಂಜಾಪುರ, ಅಲೆಮಾಚೇನಹಳ್ಳಿ, ಮೊಹಮ್ಮದಪುರ, ಕೋಡಿಕೊಪ್ಪಲು, ಹಜ್ಜೆಗನಹಳ್ಳಿ, ಮತ್ತು ಮತ್ತಿಘಟ್ಟ ಸೇರಿದಂತೆ ೧೧ ಗ್ರಾಮಗಳಿಗೆ ಕಾಲೇಜು ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ