ಕನ್ನಡಪ್ರಭ ವಾರ್ತೆ ಪಿರಿಯಪಟ್ಟಣ
ತಾಲೂಕಿನ ಸೆಸ್ಕ್ ಕಚೇರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗುರು ಬಸವರಾಜಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ಹಳ್ಳಿಗಳಲ್ಲಿ ವಿದ್ಯುತ್ ತಂತಿಗಳನ್ನು ಹಾಗೂ ವಿದ್ಯುತ್ ಕಂಬಗಳನ್ನು ಹಾಕಿ, ಹಲವಾರು ವರ್ಷಗಳೇ ಕಳೆದಿದ್ದು, ಹಾಗಾಗಿ ಆ ತಂತಿಗಳು ತುಂಡಾಗಿ ಬಿದ್ದು, ಜೀವ ಹಾನಿಯಾಗುತ್ತಿದ್ದು, ಅದನ್ನು ತಕ್ಷಣ ಸರಿಪಡಿಸಬೇಕು ಹಾಗೂ ಶಿಥಿಲಗೊಂಡಿರುವ ವಿದ್ಯುತ್ ಕಂಬಗಳನ್ನು ತಕ್ಷಣ ಬದಲಾಯಿಸಿ ಕೊಡಬೇಕು, ಇದರಿಂದ ರೈತರಿಗೆ ಹಾಗೂ ಹಳ್ಳಿಯ ಜನರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ಸಹಾಯಕ ಕಾರ್ಯಾಪಾಲಕ ಎಂಜಿನಿಯರ್ ಗುರು, ಬಸವರಾಜಸ್ವಾಮಿ ಮನವಿ ಪತ್ರ ಸ್ವೀಕರಿಸಿ, ರೈತರಿಗೆ ಒಳ್ಳೆಯದನ್ನು ಮಾಡಲು ಎಲ್ಲಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜಿಲ್ಲಾ ರೈತ ಸಂಘದ ಜಿಲ್ಲಾ ಅಧ್ಯಕ್ಷ ಜಿ. ಲೋಕೇಶ್, ಸಂಚಾಲಕ ಅರುಣ್ ಕುಮಾರ್. ಅಭಿಲಾಶ್. ಹರೀಶ್. ಮಹದೇವ್, ಎಚ್.ಎನ್. ಮಹದೇವ್, ಬಸವರಾಜು, ಮುತ್ತುರಾಜು, ಅನಿಲು, ರಘು ಇದ್ದರು.