ಕನ್ನಡಪ್ರಭ ವಾರ್ತೆ ಬೀದರ್
ವಿಟಿಎಸ್ ಸಭಾಂಗಣದಲ್ಲಿ ವಚನ ಚಾರಿಟೇಬಲ್ ಸೊಸೈಟಿ ಹಮ್ಮಿಕೊಂಡಿದ್ದ ಒಕ್ಕಲಿಗ ಮುದ್ದಣ್ಣನವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಅನಿವಾರ್ಯ. ಕೃಷಿ ಬೆಳವಣಿಗೆಯಾಗದ ಹೊರತು ದೇಶಾಭಿವೃದ್ಧಿ ಆಗಲಾರದು ನನ್ನ ಎಲ್ಲಾ ಚಟುವಟಿಕೆಗಳಿಗಿಂತ ಕೃಷಿ ಕಾಯಕ ಮುಖ್ಯವೆಂದು ನುಡಿದರು.
ಬೀದರ್ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳಾದ ಡಾ. ಮಲ್ಲಿಕಾರ್ಜುನ ನಿಂಗದಳ್ಳಿ ಮಾತನಾಡಿ, ಒಕ್ಕಲಿಗ ಮುದ್ದಣ್ಣ ಬಿಜಾಪೂರ ಜಿಲ್ಲೆಯ ಜೋಳದ ಹಾಳಿಯವರು. ಬೆಳೆದ ಬೆಳೆಗೆ ರಾಜರಿಗೆ ಕರ ಕೊಡುವುದು ಸಹಜ. ಹೆಚ್ಚಿಗೆ ಬೆಳೆದ ಬೆಳೆಗೆ ಕರ ನಿರಾಕರಿಸಿ ದಾಸೋಹ ಕೊಡಮಾಡಿದ ಎದೆಗಾರಿಕೆಯ ಶರಣರಿವರು. ಲೌಕಿಕ-ಪಾರಮಾರ್ಥಿಕದಲ್ಲಿ ಶಾಂತಿ ನೆಮ್ಮದಿ ಕಂಡ 12ನೇ ಶತಮಾನದ ಶರಣರು ಇವರಾಗಿದ್ದರು ಎಂದರು.ಕೃಷಿ ಕಾಯಕ ಗೌರವ ಸನ್ಮಾನವನ್ನು ಸ್ವೀಕರಿಸಿದ ಮನ್ನಳ್ಳಿ ಆದರ್ಶ ಸಾವಯವ ರೈತರಾದ ಭೀಮರೆಡ್ಡಿ ಮಾಣಿಕರೆಡ್ಡಿ ಕೊತ್ತ ಮಾತನಾಡಿ, ಇಂದು ಸಾವಯವ ಕೃಷಿ ಮಾಡುವುದು ಕಷ್ಟಕರ ಕಾರ್ಯ. ಒಂದಡೆ ಪರಿಸರ ಇನ್ನೊಂದಡೆ ಮಾರುಕಟ್ಟೆ ತೊಂದರೆಯಿಂದಾಗಿ ನಮ್ಮಂಥವರ ಪರಿಸ್ಥಿತಿ ಕಗ್ಗಂಟಾಗಿದೆ. ಆದರೂ ಕೃಷಿ ಕಾಯಕ ಶ್ರೇಷ್ಠ ಕಾರ್ಯ. ಇದರಿಂದ ಆರ್ಥಿಕವಾಗಿ ಸಮೃದ್ಧವಾಗದಿದ್ದರೂ ಸಂಸಾರ ಮಾತ್ರ ಸಂತೃಪ್ತಿಯಿಂದ ಮುನ್ನಡೆಸಬಹುದಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ವಿರೂಪಾಕ್ಷ ದೇವರು ವಚನ ಪ್ರಾರ್ಥನೆ ಮಾಡಿದರೆ, ಶಂಕರೆಪ್ಪಸಜ್ಜನಶೆಟ್ಟಿ ಬೂದೆರಾ ಸ್ವಾಗತಿಸಿ ರೇವಣಪ್ಪ ಮೂಲಗೆ ನಿರೂಪಿಸಿದರೆ ವೀರಪ್ಪ ಜೀರ್ಗೆ ವಂದಿಸಿದರು.