ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಪರಮಪೂಜ್ಯ ಶ್ರೀಸಿದ್ಧೇಶ್ವರ ಮಹಾಸ್ವಾಮಿಗಳ ಗುರುನಮನ ಮಹೋತ್ಸವ ಅಂಗವಾಗಿ ಮಹಿಳೆ ಮತ್ತು ಸಂಸ್ಕೃತಿ ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ 5ನೇ ಗೋಷ್ಠಿಯಲ್ಲಿ ಅವರು ಮಾತನಾಡಿ, ನಮ್ಮ ಮನೆಯಲ್ಲಿ ಹಬ್ಬ ಹರಿದಿನಗಳಿದ್ದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ? ಯಾರು ಮುಂಜಾನೆ ಎದ್ದು ಮನೆಯನ್ನೆಲ್ಲ ಸಿಂಗರಿಸುತ್ತಾರೆ?. ಹೀಗಿದ್ದಾಗ ನಮ್ಮ ಸಂಸ್ಕೃತಿಯನ್ನು ಯಾರು ಪೀಳಿಗೆಯಿಂದ ಪೀಳಿಗೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಎನ್ನುವುದನ್ನು ನಾವು ಯೋಚಿಸಬೇಕಿದೆ.
ನಮ್ಮ ತಾಯಿ ಕಲಿಸಿಕೊಟ್ಟಂತಹ ಸಂಸ್ಕೃತಿ ನಮ್ಮಅಜ್ಜಿಕಟ್ಟಿ ಕೊಟ್ಟ ಅನುಭವ ಇಂದು ನಾನು ನಿಮ್ಮ ಮುಂದೆ ಬಂದು ನಿಂತು ಮಾತನಾಡುತ್ತಿದ್ದೇನೆ. ಮನೆಯಿಂದಲೇ ನಮ್ಮಗಟ್ಟಿತನ ಬೆಳೆಯುತ್ತದೆ. ಹೆಣ್ಣು ಭೂಮಿಯ ಮೇಲಿರುವ ಅತ್ಯಂತ ಧೈರ್ಯಶಾಲಿ ಜೀವಿ. ಅವಳು ಎಷ್ಟೇ ಕಷ್ಟ ಬರಲಿ ಕುಗ್ಗದೇ ಮುನ್ನಡೆಯುತ್ತಾಳೆ. ಧೈರ್ಯವಾಗಿ ಎಲ್ಲವನ್ನು ಎದುರಿಸುತ್ತಾಳೆ. ಆದರೆ, ಅಂತಹ ಹೆಣ್ಣಿಗೆ ಇಂದಿಗೂ ಸರಿ ಸಮಾನವಾದ ಬದುಕು ಮತ್ತು ಹಕ್ಕು ಎರಡು ಸಿಗುತ್ತಿಲ್ಲ. ಇದು ಖೇದಕರ ಸಂಗತಿ ಎಂದರು.ನಮ್ಮಲ್ಲಿರುವ ವಿಚಾರಧಾರೆಗಳು ಬದಲಾಗಬೇಕಿದೆ. ಹೆಣ್ಣು ಎಲ್ಲಕ್ಕಿಂತ ಕೀಳು ಎಂಬ ಭಾವನೆ ಮಾತುಗಳು ದೂರಾಗಬೇಕಿದೆ. ಈಗಿಂದಲೇ ನಾವು ನಮ್ಮ ಮಕ್ಕಳಿಗೆ ನೈತಿಕತೆಯ ಬಗ್ಗೆ ತಿಳಿಸಬೇಕು. ಅವರಿಗೆ ಜೀವನದ ಮೌಲ್ಯಗಳನ್ನು ತಿಳಿಸಬೇಕು. ಸಮಾನತೆಯ ಬಗ್ಗೆ ಅರಿವು ಮೂಡಿಸಬೇಕು. ಅವರನ್ನು ಸುಸಂಸ್ಕೃತರನ್ನಾಗಿ ಮಾಡೋಣ. ಹೆಣ್ಣು-ಗಂಡಿನ ನಡುವೆ ಅಂತರವಿಲ್ಲ ಎಂಬುವುದನ್ನು ಕಲಿಸೋಣ. ನಮ್ಮ ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡೋಣ. ಅದರ ಜೊತೆ ನಾವು ಸದಾಕಾಲ ಸ್ವಾಭಿಮಾನಿಗಳಾಗಿ ಬದುಕೋಣ ಎಂದರು.
ಅವರನ್ನು ದೂರದಿಂದ ನೋಡಿ ಆನಂದ ಪಡುವುದೇ ನನ್ನಲ್ಲಿ ಒಂದುಧನ್ಯತಾ ಭಾವವನ್ನು ಮೂಡಿಸುತ್ತಿತ್ತು. ಅವರು ಯಾವಾಗಲೂ ನನಗೆ ಮಾತನಾಡು ಎಂದಾಗ ನಾನು ಇಲ್ಲಅಪ್ಪ ನಾನು ನಿಮ್ಮ ಮಾತುಗಳನ್ನು ಕೇಳಲು ಬಂದವಳು ಎಂದು ಅವರ ಮಾತು ಕೇಳಿ, ಅವರ ಪ್ರೀತಿ ಪಡೆದು, ವಾತ್ಸಲ್ಯ ಪಡೆದು ಮರುಳುತ್ತಿದ್ದೆ. ಆದರೆ, ಇಂದು ಅವರ ಬಗ್ಗೆ ಬಹಳಷ್ಟು ಮಾತನಾಡುವಂತೆ ಅಪ್ಪನವರು ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೂಡಲಸಂಗಮ ಬಸವಧರ್ಮ ಪೀಠದ ಪೂಜ್ಯ ಮಾತಾಜಗದ್ಗುರು ಗಂಗಾ ಮಾತಾಜಿ ಆಶೀರ್ವಚನ ನೀಡಿ, ಗಂಡು ಹೆಣ್ಣು ಇಬ್ಬರೂ ಒಂದು ಬಂಡಿಯ ಎರಡು ಚಕ್ರವಿದ್ದಂತೆ. ಇಬ್ಬರೂ ಸಮಾನವಾಗಿ ಸಾಗಿದಾಗ ಮಾತ್ರ ಸಂಸಾರದ ಬಂಡಿ ಸಾಗಲು ಸಾಧ್ಯ. ಸತಿ-ಪತಿಯರ ಭಕ್ತಿ ದೇವರಿಗೆ ಅಮೃತವಿದ್ದಂತೆ. ಇಬ್ಬರೂ ಸದಾ ಭಕ್ತಿಪೂರ್ವಕರಾಗಿರಬೇಕು ಎಂದರು.
---
ಹೆಣ್ಣು ಸಂಸಾರದ ಕಣ್ಣುಇದ್ದಂತೆ. ಅವಳಿಂದಲೇ ಒಂದು ಕುಟುಂಬ, ಅವಳೇ ಸಂಸ್ಕೃತಿಯ ಬಿಂಬ. ಇವತ್ತು 7-8 ಸಾವಿರ ಜನ ಇಂದು ಜ್ಞಾನಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ನಿಮ್ಮೆಲ್ಲರಿಗೂ ಅಪ್ಪನವರ ಮೇಲಿದ್ದ ಪ್ರೀತಿಗೆ ಸಾಕ್ಷಿ.