ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬುಧವಾರ ಬನಹಟ್ಟಿಯ ಶ್ರೀಕಾಡಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ನೇಕಾರರೊಡನೆ ಸಭೆ ನಡೆಸಿ ಸ್ಪಷ್ಟನೆ ನೀಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಈ ಹಿಂದೆ ತೇರದಾಳ ಶಾಸಕ ಸಿದ್ದು ಸವದಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾಗ ಮಾಡಿದ್ದ ನೂರಾರು ಕೋಟಿ ಮೊತ್ತದ ಅವ್ಯವಹಾರ ಖಂಡಿಸಿ, ಸರ್ಕಾರ ತನಿಖೆ ನಡೆಸಲು ಆಗ್ರಹಿಸಿ ಹೋರಾಟದ ಪರಿಣಾಮ ಶಾಸಕ ಸವದಿ ಸ್ವಯಂಘೋಷಿತ ನಾಯಕರ ಬಳಸಿಕೊಂಡು ಸಂಘ ಮತ್ತು ನನ್ನ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತ ನ್ಯಾಯಯುತ ಹೋರಾಟ ಹತ್ತಿಕ್ಕಲು ಸಂಚು ನಡೆಸುತ್ತಿದ್ದಾರೆಂದು ಆರೋಪಿಸಿದ ಟಿರಕಿ ನೇಕಾರ ಹಿತಾಸಕ್ತಿ ಕಾಯಲು ಮತ್ತು ನೇಕಾರಿಕೆ ಉದ್ಯಮ ಉಳಿಸಲು ಸಂಘ ನಿರಂತರ ಹೋರಾಟಕ್ಕೆ ಬದ್ಧವಾಗಿದೆ ಎಂದು ತಿಳಿಸಿದರು. ರಾಜೇಂದ್ರ ಮಿರ್ಜಿ, ಸಂಗಪ್ಪ ಉದಗಟ್ಟಿ, ಹೊಳೆಬಸಪ್ಪ ಚಿಂಚಖಂಡಿ, ಗಂಗಪ್ಪ ಒಂಟಗೋಡಿ, ರಾಜು ನಡುವಿನಮನಿ, ರಮೆಶ ಸೊರಗಾಂವಿ, ಲಕ್ಕಪ್ಪ ಪವಾರ್, ಮಲ್ಲಯ್ಯ ಮಠಪತಿ ಸೇರಿದಂತೆ ನೂರಾರು ನೇಕಾರರು ಉಪಸ್ಥಿತರಿದ್ದರು.