ಸಾರ್ವಜನಿಕ ಗಣೇಶ ಉತ್ಸವಕ್ಕೆ ಆರ್ಥಿಕ ಸಹಾಯ

KannadaprabhaNewsNetwork | Published : Sep 7, 2024 1:38 AM

ಸಾರಾಂಶ

ಸಾರ್ವಜನಿಕ ಗಣೇಶ ಉತ್ಸವಕ್ಕೆ ಪ್ರತಿವರ್ಷದಂತೆ ಈ ವರ್ಷವು ಆರ್ಥಿಕ ಸಹಾಯ ನೀಡುವುದಾಗಿ ಶಾಸಕ ಜಗದೀಶ ಗುಡಗುಂಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಸಾರ್ವಜನಿಕ ಗಣೇಶ ಉತ್ಸವಕ್ಕೆ ಪ್ರತಿವರ್ಷದಂತೆ ಈ ವರ್ಷವು ಆರ್ಥಿಕ ಸಹಾಯ ನೀಡುವುದಾಗಿ ಶಾಸಕ ಜಗದೀಶ ಗುಡಗುಂಟಿ ತಿಳಿಸಿದರು.ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮಖಂಡಿ ನಗರ ಪ್ರದೇಶದಲ್ಲಿ ಪ್ರತಿಷ್ಠಾಪನೆಯಾಗುವ ಸಾರ್ವಜನಿಕ ಗಣಪತಿಗಳಿಗೆ ತಲಾ ₹5 ಸಾವಿರ ಮತ್ತು ಗ್ರಾಮೀಣ ಪ್ರದೇಶದ ಗಣಪತಿಗಳಿಗೆ ತಲಾ 25 ಕೆಜಿ ಸಕ್ಕರೆ ಅಥವಾ ಅಕ್ಕಿಯನ್ನು ವಿತರಿಸಲಾಗುವುದೆಂದರು.

ಸ್ವಚ್ಛ ಮತ್ತು ಸ್ಥಳಾವಕಾಶವಿರುವಲ್ಲಿ ಮಾತ್ರ ಪ್ರಸಾದದ ವ್ಯವಸ್ಥೆ ಮಾಡುವಂತೆ ಗಣೇಶೋತ್ಸವ ಸಮಿತಿಗಳಿಗೆ ಮನವಿ ಮಾಡಿದ ಅವರು ರಸ್ತೆಗಳಲ್ಲಿ ಮತ್ತು ಕಾಲುವೆ ಪಕ್ಕದಲ್ಲಿ ದೇವರ ಪ್ರಸಾದ ಮಾಡುವುದು ಬೇಡ ಅದರ ಬದಲಾಗಿ ಪ್ರತಿಭಾನ್ವಿತರಿಗೆ ಪ್ರೋತ್ಸಾಹಿಸುವ ಕೆಲಸ ಮಾಡಿರಿ ಎಂದರು.

ಬಿಜೆಪಿ ನಗರ ಅಧ್ಯಕ್ಷ ಅಜಯ ಕಡಪಟ್ಟಿ ಮಾತನಾಡಿ, ಶಾಸಕರು ಪ್ರತಿವರ್ಷದಂತೆ ಆರ್ಥಿಕ ಸಹಾಯ ನೀಡಲಿದ್ದು ಸಾರ್ವಜನಿಕ ಗಣೇಶ ಉತ್ಸವ ಸಮಿತಿ ಅವರು ಕಚೇರಿ ಸಮಯದಲ್ಲಿ ಭೇಟಿಯಾಗಿ ಆರ್ಥಿಕ ಸಹಾಯ ಪಡಯಬೇಕೆಂದರು.

ಸಾರ್ವಜನಿಕ ಗಣೇಶ ಉತ್ಸವ ಮಹಾಮಂಡಲದ ಅಧ್ಯಕ್ಷ ಸುನೀಲ ಬೋವಿ ಮಾತನಾಡಿ, ಅನ್ನ ಪ್ರಸಾದ ಮಾಡುವ ಸಮಿತಿ ಅವರು ಒಂದೇ ದಿನ ಎಲ್ಲ ಕಡೆಗಳಲ್ಲಿ ಪ್ರಸಾದ ಮಾಡದೇ ಒಂದೊಂದು ದಿನ ಒಂದು ಕಡೆ ಮಾತ್ರ ವ್ಯವಸ್ಥೆ ಮಾಡಿರಿ ಎಂದು ಮನವಿ ಮಾಡಿದರು. ಎಲ್ಲ ಸಮಿತಿಗಳಿಗೆ ಪರವಾನಿಗೆ ಕೊಡಿಸಲು ಮಹಾಮಂಡಲದಿಂದ ವ್ಯವಸ್ಥೆ ಮಾಡಲಾಗುವುದು. ರಕ್ತದಾನ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸುಂದರ ಅಲಂಕೃತ ಗಣಪತಿಗಳಿಗೆ ವಿಶೇಷ ಬಹುಮಾನ ನೀಡಲಾಗುವುದು. ಮನೆಗಳಿಗೆ ಭೇಟಿ ಕಾರ್ಯಕ್ರಮವಿದ್ದು ಅಲಂಕಾರಿಕ ಗಣೇಶಕ್ಕೆ ಬಹುಮಾನ ನೀಡಲಾಗುವುದೆಂದರು.

ತಮ್ಮ ಅಲಂಕಾರದ ಚಿತ್ರ ಮತ್ತು ವಿಡಿಯೋಗಳನ್ನು 8431765519, 7019665733,ಅಥವಾ 7019690184 ಸಂಖ್ಯೆಗೆ ಕಳುಹಿಸಬೇಕೆಂದರು.

ರಾಕೇಶ್‌ಲಾಡ್‌ ಮಾತನಾಡಿ, ಸೆ.6ರ ಒಳಗಾಗಿ ನಗರದ ಎಲ್ಲ ಮಂಡಳಿ ಅವರು ಫಾರ್ಮ್‌ಗಳನ್ನು ಪಡೆದು ಭರ್ತಿ ಮಾಡಿ ಕೊಡಬೇಕು. ನಗರದಲ್ಲಿ 108 ಮತ್ತು ಗ್ರಾಮೀಣದಲ್ಲಿ 240ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಯಾಗಲಿದೆ ಎಂದರು.

ಈ ವೇಳೆ ಗಣೇಶ ಶಿರಗಣ್ಣವರ, ಸಚಿನ ಪಟ್ಟಣ ಶೆಟ್ಟಿ, ಗಂಗಾಧರ, ಪ್ರದೀಪ ಮೆಟಗುಡ್ಡ, ಶ್ರೀಶೈಲ ರಾಮಬಳೆ, ಯೋಗಪ್ಪ ಸವದಿ, ಮಾದುಗೌಡ ಪಾಟೀಲ, ಶ್ರೀಧರ ಕಂಬಿ ಇದ್ದರು.

Share this article