ಕನ್ನಡಪ್ರಭ ವಾರ್ತೆ ಸಿಂದಗಿ: ನಾಡಿನಲ್ಲಿ ಮೊಟ್ಟಮೊದಲು ಸಾಮಾನತೆಯನ್ನು ಹುಟ್ಟು ಹಾಕಿದ ಬಸವಣ್ಣ ಕಾಯಕ ದಾಸೋಹದ ಮೂಲಕ ಸಮಾಜವನ್ನು ಪ್ರೀತಿಸಿದವರು. ಅವರ ವಚನ ಸಾಹಿತ್ಯ ಎಂದೆಂದಿಗೂ ಪ್ರಸ್ತುತ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಂಶೋಧಕ ಡಾ.ಎಂ.ಎಂ.ಪಡಶೆಟ್ಟಿ ಮಾತನಾಡಿ, ಬಸವಣ್ಣ ಈ ನಾಡಿನ ಅಸ್ಮಿತೆ. ಅವರು ಒಬ್ಬ ವಚನಕಾರ, ಸಂಶೋಧಕ, ತತ್ವಜ್ಞಾನಿ, ವಿಜ್ಞಾನಿ ಎಲ್ಲವೂ ಆಗಿದ್ದರು. ಸಮಾನತೆ, ದಾಸೋಹ, ಕಾಯಕ ಏಕದೇವೋಪಾಸನೆ, ಸಯನ್ವಯ, ಸ್ತ್ರೀಯರಿಗೆ ಗೌರವ ಮತ್ತು ಸ್ವಾತಂತ್ರ್ಯ ನೀಡಿದ ಮೊದಲ ಸಾಮಾಜಿಕ ಹರಿಕಾರರಾಗಿ ಈ ನಾಡನ್ನು ಬೆಳಸಿದವರು ಎಂದರು.
ಸ್ಥಳೀಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಾಸಕ ಅಶೋಕ ಮನಗೂಳಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿದರು. ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ, ಕ್ಷೇತ್ರಶಿಕ್ಷಣಾಧಿಕಾರಿ ಆರೀಫ ಬಿರಾದಾರ, ಸರಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ, ಗ್ರೇಡ್-2 ತಹಸೀಲ್ದಾರ ಇಂದಿರಾಬಾಯಿ ಬಳಗಾನೂರ, ಬಸವದಳದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಅರ್ಜುಣಗಿ, ಸಿದ್ದಬಸವ ಕುಂಬಾರ ಸೇರಿ ಇತರರು ಇದ್ದರು.ತಹಸೀಲ್ದಾರ ಯಟವಟ್ಟು-ವೇದಿಕೆ ಮೇಲೆ ಮಹಿಳಾ ಅಧಿಕಾರಿಗಳಿಗೆ ಕುಳಿತುಕೊಳ್ಳಲು ತಹಶೀಲ್ದಾರ ಹಿರೇಮಠ ಅವಕಾಶ ನೀಡದ ಹಿನ್ನಲೆಯಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ತಹಸೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಎಚ್ಚೆತ್ತ ತಹಸೀಲ್ದಾರ್ ಗ್ರೇಡ್-2 ತಹಶೀಲ್ದಾರ ಇಂದಿರಾಬಾಯಿ ಬಳಗಾನೂರಗೆ ವೇದಿಕೆಗೆ ಅವಕಾಶ ಕಲ್ಪಿಸಿಕೊಡಲಾಯಿತು.