ಸ್ವಚ್ಛತೆ ಇಲ್ಲದೆ ಆವಾಸ ಸ್ಥಾನವಾದ ಬಿಜಿಕೆರೆ ಗ್ರಾಮ

KannadaprabhaNewsNetwork |  
Published : Jul 22, 2024, 01:21 AM IST
ಚಿತ್ರಶೀರ್ಷಿಕೆ21mlk1ಮೊಳಕಾಲ್ಮೂರು ತಾಲೂಕಿನ ಬಿಜಿಕೆರೆ ಬಸಮೇಶ್ವರ ನಗರದಲ್ಲಿ ರಸ್ತೆಯಲ್ಲಿ ಚರಂಡಿ ನೀರು ನಿಂತಿರುವುದು.ಚಿತ್ರಶೀರ್ಷಿಕೆ21mlk2ಮೊಳಕಾಲ್ಮೂರು ತಾಲೂಕಿನ ಬಿಜಿಕೆರೆ ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಚರಂಡಿ ಇಲ್ಲದೆ ನೀರು ಕೊಚ್ಚಿಗುಂಡಿಯಂತೆ ನಿಂತಿರುವುದುಚಿತ್ರಶೀರ್ಷಿಕೆ21mlk3ಮೊಳಕಾಲ್ಮೂರು ತಾಲೂಕಿನ ಬಿಜಿಕೆರೆಯಲ್ಲಿ ಆಶಾ ಕಾರ್ಯಕರ್ತೆಯರು ಲಾರುವ ಸಮೀಕ್ಷೆ ನಡೆಸುತ್ತಿರುವುದು.ಚಿತ್ರಶೀರ್ಷಿಕೆ21mlk4ಮೊಳಕಾಲ್ಮೂರು ತಾಲೂಕಿನ ಮುತ್ತಿ ಗಾರ ಹಳ್ಳಿಯಲ್ಲಿ ಆಶಾ ಕಾರ್ಯಕರ್ತೆಯರು ಲಾರುವ ಸಮೀಕ್ಷೆ ನಡೆಸುತ್ತಿರುವುದು. | Kannada Prabha

ಸಾರಾಂಶ

five dengue cases confirm in bgkere rural place

-ಬಿಜಿಕೆರೆ ಗ್ರಾಮ ಪಂಚಾಯಿತಿ 5 ಡೆಂಘೀ ಪ್ರಕರಣ ದೃಢ । ಮೂಲಸೌಲಭ್ಯಗಳ ಕೊರತೆಗಳ ಆಗರವಾದ ಬಿಜಿಕೆರೆ ಗ್ರಾಮ

----

ಬಿಜಿಕೆರೆ ಬಸವರಾಜ

----

ಕನ್ನಡಪ್ರಭ ವಾರ್ತೆ, ಮೊಳಕಾಲ್ಮುರು

ಗ್ರಾಮ ಪಂಚಾಯಿತಿ ಅಧಿಕಾರಿಗಳ ಹೊಣೆಗೇಡಿತನದಿಂದ ಬಳಲುತ್ತಿರುವ ಬಿಜಿ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ಡೆಂಘೀ ಪ್ರಕರಣಗಳು ದೃಢ ಪಟ್ಟಿರುವುದು ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತೆ ಮಾಡಿದೆ.

ತಾಲೂಕಿನ ಬಿಜಿ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳ ಕೊರತೆ ಬಲವಾಗಿ ಕಾಡುತ್ತಿದೆ. ಮಾರಕ ಡೆಂಘೀ ಪ್ರಕರಣಗಳು ಬೆಳಕಿಗೆ ಬಂದಿದ್ದು, ಹಳ್ಳಿಗಳಲ್ಲಿ ಜನರು ಜ್ವರ ಬಾಧೆಗೆ ಒಳಗಾಗಿದ್ದಾರೆ. ಸ್ವಚ್ಚತೆ ಕಾಪಾಡಬೇಕಾದ ಸ್ಥಳೀಯ ಆಡಳಿತ ವರ್ಷ ಕಳೆದರೂ ಚರಂಡಿ ಸ್ವಚ್ಚತೆಗೆ ಮುಂದಾಗದಿರುವುದು ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ.

ಬಿಜಿಕೆರೆ ಗ್ರಾ.ಪಂ ವ್ಯಾಪ್ತಿಯ ಮುತ್ತಿಗಾರ ಹಳ್ಳಿ 2, ಬಿಜಿ ಕೆರೆಯಲ್ಲಿ ಮೂರು ಡೆಂಘೀ ಪ್ರಕರಣಗಳು ದೃಢ ಪಟ್ಟಿದ್ದು ಮುತ್ತಿಗಾರಹಳ್ಳಿಯ ಶಂಕಿತ ಪ್ರಕರಣಗಳ ಪೈಕಿ ಇಬ್ಬರು ಈಗಾಗಲೇ ಗುಣ ಮುಖರಾಗಿ ಮನೆ ಸೇರಿದ್ದಾರೆ. ಇದರಿಂದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಲಾರ್ವ ಸಮೀಕ್ಷೆ ಮಾಡುತ್ತಾ ಜ್ವರ ಬಾಧಿತರನ್ನು ತೀವ್ರ ರಕ್ತ ಪರಿಕ್ಷೆಗೊಳಪಡಿಸುತ್ತಿದ್ದಾರೆ. ಜೊತೆಗೆ ಡೆಂಘೀ ಮುನ್ನೆಚ್ಚರಿಕೆ ಕುರಿತು ತೀವ್ರ ನಿಗಾವಹಿಸಲಾಗಿದೆ.

ಕಳೆದೊಂದು ದಶಕದಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ ಸ್ವಚ್ಚತಾ ಸಿಬ್ಬಂದಿಯ ನೌಕರಿ ಕಾಯಂ ಗೊಳಿಸುತ್ತಿಲ್ಲ ಎನ್ನುವ ಕಾರಣದಿಂದಾಗಿ ಸಿಬ್ಬಂದಿ ನಿರಾಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ಕಾಯಂ ಗೊಂಡಿರುವ ಒಬ್ಬ ಸ್ವಚ್ಛತಾ ಸಿಬ್ಬಂದಿಯಿಂದ ಇಡೀ ಗ್ರಾಮ ಸ್ವಚ್ಛಗೊಳಿಸಲು ಸಾಧ್ಯವಾಗುತ್ತಿಲ್ಲ. ಪಂಚಾಯಿತಿ ಆಡಳಿತ ವ್ಯವಸ್ಥೆ ಮತ್ತು ಸ್ವಚ್ಚತಾ ಸಿಬ್ಬಂದಿ ನಡುವಿನ ಮುಸುಕಿನ ಗುದ್ದಾಟಕ್ಕೆ ಗ್ರಾಮದಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದೆ. ಸೊಳ್ಳೆಗಳ ಉಪಟಳಕ್ಕೆ ಜನತೆ ಹೈರಾಣಾಗಿದ್ದಾರೆ.

ಡೆಂಘೀ ಪ್ರಕರಣಗಳು ಬೆಳಕಿಗೆ ಬಂದ ಪರಿಣಾಮ ಆರೋಗ್ಯ ಇಲಾಖೆ ಇಡೀ ತಾಲೂಕಲ್ಲಿ ಬಿಜಿಕೆರೆಯನ್ನು ಡೆಂಘೀ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದ್ದರೂ ಹಳ್ಳಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ವಚ್ಚತೆ ಇಲ್ಲದಾಗಿದೆ. ಚರಂಡಿಗಳು ಬ್ಲೀಚಿಂಗ್, ಪೇನಾಯಿಲ್ ಕಾಣದೆ ಎಷ್ಟೋ ವರ್ಷಗಳಾಗಿವೆ. ಪ್ರತಿ ಬೀದಿಯು ಸೊಳ್ಳೆಗಳ ಆವಾಸ ಸ್ಥಾನವಾಗಿವೆ. ಪಂಚಾಯಿತಿ ಅಭಿವೃದ್ಧಿಯ ನೆಪದಲ್ಲಿ ಲಕ್ಷ ಲಕ್ಷ ಖರ್ಚು ಮಾಡಿರುವ ಲೆಕ್ಕ ತೋರಿಸುವ ಅಧಿಕಾರಿಗಳು ಕನಿಷ್ಠ ಬ್ಲೀಚಿಂಗ್ ಫಿನಾಯಿಲ್‌ ಖರೀದಿಸಲು ಮುಂದಾಗದಿರುವುದು ಇನ್ನಷ್ಟು ಸಮಸ್ಯೆ ಹುಟ್ಟು ಹಾಕಿದೆ.

ಪಾಗಿಂಗ್ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿ ವಾರ ಕಳೆದರೂ ಈವರೆಗೂ ಫಾಗಿಂಗ್ ಮಾಡಿಲ್ಲ. ಫಾಗಿಂಗ್‌ ಯಂತ್ರ ಕೆಟ್ಟಿರುವ ನೆಪವೊಡ್ಡಿ ಸಂಬಂಧಿಸಿದ ಗ್ರಾ.ಪಂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಬಸ್ ನಿಲ್ದಾಣ, ಅಂಗಡಿಗಳು, ಅಂಡರ್ ಪಾಸ್ ಸೇರಿದಂತೆ ಪ್ರಮುಖ ಜನನಿ ಬಿಡ ಪ್ರದೇಶದಲ್ಲಿ ಹಗಲಲ್ಲಿಯೇ ಸೊಳ್ಳೆಗಳು ರಾಜಾ ರೋಷವಾಗಿ ಹಾರಾಡುತ್ತಿವೆ. ಇದು ಜನರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಇಡೀ ತಾಲೂಕಲ್ಲಿ ಡೆಂಘೀ ಹಾಟ್ ಸ್ಪಾಟ್ ಎಂದು ಗುರುತಿಸಿರುವ ಬಿಜಿಕೆರೆ ಗ್ರಾಮದಲ್ಲಿ ಸ್ವಚ್ಛತೆಗೆ ಮುಂದಾಗುವ ಜತೆಗೆ ಡೆಂಘೀ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂಬುದು ಜನತೆಯ ಆಗ್ರಹವಾಗಿದೆ.

ಕೋಟ್‌....1

ಬಿಜಿಕೆರೆ ಗ್ರಾಮದಲ್ಲಿ ಮೂರು ಡೆಂಘೀ ಪ್ರಕರಣಗಳು ದೃಢಪಟ್ಟಿದ್ದು, ಎರಡು ಶಂಕಿತ ಪ್ರಕರಣಗಳು ಗುಣಮುಖರಾಗಿ ಮನೆ ಸೇರಿದ್ದಾರೆ. ಈಗಾಗಲೇ ಮನೆ ಮನೆ ಲಾರ್ವ ಸಮೀಕ್ಷೆ ಮಾಡಿದ್ದು, ಜ್ವರ ಬಾಧಿತರ ತಪಾಸಣೆಗೊಳಪಡಿಸಲಾಗುತ್ತಿದೆ. ಡೆಂಘೀ ಪ್ರಕರಣಗಳಿಂದಾಗಿ ಗ್ರಾಮದಲ್ಲಿ ಬ್ಲೀಚಿಂಗ್ ಫಿನಾಯಿಲ್‌, ಫಾಗಿಂಗ್ ಮಾಡಿ ಮುನ್ನೆಚ್ಚರಿಕೆ ಕ್ರಮವಹಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

-ಡಾ ಮದು ಕುಮಾರ್. ತಾಲೂಕು ಆರೋಗ್ಯ ಅಧಿಕಾರಿ ಮೊಳಕಾಲ್ಮೂರು.

-----

ಕೋಟ್‌.... 2

ಶಂಕಿತ ಡೆಂಘೀ ಪ್ರಕರಣಗಳು ಬೆಳಕಿಗೆ ಬಂದಿರುವ ಪರಿಣಾಮ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದ್ದು. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸಿ ಬ್ಲೀಚಿಂಗ್ ಫಿನಾಯಿಲ್ ಹಾಕಲು ಕ್ರಮವಹಿಸಲಾಗಿದೆ.

-ಎಸ್‌. ಜಯಣ್ಣ, ಅಧ್ಯಕ್ಷ, ಬಿಜಿಕೆರೆ ಗ್ರಾಮ ಪಂಚಾಯಿತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ