ಜನಪದ ಸಮೂಹ ನೃತ್ಯ ಮತ್ತು ವಾದ್ಯ ವಾದನ ಸ್ಪರ್ಧೆ ಉದ್ಘಾಟನೆ
ನಗರದ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸಂಭ್ರಮ-೫೦ರ ನಿಮಿತ್ತ ಕನ್ನಡ ವಿಭಾಗದ ಸಾರಥ್ಯದಲ್ಲಿ ಕೆಎಲ್ಇ ಕನ್ನಡ ಹಬ್ಬದ ಅಂಗವಾಗಿ ಪಪೂ ಮತ್ತು ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜನಪದ ಸಮೂಹ ನೃತ್ಯ ಮತ್ತು ವಾದ್ಯ ವಾದನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಕಾಲೇಜುಗಳಲ್ಲಿ ಜಾನಪದ ಸ್ಪರ್ಧೆಗಳನ್ನು ನಡೆಸಿದರೆ ವಿದ್ಯಾರ್ಥಿಗಳಿಗೆ ನೆಲ ಮೂಲದ ಸತ್ವವು ಗೊತ್ತಾಗುತ್ತದೆ. ಅಲ್ಲದೇ ವಿದ್ಯಾರ್ಥಿಗಳು ಜಾನಪದದತ್ತ ಒಲವು ತೋರಿಸಿದರೆ ಬಹುತೇಕ ದುಶ್ಚಟಗಳು ಕಡಿಮೆ ಆಗುತ್ತವೆ. ನಯಸೇನ, ಮಧುರಕವಿಯ ಕಾವ್ಯಗಳನ್ನು ಉದಾಹರಿಸುತ್ತ ವಿದ್ಯಾರ್ಥಿಗಳಿಗೆ ಜನಪದದ ಮಹತ್ವವನ್ನು ತಿಳಿಸಿದರು.ಆಡಳಿತ ಮಂಡಳಿ ಸದಸ್ಯಎಸ್.ಐ. ಮುನವಳ್ಳಿ ಮಾತನಾಡಿ, ನಮ್ಮ ನಾಡಿನ ಯಾವುದೇ ಭಾಗಕ್ಕೆ ಹೋದರೂ, ಒಂದಲ್ಲ ಒಂದು ರೀತಿಯಲ್ಲಿ ಜಾನಪದದ ಸೊಗಡು ಇದ್ದೇ ಇದೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ಈ ಜಾನಪದ ತೆರೆಮರೆಗೆ ಸರಿಯುತ್ತಿದೆ. ಜನಪದವನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದರೆ ಅರಿವು ಮೂಡಿಸುವ ಜೊತೆಗೆ ಅದರ ದಾಖಲೀಕರಣವು ಅಗತ್ಯ. ಅದಕ್ಕಾಗಿ ಗ್ರಾಮಗಳಲ್ಲಿ ದೊರೆಯುವ ಪ್ರಾಚೀನ ವಸ್ತುಗಳು, ಗಾದೆ, ಒಗಟು, ಒಡಪು, ಅಡುಗೆ, ವೈದ್ಯ, ನಂಬಿಕೆ, ಹಬ್ಬ ಹರಿದಿನ, ಜನಪದಕಥೆ, ವೇಷ ಭೂಷಣ, ವೃತ್ತಿ, ಬದುಕು ಕುರಿತು ದಾಖಲೀಕರಣ ಕಾರ್ಯವನ್ನು ವಿದ್ಯಾರ್ಥಿಗಳು ನಡೆಸಬೇಕು ಎಂದರು
ಇದಕ್ಕೂ ಪೂರ್ವದಲ್ಲಿ ನಡೆದ ಮೆರವಣಿಗೆಯೂ ಆಕರ್ಷಕವಾಗಿ ಅಲಂಕೃತಗೊಂಡ ಬೀದಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಪೂರ್ಣಕುಂಭ ಹೊತ್ತ ವಿದ್ಯಾರ್ಥಿನಿಯರೊಂದಿಗೆ ಸಾಗಿದ ಮೆರವಣಿಗೆಗೆ ವೀರಗಾಸೆ ಮತ್ತು ಡೊಳ್ಳು ಕುಣಿತದ ತಂಡಗಳು ಮತ್ತಷ್ಟು ಮೆರಗು ತುಂಬಿದವು. ಡೊಳ್ಳು ಮತ್ತು ಸಮಾಳ ವಾಧ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳ ಹರ್ಷ ಮುಗಿಲು ಮುಟ್ಟಿತ್ತು.
ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಸಿ.ಸಂಶಿಮಠ, ರಜನಿ ಪಾಟೀಲ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎ.ವಿ.ದೇವಾಂಗಮಠ ಸೇರಿದಂತೆ ಕೆಎಲ್ಇ ಸಂಸ್ಥೆಗಳ ಎಲ್ಲ ಮಹಾವಿದ್ಯಾಲಯಗಳ ಪ್ರಾಚಾರ್ಯರು, ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರು, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಉಪ ಪ್ರಾ. ಡಾ.ವೀಣಾ ವಂದಿಸಿದರು.