ಅರಣ್ಯ ಅತಿಕ್ರಮಣ ತೆರವು ಕಾರ್ಯ

KannadaprabhaNewsNetwork |  
Published : Jun 08, 2024, 12:31 AM IST
ಮಾವಿನಮನೆ ಅರಣ್ಯ ಪ್ರದೇಶದಲ್ಲಿ ಅತಿಕ್ರಮಣ ತೆರವು ಮಾಡಲಾಯಿತು. | Kannada Prabha

ಸಾರಾಂಶ

ದಿನಗಳಲ್ಲಿ ಯಾವುದೇ ದಾಖಲೆಗಳನ್ನು ಸಲ್ಲಿಸಿರದ ಹಿನ್ನೆಲೆ ನೂತನ ಅತಿಕ್ರಮಣವನ್ನು ಖುಲ್ಲಾಪಡಿಸಲು ಅರಣ್ಯ ಇಲಾಖೆ ಸಿಬ್ಬಂದಿ, ಕಾನೂನು ಕ್ರಮ ಕೈಗೊಂಡಿದ್ದಾರೆಂದು ಇಡಗುಂದಿ ವಲಯದ ವಲಯಾರಣ್ಯಾಧಿಕಾರಿ ಶಿಲ್ಪಾ ನಾಯ್ಕ ತಿಳಿಸಿದ್ದಾರೆ.

ಯಲ್ಲಾಪುರ: ತಾಲೂಕಿನ ಮಾವಿನಮನೆ ಅರಣ್ಯ ಪ್ರದೇಶದಲ್ಲಿ ಅತಿಕ್ರಮಣವನ್ನು ಅರಣ್ಯ ಇಲಾಖೆ ಸಿಬ್ಬಂದಿ ನೇತೃತ್ವದಲ್ಲಿ ತೆರವು ಮಾಡಲಾಯಿತು.

ಇಡಗುಂದಿ ಅರಣ್ಯ ವಲಯದ, ಬಾರೆ ಶಾಖೆಯ, ಮಾವಿನಮನೆ ಗ್ರಾಮದ ಶಿವರಾಮ ನಾರಾಯಣ ಭಟ್ಟ ಶೀಗೇಕೇರಿ ಎನ್ನುವ ವ್ಯಕ್ತಿ ೪ ಎಕರೆ ಮಾಲ್ಕಿ ಜಮೀನು ಹೊಂದಿದ್ದು, ಈಗಾಗಲೇ ಅರಣ್ಯ ಸರ್ವೇ ನಂಬರ್ ೫೩೯ರಲ್ಲಿ ೪ ಎಕರೆ ಅತಿಕ್ರಮಣ ಜಮೀನು ಹೊಂದಿದ್ದಲ್ಲದೇ, ಜಿಪಿಎಸ್ ಸಮೀಕ್ಷೆಯನ್ನೂ ಮಾಡಿಸಿಕೊಂಡಿದ್ದಾರೆ.

ಇದರ ಹೊರತಾಗಿ ಇದೀಗ ಪುನಃ ಅದೇ ಅರಣ್ಯ ಸರ್ವೇ ನಂಬರ್ ೫೩೯ರಲ್ಲಿ ಅರಣ್ಯ ಪ್ರದೇಶದಲ್ಲಿ ಹೊಸತಾಗಿ ಅತಿಕ್ರಮಣ ಮಾಡಿ, ಕಟ್ಟಡ ಕಟ್ಟಲು ಪ್ರಯತ್ನ ಮಾಡಿದ ಸಮಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತಡೆದು, ಈ ಜಾಗದ ಕುರಿತಾಗಿ ಯಾವುದಾದರೂ ದಾಖಲೆಗಳಿದ್ದರೆ ತಂದು ಸಲ್ಲಿಸುವಂತೆ ತಿಳಿಸಿ ೨ ದಿನ ಕಾಲಾವಕಾಶ ನೀಡಿದ್ದರು.

ಆದರೆ ಅವರು ೨ ದಿನಗಳಲ್ಲಿ ಯಾವುದೇ ದಾಖಲೆಗಳನ್ನು ಸಲ್ಲಿಸಿರದ ಹಿನ್ನೆಲೆ ನೂತನ ಅತಿಕ್ರಮಣವನ್ನು ಖುಲ್ಲಾಪಡಿಸಲು ಅರಣ್ಯ ಇಲಾಖೆ ಸಿಬ್ಬಂದಿ, ಕಾನೂನು ಕ್ರಮ ಕೈಗೊಂಡಿದ್ದಾರೆಂದು ಇಡಗುಂದಿ ವಲಯದ ವಲಯಾರಣ್ಯಾಧಿಕಾರಿ ಶಿಲ್ಪಾ ನಾಯ್ಕ ತಿಳಿಸಿದ್ದಾರೆ. ಈ ಅತಿಕ್ರಮಣವನ್ನು ಖುಲ್ಲಾಪಡಿಸಲು ಅರಣ್ಯ ಇಲಾಖೆ ಕೈಗೊಂಡ ಕಾನೂನು ಕ್ರಮದ ಕುರಿತಾಗಿ ವಿವಿಧ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳ ಬಗ್ಗೆ ಅವರು ಈ ಸ್ಪಷ್ಟನೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!