ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ನಗರದಲ್ಲಿ ದಿ.ಅಡ್ವೋಕೇಟ್ಸ್ ಅಸೋಸಿಯೇಷನ್ಗೆ ಭೇಟಿ ನೀಡಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ದೇಶದಲ್ಲಿ ದುಬಾರಿ ದಿನಗಳ ಪರಿಣಾಮ ಜನಸಾಮಾನ್ಯರ ಬದುಕು ಅತಿ ಸಂಕಷ್ಟದಿಂದ ಕೂಡಿದೆ. ಈ ಸಂಗತಿ ವಕೀಲರಿಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ತಮ್ಮ ಕಕ್ಷಿದಾರರಿಗೆ, ಬಂಧು ಬಾಂಧವರಿಗೆ ತಿಳಿಸಿ ಆನಂದಸ್ವಾಮಿ ಗಡ್ಡದೇವರಮಠ ಅವರ ಗೆಲುವಿಗೆ ಸಹಕರಿಸಬೇಕು ಎಂದು ಹೇಳಿದರು.ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ನನ್ನ ತಂದೆ ಜಿ.ಎಸ್. ಗಡ್ಡದೇವರಮಠ ವಕೀಲರಾಗಿ ಸೇವೆ ಆರಂಭಿಸಿದ್ದರು. ವಕೀಲಿ ವೃತ್ತಿ ಬಗ್ಗೆ ಇರುವ ಅಭಿಮಾನ ವರ್ಣಿಸಲು ಅಸಾಧ್ಯ. ಜನಸೇವೆ ಅಪೇಕ್ಷಿಸಿ ರಾಜಕೀಯ ಪ್ರವೇಶಿಸಿರುವೆ. ತಮ್ಮೆಲ್ಲರ ಆಶೀರ್ವಾದದಿಂದ ಗೆಲುವು ಸಾಧಿಸಿದರೆ ತಮ್ಮ ಸಂಘದ ಬೇಡಿಕೆಗಳಿಗೆ ಸ್ಪಂದಿಸುವೆ ಎಂದರು.
ಬಿ.ಎಚ್. ಬುರಡಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮತ್ತು ಶಾಸಕ ಪ್ರಕಾಶ ಕೋಳಿವಾಡ ಅವರನ್ನು ಸನ್ಮಾನಿಸಿಸಲಾಯಿತು. ವಕೀಲರಾದ ಎಲ್.ಎಫ್.ಕೆ. ಕೆಂಗೊಂಡ, ಎಸ್.ಎಂ. ಜವಳಿ, ಎನ್.ಎಂ.ಡಂಬರ, ಎನ್.ಎಫ್. ಕೆಂಪೇಗೌಡ್ರ, ಪಿ.ಯು. ಸೂರಣಗಿ, ಆರ್.ಜೆ. ಪಾಟೀಲ, ಎಸ್.ಎ. ಕುಲಕರ್ಣಿ, ಆರ್.ಎಸ್. ಪಾಟೀಲ, ಸಿ.ಎನ್. ಶಿವಪೂಜೆ, ಎಲ್.ಎಂ.ಕಂಬಳಿ ಇದ್ದರು.