- ಮಂಡ್ಯ ಜಿಲ್ಲೆಯ ಮಾಚಹಳ್ಳಿ ಗ್ರಾಮದ ಮಾಧು ಅಲಿಯಾಸ್ ಮಹದೇವಪ್ಪ ಬಂಧಿತ ಆರೋಪಿ
- ಮ್ಯಾಟ್ರಮೋನಿಯಲ್ಲಿ ಪರಿಚಯ ಮಾಡಿಕೊಂಡು, ನೌಕರಿ ಕೊಡಿಸುವುದಾಗಿ ವಂಚಿಸುವ ಆರೋಪಿ - ದಾವಣಗೆರೆ, ಹರಿಹರ, ಬೆಂಗಳೂರು, ಮೈಸೂರು, ಕೆ.ಆರ್. ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲು
- 8 ಪ್ರಕರಣಗಳಲ್ಲಿ ಒಟ್ಟು ₹62,83,600 ವಂಚನೆ, ವಿಚಾರಣೆ ವೇಳೆ ಬಾಯಿಬಿಟ್ಟಿರುವ ಆ ವಂಚಕ - - - ಕನ್ನಡಪ್ರಭ ವಾರ್ತೆ ದಾವಣಗೆರೆಕನ್ನಡ ಮ್ಯಾಟ್ರಿಮೋನಿಗಳ ಮೂಲಕ ಹೆಣ್ಣುಮಕ್ಕಳನ್ನು ವಂಚಿಸುತ್ತಿದ್ದ, ನೌಕರಿ ಕೊಡಿಸುವ ಆಮಿಷವೊಡ್ಡಿ, ಹಣ ಪಡೆದು ಮೋಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ಆತನಿಂದ 1 ಮೊಬೈಲ್ ಫೋನ್ನ್ನು ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.
ಅನಂತರ ಯುವತಿಯ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿ, ಮೈಸೂರು ನಗರದ ಆರ್ಆರ್ಬಿ ರೈಲ್ವೆ ಇಲಾಖೆಯಲ್ಲಿ ಕ್ಲರಿಕಲ್ ಪೋಸ್ಟ್ ಖಾಲಿ ಇವೆ. ತಾನು ರೈಲ್ವೆ ಇಲಾಖೆ ವರ್ಕ್ ಶಾಪ್ನಲ್ಲಿ ಎಂಜಿನಿಯರ್ ಎಂದು ನಂಬಿಸಿದ್ದಾನೆ. ಯುವತಿಯಿಂದ ವಿವಿಧ ದಿನಾಂಕಗಳಂದು ಹಂತ ಹಂತವಾಗಿ ಒಟ್ಟು ₹21,03,600 ಗಳನ್ನು ಆನ್ ಲೈನ್ ಪಡೆದು, ವಂಚಿಸಿದ್ದನು. ಈ ಬಗ್ಗೆ ಸಂತ್ರಸ್ತ ಯುವತಿ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣಗಳು ಬಯಲು:
ಆರೋಪಿ ಬಂಧನದಿಂದ ಮ್ಯಾಟ್ರಮೋನಿ ವಿಚಾರವಾಗಿ ಹೆಣ್ಣುಮಕ್ಕಳಿಗೆ ಮೋಸ ಮಾಡಿರುವ ಸಾಕಷ್ಟು ಪ್ರಕರಣ ಬಯಲಾಗಿವೆ. ಚಿಕ್ಕಮಗಳೂರು ಠಾಣೆ ವ್ಯಾಪ್ತಿಯಲ್ಲಿ ₹3.80 ಲಕ್ಷ, ಮಂಡ್ಯ ಸಿಇಎನ್ ಠಾಣೆಯಲ್ಲಿ ₹26 ಲಕ್ಷ, ದಾವಣಗೆರೆ ಸಿಇಎನ್ ಠಾಣೆಯಲ್ಲಿ ₹21,03,600 ಗಳಿಗೆ ಹೆಣ್ಣುಮಕ್ಕಳಿಗೆ ವಂಚನೆ ಮಾಡಿದ್ದಾನೆ.ಅಷ್ಟೇ ಅಲ್ಲ, ನೌಕರಿ ಕೊಡಿಸುವುದಾಗಿ ದಾವಣಗೆರೆ ಬಡಾವಣೆ ಠಾಣೆಯಲ್ಲಿ ₹1.5 ಲಕ್ಷ ರು., ಹರಿಹರ ನಗರ ಠಾಣೆಯಲ್ಲಿ ₹1.30 ಲಕ್ಷ ರು., ಬೆಂಗಳೂರಿನ ಕಾಟನ್ ಪೇಟೆ ಠಾಣೆಯಲ್ಲಿ ₹2.80 ಲಕ್ಷ, ಮೈಸೂರು ಸಿಇಎನ್ ಠಾಣೆಯಲ್ಲಿ ₹90 ಸಾವಿರ, ಕೆ.ಆರ್. ನಗರ ಠಾಣೆಯಲ್ಲಿ ₹5.50 ಲಕ್ಷ ಹೀಗೆ ಆರೋಪಿ ಮಧು ವಿವಿಧ ಕಡೆ 8 ಪ್ರಕರಣಗಳಲ್ಲಿ ಒಟ್ಟು ₹62,83,600 ವಂಚಿಸಿರುವುದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.
- --14ಕೆಡಿವಿಜಿ9: ಉಮಾ ಪ್ರಶಾಂತ, ಎಸ್ಪಿ