ಶಿಗ್ಗಾವಿಯಲ್ಲಿ ಉಚಿತ ಬೇಸಿಗೆ ಶಿಬಿರ ಪ್ರಶಂಸನೀಯ

KannadaprabhaNewsNetwork |  
Published : May 15, 2024, 01:30 AM IST
 ಪೊಟೋ ಪೈಲ್ ನೇಮ್ ೧೩ಎಸ್‌ಜಿವಿ೧   ಪಟ್ಟಣದ ವಾಲ್ಮೀಕಿ ಭವನದಲ್ಲಿ ನಡೆದ ಶ್ರೀಕಾಂತ ದುಂಡಿಗೌಡ್ರ ಪ್ರಾಯೋಜಿತ ಉಚಿತ ಬೇಸಿಗೆ ಶಿಬಿರ ಸಮಾರೋಪ ಸಮಾರಂಭವನ್ನು  ಗಂಜೀಗಟ್ಟಿಯ ಚರಮೂರ್ತೇಶ್ವರ ಮಠದ ಡಾ.ವೈಜನಾಥ ಶಿವಲಿಂಗೇಶ್ವರ ಶಿವಾರ್ಚಾಯ ಶ್ರೀಗಳು ಬಾಲಗಾಯಕಿ ಮಹನ್ಯಾ ಪಾಟೀಲ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ೧೩ಎಸ್‌ಜಿವಿ೧-1   ಪಟ್ಟಣದ ವಾಲ್ಮೀಕಿ ಭವನದಲ್ಲಿ ನಡೆದ ಶ್ರೀಕಾಂತ ದುಂಡಿಗೌಡ್ರ ಪ್ರಾಯೋಜಿತ ಉಚಿತ ಬೇಸಿಗೆ ಶಿಬಿರ ಸಮಾರೋಪ ಸಮಾರಂ¨ದಲ್ಲಿ  ಮಹನ್ಯಾ ಪಾಟೀಲ ಹಾಗೂ ಅವರ ತಂದೆ ತಾಯಿಯನ್ನು ಸನ್ಮಾನಿಸಿ ಗೌರವಿಸಿದರು. | Kannada Prabha

ಸಾರಾಂಶ

ಉಚಿತ ಬೇಸಿಗೆ ಶಿಬಿರಗಳು ಹುಬ್ಬಳ್ಳಿ, ಧಾರವಾಡ, ದಾವಣಗೆರೆ ನಗರಗಳಲ್ಲಿ ಆಯೋಜನೆ ಮಾಡಲಾಗುತ್ತಿತ್ತು. ಆದರೆ, ಇಂದು ಶಿಗ್ಗಾವಿ ಪಟ್ಟಣದಲ್ಲಿ ಭರತ ಸಂಸ್ಥೆಯಿಂದ ಆಗುತ್ತಿರುವುದು ವಿಶೇಷವಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಶಕುಂತಲಾ ದುಂಡಿಗೌಡ್ರ ಹೇಳಿದರು.

ಶಿಗ್ಗಾವಿ: ಉಚಿತ ಬೇಸಿಗೆ ಶಿಬಿರಗಳು ಹುಬ್ಬಳ್ಳಿ, ಧಾರವಾಡ, ದಾವಣಗೆರೆ ನಗರಗಳಲ್ಲಿ ಆಯೋಜನೆ ಮಾಡಲಾಗುತ್ತಿತ್ತು. ಆದರೆ, ಇಂದು ಶಿಗ್ಗಾವಿ ಪಟ್ಟಣದಲ್ಲಿ ಭರತ ಸಂಸ್ಥೆಯಿಂದ ಆಗುತ್ತಿರುವುದು ವಿಶೇಷವಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಶಕುಂತಲಾ ದುಂಡಿಗೌಡ್ರ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ನಡೆದ ಶ್ರೀಕಾಂತ ದುಂಡಿಗೌಡ್ರ ಪ್ರಾಯೋಜಿತ ಉಚಿತ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಮುಖ್ಯ ಅತಿಥಿ, ಬಾಲಗಾಯಕಿ ಮಹನ್ಯಾ ಪಾಟೀಲ ಅನೇಕ ಚಲನಚಿತ್ರ ಗೀತೆಗಳನ್ನು ತಮ್ಮ ಮಧುರ ಕಂಠದಿಂದ ಹಾಡಿದರು.

ಪ್ರಾಸ್ತಾವಿಕವಾಗಿ ಪ್ರೊ. ಶಶಿಕಾಂತ ರಾಠೋಡ ಮಾತನಾಡಿ, ತಮ್ಮ ನ್ಯಾಯಸಮ್ಮತ ದುಡಿಮೆಯಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವ ಶ್ರೀಕಾಂತ ದುಂಡಿಗೌಡ್ರ ಕಾರ್ಯ ಶ್ಲಾಘನೀಯ. ಉಚಿತ ಬೇಸಿಗೆ ಶಿಬಿರವನ್ನು ಕಳೆದ ೨ ವರ್ಷಗಳಿಂದ ಮಾಡಬೇಕು ಅಲ್ಲದೇ ೨೧ ದಿನಗಳ ಬೇಸಿಗೆ ಶಿಬಿರವನ್ನು ಮಾಡಬೇಕು ಎಂದು ಶ್ರೀಕಾಂತ ದುಂಡಿಗೌಡ್ರ ಸಂಕಲ್ಪವಾಗಿತ್ತು ಹಾಗೂ ಶಿಬಿರವು ರಚನಾತ್ಮಕತೆಯ ಜೊತೆಗೆ ಸಾಂಸ್ಕೃತಿಕ ಮತ್ತು ಎಲ್ಲ ಆಯಾಮಗಳು ಇರಲಿ ಹಾಗೂ ಶಿಬಿರಾರ್ಥಿಗಳ ಜೊತೆಗೆ ಪಾಲಕ, ಪೋಷಕರ ಮನೋಭಾವ ಬದಲಾವಣೆಗೆ ವಿಶೇಷ ವೇದಿಕೆಯಾಗಿತ್ತು ಎಂದರು.

ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಉಚಿತ ಬೇಸಿಗೆ ಶಿಬಿರ ಮಾಡಬೇಕು ಎಂದು ಕನಸ್ಸು ಕಂಡೆವು. ಅದನ್ನು ಸಾಕಾರಗೊಳಿಸಿದವರು ಶಿಕ್ಷಕರು, ಶಿಬಿರಾರ್ಥಿಗಳು ಮತ್ತು ಪಾಲಕರು ಎಂದರು.

ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಗಂಜೀಗಟ್ಟಿಯ ಚರಮೂರ್ತೇಶ್ವರ ಮಠದ ಡಾ.ವೈಜನಾಥ ಶಿವಲಿಂಗೇಶ್ವರ ಶಿವಾರ್ಚಾಯ ಶ್ರೀಗಳು ಮಕ್ಕಳಿಗೆ ಸೌಲಭ್ಯ ಕೊಡತ್ತಾ ಇದ್ದೀರಿ ಆದರೆ ಮಕ್ಕಳಿಗೆ ಸಂಸ್ಕಾರ ಕೊಡತಾ ಇಲ್ಲ ಆ ಸಂಸ್ಕಾರ ಕೊಡುವ ಶಿಬಿರ ಇದಾಗಿದೆ ಎಂದರು. ಈ ಸಂದರ್ಭದಲ್ಲಿ ಬಸವರಾಜ ಹೊಸಪೇಟೆ, ಶ್ರೀನಿವಾಸ ಬಿ., ಭರತ ಕಳ್ಳಿಮನಿ, ಗುರು ಪಾಟೀಲ, ಪ್ರಭು ಗೂರಪ್ಪನವರ, ರಮೇಶ ವನಹಳ್ಳಿ, ರವಿ ಮಡಿವಾಳರ, ವಿಶ್ವನಾಥ ಗಾಣಿಗೇರ, ಚೇತನ ಕಲಾಲ, ಪ್ರತೀಕ ಕೊಳೇಕರ, ಮುತ್ತು, ಚಂದ್ರು ಜಕ್ಕಣ್ಣವರ, ಸಾಧಿಕ ಮಲ್ಲೂರ, ದರ್ಶನ ಕರೂರ, ಕುಲಕರ್ಣಿ, ಬಸವರಾಜ ಸವಡಿ, ಶಿವಯ್ಯ ಪೂಜಾರ ಉಪಸ್ಥಿತರಿದ್ದರು.

ಶಿಬಿರಾರ್ಥಿಗಳಿಂದ ವಿಶೇಷ ನೃತ್ಯಗಳು ಮತ್ತು ನಾಟಕದ ರೂಪಕಗಳು ನಡೆದವು. ಶಿಕ್ಷಕ ಸೇತ ಸನದಿ ಸ್ವಾಗತಿಸಿದರು. ನವೀನ ಸಾಸನೂರ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ