ಧಾರವಾಡ:
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಃ ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ವಿಸರ್ಜನೆ ಮಾಡಲು ತಿಳಿಸಿದ್ದರು. ಅವರು ಹೇಳಿದಂತೆ ಮಾಡಿದ್ದರೆ ಇಂದು ಕಾಂಗ್ರೆಸ್ ಅಸ್ತಿತ್ವದಲ್ಲಿಯೇ ಇರುತ್ತಿರಲಿಲ್ಲ. ಈಗಲೂ ಪಕ್ಷವು ಎ ದಿಂದ ಝಡ್ ವರೆಗೆ ಮುಗಿದು ಹೋದ ಕಥೆ. ಇದು ಒರಿಜಿನಲ್ ಕಾಂಗ್ರೆಸ್ ಅಲ್ಲ, ಡುಪ್ಲಿಕೇಟ್. ಯಾವುದೋ ಎರಡು ರಾಜ್ಯದಲ್ಲಿ ಟುಕು ಟುಕು ಜೀವ ಇಟ್ಕೊಂಡಿದ್ದು, ಡುಪ್ಲಿಕೇಟ್ ಕಾಂಗ್ರೆಸ್ಸಿಗೆ ನಕಲಿ ಗಾಂಧಿಗಳನ್ನು ಕೊಟ್ಟು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಗಾಂಧಿ ಭಾರತದ ಸಮಾವೇಶದ ಮೂಲಕ ಸರ್ಕಾರದ ದುಡ್ಡನ್ನು ಕಾಂಗ್ರೆಸ್ ಪೋಲು ಮಾಡುತ್ತಿದೆ. ನಮ್ಮಲ್ಲಿ ಇದಕ್ಕೆ ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎನ್ನುತ್ತಾರೆ. ಸರ್ಕಾರದ ದುಡ್ಡಲ್ಲಿ ಜಾತ್ರೆ ಮಾಡುತ್ತಿದ್ದಾರೆ ಕಾಂಗ್ರೆಸಿನವರು. ಮೊದಲು ಈ ಕಾರ್ಯಕ್ರಮ ಮಾಡುವಾಗ ದುರ್ದೈವದಿಂದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನರಾದರು. ಹೀಗಾಗಿ ಮುಂದಕ್ಕೆ ಹಾಕಿದ್ದು, ಮತ್ತೆ ಅಷ್ಟೇ ದುಡ್ಡನ್ನು ಖರ್ಚು ಮಾಡಿ ಕಾರ್ಯಕ್ರಮ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅನುದಾನ ಇಲ್ಲದೇ ಹಲವು ಸಾಮಾಜಿಕ ಕಾರ್ಯಕ್ರಮಗಳು ನಿಂತಿವೆ. ಇಂತಹ ಸ್ಥಿತಿಯಲ್ಲಿ ಹಣ ಪೋಲು ಮಾಡುತ್ತಿದ್ದಾರೆ ಎಂದು ಜೋಶಿ ಗಾಂಧಿ ಭಾರತದ ಬಗ್ಗೆ ವಿರೋಧ ವ್ಯಕ್ತಪಡಿಸಿದರು.ಚಿಲ್ಲರೆ ರಾಜಕಾರಣ: