ಹೂವಿನಹಡಗಲಿ: ಪಟ್ಟಣದಲ್ಲಿ ಮಣ್ಣಿನ ಗಣೇಶನನ್ನು ಮಾರಲು ಜಾಗ ಇಲ್ಲದ ಕಾರಣ,ನಿಂತು ಹೋದ ಎಟಿಎಂ ಮಳಿಗೆಯಲ್ಲೇ ಗಣೇಶ ಮೂರ್ತಿ ಮಾರಾಟಕ್ಕೆ ಇಟ್ಟಿದ್ದು ವಿಶೇಷವಾಗಿತ್ತು.
ಬಹುತೇಕ ಮನೆಯಲ್ಲಿ ಪ್ರತಿಷ್ಠಾನೆ ಮಾಡುವ ಗಣೇಶ ಮೂರ್ತಿಗಳು ಮಣ್ಣಿನಿಂದ ಮಾಡಲ್ಪಟ್ಟಿವೆ. ಜತೆಗೆ ಪರಿಸರ ಸ್ನೇಹಿ ಗಣೇಶನಿಗೆ ಬಣ್ಣ ಇಲ್ಲದ ಮೂರ್ತಿಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ.
ಪಟ್ಟಣದ ಸೇರಿದಂತೆ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಮಣ್ಣಿನ ಗಣೇಶನಿಗೆ ಹೆಚ್ಚು ಬೇಡಿಕೆ ಇದೆ. ಆದರಿಂದ ಗಣೇಶ ಮೂರ್ತಿ ತಯಾರಿಸುವವರು ಮಣ್ಣಿನ ಗಣೇಶನನ್ನೇ ಮಾಡಿದ್ದಾರೆ. ಪಟ್ಟಣದಲ್ಲಿ ಗಣೇಶ ಮೂರ್ತಿಯನ್ನು ಮಾರಲು ಜಾಗ ಇಲ್ಲದ ಕಾರಣ, ಎಟಿಎಂನಲ್ಲೇ ಇಟ್ಟು ಮಾರಾಟ ಮಾಡಿದ್ದು ಎಲ್ಲರ ಗಮನ ಸೆಳೆಯಿತು.ಗಣೇಶೋತ್ಸವವನ್ನು ಬಂಡವಾಳ ಮಾಡಿಕೊಂಡ ಹೂವು, ಹಣ್ಣು ಮತ್ತು ಅಲಂಕಾರಿಕ ವಸ್ತುಗಳ ವ್ಯಾಪಾರಸ್ಥರು, ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದು, ಕಬ್ಬು, ಬಾಳೆ ದಿಂಡುಗಳನ್ನು ಖರೀದಿ ಮಾಡಲು ಜನ ಮುಗಿ ಬಿದ್ದಿದ್ದರು. ಇನ್ನು ಚೆಂಡು ಹೂವು, ಸೇವಂತಿ ಹೂವು ಅಂತು ಬಾರಿ ಬೇಡಿಕೆ ಇತ್ತು. ಗಣೇಶ ಮೂರ್ತಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚಿದೆ ಎಂದು ನಂಬಿಕೊಂಡು ಗಣೇಶ ಮೂರ್ತಿ ತಯಾರಿಕರು, ಸಾಕಷ್ಟು ಗಣೇಶ ಮೂರ್ತಿ ತಯಾರಿಸಿದ್ದಾರೆ, ಆದರೆ ಗಣೇಶ ಮೂರ್ತಿಗಳ ಬೆಲೆ ದುಬಾರಿಗೆ ಬೆಚ್ಚಿ ಬಿದ್ದ ಜನ ಕಡಿಮೆ ಬೆಲೆಯ ಗಣೇಶ ಮೂರ್ತಿ ಹುಡುಕಾಡುತ್ತಿರುವುದು ಕಂಡು ಬಂತು.