ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಜನರನ್ನು ಒಗ್ಗೂಡಿಸಿದ ಗಣೇಶೋತ್ಸವ
ಇಂತಹ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು, ದೇಶದ ಜನರಿಗೆ ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸುವಂತೆ ಕರೆ ನೀಡಿದ ಪರಿಣಾಮವಾಗಿ ದೇಶದ ಜನರು ಜಾತಿ ಭೇದವನ್ನು ಮರೆತು ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸುವ ಮೂಲಕ ಬ್ರಿಟಿಷರಿಗೆ ಶೆಡ್ಡು ಹೊಡೆದರು ಎಂದರು.ವಿಶ್ವ ಹಿಂದು ಪರಿಷದ್ ರಾಷ್ಟೀಯ ಕಾರ್ಯದರ್ಶಿ ಹಾಗೂ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಉಸ್ತುವಾರಿ ಕಾರ್ಯದರ್ಶಿ ಗೋಪಾಲ್ ಜೀ ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಣೇಶೋತ್ಸವ ಹೇಗೆ ಹಿಂದೂಗಳನ್ನು ಒಗ್ಗೂಡಿಸಲು ಸಾಧ್ಯವಾಯಿತೋ, ಅದೇ ರೀತಿಯಲ್ಲಿ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಸಮಸ್ತ ಹಿಂದೂಗಳು ಜಾತಿ ಕುಲ ಭೇದಗಳನ್ನು ಬದಿಗೊತ್ತಿ ನಾವೆಲ್ಲ ಹಿಂದೂ,ನಾವೆಲ್ಲ ಒಂದು ಎಂಬ ರೀತಿಯಲ್ಲಿ ಒಟ್ಟಾಗಿ ರಾಮನ ಕಾರ್ಯವನ್ನು ಸುಸೂತ್ರವಾಗಿ ನೆರೆವೇರಿಸಿದರು ಎಂದರು.
ಮಲ್ಲಕಂಬ ಪ್ರದರ್ಶನ: ಈ ಸಂಧರ್ಭದಲ್ಲಿ ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ವರಪ್ರಸಾದ್ ರೆಡ್ಡಿ, ವಿಶ್ವಹಿಂದು ಪರಿಷದ್ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್, ಗೌರಿಶಂಕರ್,ವೇಣು ಜೀ,ಮಂಜುನಾಥ್, ದಯಾನಂದ್,ರಾಮ ಮೋಹನ್, ಉಪೇಂದ್ರ, ಬೈಪಾಸ್ ಗಣೇಶೋತ್ಸವ ಬಳಗದ ರವಿಕುಮಾರ್,ಸ್ವಾಗತ್, ರಾಜಶೇಖರ್,ಶಿವಾರೆಡ್ಡಿ,ಗಣೇಶ್,ಹರೀಶ್, ನವೀನ್,ನಿಖಿಲ್ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.