ಗಂಗೊಳ್ಳಿಯ ಬೋಟ್ ಕಾರವಾರದಲ್ಲಿ ಮುಳುಗಡೆ

KannadaprabhaNewsNetwork |  
Published : Jan 16, 2025, 12:47 AM IST
ಮುಳುಗಡೆ | Kannada Prabha

ಸಾರಾಂಶ

ಗಂಗೊಳ್ಳಿಯ ಮೀನುಗಾರಿಕಾ ಬೋಟ್‌ವೊಂದು ಕಾರವಾರದ ಬಳಿ ಮುಳುಗಡೆಯಾದ ಘಟನೆ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಗಂಗೊಳ್ಳಿಯ ಮೀನುಗಾರಿಕಾ ಬೋಟ್‌ವೊಂದು ಕಾರವಾರದ ಬಳಿ ಮುಳುಗಡೆಯಾದ ಘಟನೆ ಸಂಭವಿಸಿದೆ.

ಗಂಗೊಳ್ಳಿ ನಿವಾಸಿ ಮೊಮಿನ್‌ ನಾಜಿಮಾ ಅವರಿಗೆ ಸೇರಿದ ಸೀ ಹಂಟರ್‌ ಹೆಸರಿನ ಈ ಬೋಟ್‌ನಲ್ಲಿ ತಂಡೇಲ ಯೋಗೀಶ್‌ ರಾಮಕೃಷ್ಣ ಹರಿಕಾಂತ ಮತ್ತು 7 ಮಂದಿ ಕಲಾಸಿ ಜತೆ ಸೇರಿ ಮೀನುಗಾರಿಕೆಗಾಗಿ ಮಂಗಳವಾರ ರಾತ್ರಿ 10.30ಕ್ಕೆ ಮಲ್ಪೆ ಬಂದರಿನಿಂದ ಹೊರಟಿದ್ದರು. ರಾತ್ರಿ ಸುಮಾರು 11.45ರ ಹೊತ್ತಿಗೆ ಕಾರವಾರದ ಮುಂದೆ ಹೋಗುವಾಗ ಬೋಟಿನ ಕೆಳಭಾಗಕ್ಕೆ ಯಾವುದೋ ವಸ್ತು ತಾಗಿತು. ಸ್ವಲ್ಪ ಹೊತ್ತಿನ ಬಳಿಕ ಬೋಟಿನ ಮುಂಬದಿಯ ಸ್ಟೋರೇಜ್‌ನಲ್ಲಿ ನೀರು ಒಳ ಬರಲು ಆರಂಭವಾಗಿದ್ದು, ನೀರು ಖಾಲಿ ಮಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ತಕ್ಷಣ ವಿಷಯ ತಿಳಿದು ಹತ್ತಿರದಲ್ಲಿಯೇ ಇದ್ದ ಇನ್ನೊಂದು ಬೋಟಿನವರು ಸಹಾಯಕ್ಕೆ ಬಂದು ಮೀನುಗಾರರನ್ನು ರಕ್ಷಿಸಿದರು. ಆದರೆ ಬೋಟ್‌ ಸಂಪೂರ್ಣ ಮುಳುಗಡೆಯಾಗಿ ಸುಮಾರು 70 ಲ. ರು. ನಷ್ಟ ಉಂಟಾಗಿದೆ. ಯಾವುದೇ ಜೀವಹಾನಿಯಾಗಿಲ್ಲ. ಕಾರವಾರದ ಕರಾವಳಿ ಕಾವಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ