ಗೌರಿ ಹಬ್ಬ: ಗಣಪತಿ ಹೊಂಡ ಸ್ವಚ್ಛತಾ ಕಾರ್ಯ

KannadaprabhaNewsNetwork |  
Published : Aug 09, 2025, 02:05 AM IST
ಪಟ್ಟಣದ ಇತಿಹಾಸ ಪ್ರಸಿದ್ದ ಗಣಪತಿ ಹೊಂಡದ ಸ್ವಚ್ಚತೆ ಮತ್ತು ಹೊಂಡದ ದ್ವಾರಕ್ಕೆ ಗೇಟ್ ಅಳವಡಿಸುವ ಕಾಮಗಾರಿ ಕೆಲಸವನ್ನು ವೀಕ್ಷಣೆ ಮಾಡುತ್ತೀರುವ ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ, ಸದಸ್ಯ ಪಟ್ಲಿನಾಗರಾಜ್, ಅಭಿಯಂತರ ರಂಗಪ್ಪ ಇದ್ದಾರೆ | Kannada Prabha

ಸಾರಾಂಶ

ಚನ್ನಗಿರಿ ಪಟ್ಟಣದ ಮುಖ್ಯ ಬಸ್ ನಿಲ್ದಾಣ ಬಳಿಯಿರುವ ಗಣಪತಿ ಹೊಂಡವನ್ನು ಗುರುವಾರ ಪುರಸಭೆ ಅಧಿಕಾರಿಗಳು- ಸಿಬ್ಬಂದಿ ಸ್ವಚ್ಛಗೊಳಿಸಿದ್ದಾರೆ.

- ಮಣ್ಣಿನ ಮೂರ್ತಿಗಳ ಮಾತ್ರ ಪ್ರತಿಷ್ಠಾಪಿಸಿ: ಮುಖ್ಯಾಧಿಕಾರಿ ಮನವಿ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಮುಖ್ಯ ಬಸ್ ನಿಲ್ದಾಣ ಬಳಿಯಿರುವ ಗಣಪತಿ ಹೊಂಡವನ್ನು ಗುರುವಾರ ಪುರಸಭೆ ಅಧಿಕಾರಿಗಳು- ಸಿಬ್ಬಂದಿ ಸ್ವಚ್ಛಗೊಳಿಸಿದರು.

ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ಮಾಧ್ಯಮದವರೊಂದಿಗೆ ಮಾತನಾಡಿ, ಪಟ್ಟಣದ ಮುಖ್ಯ ಬಸ್ ನಿಲ್ದಾಣ ಬಳಿ ಇರುವ ಗಣಪತಿ ಹೊಂಡವು ಇತಿಹಾಸ ಪ್ರಸಿದ್ಧವಾಗಿದೆ. ಈ ಹೊಂಡದಲ್ಲಿ ಗೌರಿ- ಗಣಪತಿ ಹಬ್ಬದಂದು ಚನ್ನಗಿರಿ ಪಟ್ಟಣದಾದ್ಯಂತ ಪ್ರತಿಷ್ಠಾಪಿಸುವ ಮೂರ್ತಿಗಳನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿ, ವಿಸರ್ಜನೆ ಮಾಡಲಿದ್ದಾರೆ. ಹಾಗಾಗಿ, ಹೊಂಡದ ಸುತ್ತಲೂ ಬೆಳೆದಿರುವ ಕಳೆ ಗಿಡಗಳನ್ನು ಕತ್ತರಿಸಿ, ನೀರಿನಲ್ಲಿ ಬಿದ್ದಿರುವ ತ್ಯಾಜ್ಯ ತೆರವುಗೊಳಿಸಲಾಗಿದೆ. ಈ ಹೊಂಡಕ್ಕೆ ನೀರಿನ ಸಂಪನ್ಮೂಲವಾಗಿರುವ ಬೋರ್ ವೇಲ್‌ನಿಂದ ನೀರು ತುಂಬಿಸಲಾಗುವುದು ಎಂದರು.

ಪಟ್ಟಣದ ಜನರು ತಮ್ಮ ಮನೆಗಳಲ್ಲಿ ಮತ್ತು ಸಾರ್ವಜನಿಕವಾಗಿ ಗಣಪತಿಗಳನ್ನು ಪ್ರತಿಷ್ಠಾಪಿಸುವವರು ಪರಿಸರಸ್ನೇಹಿ ಗಣಪತಿ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಲೇಪಿಸಿದ ಗೌರಿ-ಗಣಪತಿ ಮೂರ್ತಿಗಳು ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣಪತಿ ಮೂರ್ತಿಗಳ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇವುಗಳ ಬಳಕೆಯಿಂದ ಜಲಮೂಲಗಳು ಕಲುಷಿತಗೊಳ್ಳುತ್ತವೆ. ಈ ನಿಟ್ಟಿನಲ್ಲಿ ಈಗಾಗಲೇ ಗಣಪತಿ ತಯಾರಕರಿಗೆ ನೋಟಿಸ್ ಸಹ ನೀಡಲಾಗಿದೆ ಎಂದರು.

ಪುರಸಭೆ ಸದಸ್ಯ ಪಟ್ಲಿ ನಾಗರಾಜ್ ಮಾತನಾಡಿ, ಚನ್ನಗಿರಿ ಪಟ್ಟಣದ ಇತಿಹಾಸ ಪ್ರಸಿದ್ಧ ಗಣಪತಿ ಹೊಂಡವು ನಾನು ಪ್ರತಿನಿಧಿಸುವ 19ನೇ ವಾರ್ಡ್‌ ವ್ಯಾಪ್ತಿಯಲ್ಲಿ ಬರಲಿದೆ. ಈ ಹೊಂಡದ ಸ್ವಚ್ಛತೆ ಮತ್ತು ಪಾವಿತ್ರತೆ ಕಾಪಾಡುವ ದೃಷ್ಠಿಯಿಂದ ಈ ಹಿಂದೆ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಅವರು ಹೊಂಡದ ಸುತ್ತಲೂ ತಂತಿಯ ರಿವಿಟ್‌ಮೆಂಟ್ ಅಳವಡಿಸಿಕೊಟ್ಟಿದ್ದರು. ಈಗ ಪುರಸಭೆ ಅನುದಾನದಲ್ಲಿ ಹೊಂಡದ ಪ್ರವೇಶ ದ್ವಾರಕ್ಕೆ ಗೇಟ್ ಅಳವಡಿಸಲಾಗಿದೆ. ಹೊಂಡದ ಮುಂದೆ ಇರುವ ಕರೋಗಲ್ಲಿನ ಸುತ್ತ ಕಾಂಪೌಂಡ್, ತಂತಿಯ ಜಾಲರಿ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಈ ಸಂದರ್ಭ ಪುರಸಭೆ ಅಭಿಯಂತರ ರಂಗಪ್ಪ ಸೇರಿದಂತೆ ಕಚೇರಿ ಸಿಬ್ಬಂದಿ ಹಾಜರಿದ್ದರು.

- - -

(ಕೋಟ್‌) ಪ್ರತಿ ವರ್ಷವೂ ಇದೇ ಗಣಪತಿ ಹೊಂಡದಲ್ಲಿ ಸುಮಾರು 150ರಿಂದ 200 ಗಣಪತಿಗಳನ್ನು ಪೂಜಿಸಿ, ವಿಸರ್ಜನೆ ಮಾಡಲಾಗುತ್ತಿದೆ. ಹೊಂಡದ ಸ್ವಚ್ಛತೆ ಮತ್ತು ಪಾವಿತ್ರ್ಯತೆ ಕಾಪಾಡಲು ಪಟ್ಟಣದ ನಾಗರೀಕರು ಸಹಕಾರ ನೀಡಬೇಕು.

- ಪಟ್ಲಿ ನಾಗರಾಜ್, ಸದಸ್ಯ, ಚನ್ನಗಿರಿ ಪುರಸಭೆ.

- - -

-7ಕೆಸಿಎನ್‌ಜಿ1.ಜೆಪಿಜಿ:

ಚನ್ನಗಿರಿ ಪಟ್ಟಣದ ಇತಿಹಾಸ ಪ್ರಸಿದ್ಧ ಗಣಪತಿ ಹೊಂಡದ ಸ್ವಚ್ಛತೆ ಮತ್ತು ಹೊಂಡದ ದ್ವಾರಕ್ಕೆ ಗೇಟ್ ಅಳವಡಿಸುವ ಕಾಮಗಾರಿಯನ್ನು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಸದಸ್ಯ ಪಟ್ಲಿ ನಾಗರಾಜ್, ಅಭಿಯಂತರ ರಂಗಪ್ಪ ಪರಿಶೀಲಿಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ