- ಪರಿಸರ ರಕ್ಷಣೆ ಬಗ್ಗೆ ಈಶ್ವರ ಖಂಡ್ರೆ, ಪ್ರಿಯಾಂಕ ಖರ್ಗೆ ಜತೆ ಚರ್ಚೆ
ಜರ್ಮನಿಯ ಸಂಸತ್ ಸದಸ್ಯ ಜೇನ್ಸ್ ಗೀಯರ್ ನೇತೃತ್ವದ ನಿಯೋಗವು ಬೆಂಗಳೂರಿನಲ್ಲಿ ವಿಕಾಸಸೌಧದಲ್ಲಿ ಸ್ಪೀಕರ್ ಯು.ಟಿ.ಖಾದರ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಪ್ರಿಯಾಂಕ ಖರ್ಗೆ ಅವರನ್ನು ಭೇಟಿ ಮಾಡಿತು.
ಜರ್ಮನಿ ಸಂಸದರಾದ ಜೇನ್ಸ್ ಗೀಯರ್, ಬುಂಡೆಸ್ಟಾಗ್ನ ಸದಸ್ಯ ಬೆಂಗ್ಟ್ ಬರ್ಗ್ಟ್, ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ, ದಾವಣಗೆರೆಯ ಸೈಯದ್ ಖಾಲಿದ್ ಅಹಮ್ಮದ್ ಸೇರಿದಂತೆ ಅನೇಕರು ಈ ಸಂದರ್ಭ ಹಾಜರಿದ್ದರು.ಪರಿಸರ ಸಂರಕ್ಷಣೆ, ವಾಯುಮಾಲಿನ್ಯ, ರಾಜ್ಯ ಮತ್ತು ರಾಷ್ಟ್ರ ರಾಜಕೀಯ ಕುರಿತಂತೆ ನಿಯೋಗವು ಸ್ವೀಕರ್, ಸಚಿವರೊಂದಿಗೆ ಸಮಾಲೋಚನೆ ನಡೆಸಿತು. ಹವಾಮಾನ ವೈಪರೀತ್ಯ, ಪುನರ್ ಬಳಕೆ ವಸ್ತುಗಳು, ಅರಣ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರಗಳ ಕುರಿತಂತೆ ಚರ್ಚೆ ನಡೆಸಲಾಯಿತು.
ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಮಾಡಿ, ರಾಜ್ಯಕ್ಕೆ ಸಂಬಂಧಿಸಿದಂತೆ ಹತ್ತುಹಲವು ವಿಚಾರದ ಕುರಿತಂತೆ ಸಮಾಲೋಚಿಸಲಾಯಿತು. ಸಚಿವರೊಂದಿಗೆ ಜರ್ಮನಿ ಸದಸ್ಯರು ಮಹತ್ವದ ವಿಚಾರ ಹಂಚಿಕೊಂಡರು. ಪರಿಸರ ಸಂರಕ್ಷಣೆ, ವಸ್ತುಗಳ ಪುನರ್ಬಳಕೆ, ಸ್ಥಳೀಯ ಸಂಪನ್ಮೂಲ ಕ್ರೋಢೀಕರಣ, ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ವಾಯು ಮಾಲಿನ್ಯ, ಸಂಪನ್ಮೂಲಗಳ ಮರುಬಳಕೆ ಇನ್ನಿತರೆ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ಸೈಯದ್ ಮಾಹಿತಿ ನೀಡಿದರು.
- - - -3ಕೆಡಿವಿಜಿ8, 9:ಬೆಂಗಳೂರಿನಲ್ಲಿ ಜರ್ಮನಿಯ ಸಂಸದರ ನಿಯೋಗವು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಈಶ್ವರ ಈಶ್ವರ ಖಂಡ್ರೆ, ಪ್ರಿಯಾಂಕ ಖರ್ಗೆ ಅವರನ್ನು ಭೇಟಿಯಾಗಿ ಪರಿಸರ ಸಂರಕ್ಷಣೆ, ಅರಣ್ಯ ವಿಷಯಗಳ ಕುರಿತ ಸಮಾಲೋಚನೆ ನಡೆಸಿತು.