ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಿ: ಶಶಿಕಲಾ ಮಾಳಗಿ

KannadaprabhaNewsNetwork | Published : Jun 1, 2025 2:10 AM
ಹಾವೇರಿ ನಗರದ ವೈಭವಲಕ್ಷ್ಮಿ ಪಾರ್ಕ್‌ನಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಶುಕ್ರವಾರ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಯಿತು.

ಹಾವೇರಿ: ಮಕ್ಕಳು ದೇಶದ ಭವಿಷ್ಯವಾಗಿದ್ದು, ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು. ನಿತ್ಯ ಶಾಲೆಗೆ ಆಗಮಿಸಿ ಜೀವನದಲ್ಲಿ ಆದರ್ಶ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಬೇಕು ಎಂದು ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ತಿಳಿಸಿದರು.

ನಗರದ ವೈಭವಲಕ್ಷ್ಮಿ ಪಾರ್ಕ್‌ನಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ 2025- 26ನೇ ಸಾಲಿನ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಮಾತನಾಡಿ, ಮಕ್ಕಳು ಚೆನ್ನಾಗಿ ಅಭ್ಯಾಸ ಮಾಡಿ ಶಾಲೆಗೆ, ನಾಡಿಗೆ ಕೀರ್ತಿ ತರಬೇಕು. ಪ್ರತಿನಿತ್ಯದ ಅಭ್ಯಾಸಗಳನ್ನು ನಿರಂತರವಾಗಿ ಮಾಡಿ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಶಾಲೆಯ ಶಿಕ್ಷಣದಿಂದ ಭವಿಷ್ಯ ಉಜ್ವಲವಾಗುತ್ತದೆ. ಹಾಜರಾತಿ ಕೊರತೆಯಾಗದಂತೆ ಶಾಲೆಗೆ ಆಗಮಿಸಬೇಕು ಎಂದರು.

ಶಾಲಾ ಪ್ರಾರಂಭೋತ್ಸವದ ಹಿನ್ನೆಲೆ ತಳಿರು, ತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಮಕ್ಕಳನ್ನು ಸ್ವಾಗತಿಸಲಾಯಿತು. ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಅವರು ಮಕ್ಕಳಿಗೆ ಪಠ್ಯಪುಸ್ತಕ ನೀಡಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಅವರು ಮಕ್ಕಳಿಗೆ ಸಿಹಿ ವಿತರಿಸಿ ಬರಮಾಡಿಕೊಂಡರು. ನಂತರ ನಮ್ಮ ಶಾಲೆ ನಮ್ಮ ಹೆಮ್ಮೆ ಎನ್ನುವ ಸೆಲ್ಫಿ ಕಾರ್ನರ್‌ನಲ್ಲಿ ಮಗುವಿನ ಛಾಯಾಚಿತ್ರ ಪಡೆಯಲಾಯಿತು. ಮಕ್ಕಳು ಖುಷಿಯಿಂದ ಶಾಲೆಯ ಕೊಠಡಿಗೆ ತೆರಳಿ ಪಾಠ ಕೇಳಿದರು.

ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ದಾದಾಖಲಂದರ ಪೀರಸಾಬನವರ, ಕ್ಷೇತ್ರ ಸಮನ್ವಯಾಧಿಕಾರಿ ಮಹದೇವಪ್ಪ ಮಾದರ, ಇಸಿಒ ಓಂಪ್ರಕಾಶ ಯತ್ನಳ್ಳಿ, ಹನುಮೇಗೌಡ, ಬಿಆರ್‌ಪಿ ಶ್ರೀನಿವಾಸ, ಹಾನಗಲ್ಲ, ಶಿವಕುಮಾರ, ಶಿಕ್ಷಕರಾದ ಬಿ.ಎಚ್. ಬಾಗಬಾನ, ಇಮ್ತಿಯಾಜ್ ಹಂಚಿನಮನಿ, ರಹಮಾನ್‌ಖಾನ್, ಎಸ್.ಐ. ಮೇಡ್ಲೇರಿ, ಫರ್ಜಾನಾ ಶಬನಂ, ಪಿ.ಜಿ. ಬಿರಾದಾರ, ಸತ್ಯಪ್ರಿಯಾ ಅರ್ಕಸಾಲಿ, ಕರಬಸಪ್ಪ ಹಳೇಮನಿ, ನಿಂಗಪ್ಪ ಮಾಳಗಿ ಇದ್ದರು.

ನಾಗರಾಜ ನಡುವಿನಮಠ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಡಾ. ಬಿ.ಎಂ. ಬೇವಿನಮರದ ವಂದಿಸಿದರು.