ಕನ್ನಡಪ್ರಭ ವಾರ್ತೆ ಇಳಕಲ್ಲ
ಇಲ್ಲಿನ ಕಾನಿಪ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸಕ ಕಾಶಪ್ಪನವರ ಕುಟುಂಬ 50 ವರ್ಷಗಳಿಂದ ಇಳಕಲ್ಲ ಹಾಗೂ ಹುನಗುಂದ ತಾಲೂಕಿನ ಸಮಾಜ ಸೇವೆ ಹಾಗೂ ಜನರ ಸೇವೆ ಮಾಡುತ್ತಾ ಬಂದಿದೆ. ಶಾಸಕ ವಿಜಯಾನಂದ ಕಾಶಪ್ಪನವರ ಸಹ 2ನೇ ಅವಧಿಗೆ ಶಾಸಕರಾಗಿ 2 ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅಲ್ಲದೆ, ಎಲ್ಲ ಸಮಾಜಗಳೊಂದಿಗೆ ಒಡನಾಟದಲ್ಲಿದ್ದು, ಕಾಂಗ್ರೆಸ್ ಪಕ್ಷ ಕಾರ್ಯಗಳ ಬಗ್ಗೆ ಮತ್ತು ಸರ್ಕಾರದ ಎಲ್ಲ ಯೋಜನೆಗಳನ್ನು ಜನತೆಗೆ ಪ್ರಾಮಾಣಿಕವಾಗಿ ತಲುಪಿಸುವ ಕಾರ್ಯದಲ್ಲಿ ಸಕ್ರೀಯರಾಗಿದ್ದಾರೆ. ಪಕ್ಷದ ವರಿಷ್ಠರು ಇವರ ಜನಪರ ಕಾರ್ಯಗಳನ್ನು ಗುರುತಿಸಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಿ ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಕ್ಷೇತ್ರದ ಹಾಗೂ ನಾಡಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಹಕರಿಸಬೇಕು ಎಂದು ಆಗ್ರಹಿಸಿದರು. ಮುಂಬರುವ ದಿನಗಳಲ್ಲಿ ಅಂಬಿಗೇರ ಚೌಡಯ್ಯ ಸಮಾಜದವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಚಿವರಿಗೆ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಲಿದ್ದೇವೆ ಎಂದು ಶಶಿಕಾಂತ ಕಾಗಿ ತಿಳಿಸಿದ್ದಾರೆ.
ಗೋಷ್ಟಿಯಲ್ಲಿ ಅಂಬಿಗೇರ ಸಮಾಜದ ಹಿರಿಯರಾದ ಬಸವರಾಜ ಜುಮನಾಳ, ಗಿರಿಯಪ್ಪ ತಪ್ಪಲದಡ್ಡಿ, ಯಲ್ಲಪ್ಪ ಅಂಬಿಗೇರ, ಹುಲ್ಲಪ್ಪ ಕಿಡದೂರ, ಅಶೋಕ ಮಡ್ಡಿಕಾರ, ಮುತ್ತಣ್ಣ ಬುದ್ದಿನ್ನಿ, ಮಹಾಂತೇಶ ಅಂಬಿಗೇರ ಹಾಗು ಇತರರಿದ್ದರು.