ಕನ್ನಡಪ್ರಭ ವಾರ್ತೆ ಬೆಳಗಾವಿ
ಲೀಸ್ ಅವಧಿ ಮುಗಿದ ಮಹಾನಗರ ಪಾಲಿಕೆ ಆಸ್ತಿಗಳ ಕುರಿತು ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾಲಿಕೆಗೆ ಮರಳಿ ಪಡೆದು ಪ್ರಸ್ತುತ ಬಾಡಿಗೆ ದರವನ್ನು ಮರು ನಿಗದಿ ಪಡಿಸಿ ಅರ್ಹ ಬಾಡಿಗೆದಾರಿಗೆ ನೀಡಬೇಕು. ಈ ಕುರಿತು ನಿಯಮಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಉಪಮೇಯರ್ ಹಣಮಂತ ಕೊಂಗಾಲಿ ಮಾತನಾಡಿ, ಅವಧಿ ಮುಗಿದಿದ್ದರೂ ಬಾಡಿಗೆದಾರರು ಆಸ್ತಿಗಳನ್ನು ಉಪಯೋಗಿಸುತ್ತಿರುವುದರಿಂದ ಪಾಲಿಕೆಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಈ ಕುರಿತು ಪಾಲಿಕೆ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.ಕಂದಾಯ ವಿಭಾಗದ ಉಪಆಯುಕ್ತ ಡಾ.ಸಿದ್ದು ಹುಲ್ಲೋಳಿ ಅವರು, ಲೀಸ್ ಅವಧಿ ಮುಗಿದ ಆಸ್ತಿಗಳ ಕುರಿತು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.ಸಭೆಯಲ್ಲಿ ತೆರಿಗೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ, ರೇಖಾ ಹೂಗಾರ, ನಗರಸೇವಕರಾದ ರವಿ ಧೋತ್ರೆ, ಆನಂದ ಚೌಹಾಣ್, ರಾಜಶೇಖರ್ ಡೋಣಿ, ನಿತಿನ್ ಜಾಧವ್, ಶ್ರೀಶೈಲ್ ಕಾಂಬಳೆ, ಅವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.