ನಿಸ್ವಾರ್ಥ ಸೇವೆಯ ಸಮಾಜಸೇವಕರಿಗೆ ಮನ್ನಣೆ ನೀಡಿ: ಸಚಿವ ಮಧುಬಂಗಾರಪ್ಪ

KannadaprabhaNewsNetwork |  
Published : Aug 01, 2025, 12:00 AM IST
ಫೋಟೊ:೩೧ಕೆಪಿಸೊರಬ-೦೧ : ಸೊರಬ ಪಟ್ಟಣದ ಶ್ರೀ ಮುರುಘಾ ಮಠದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಕಲ್ಯಾಣ ಮಂಟಪದ ಪ್ರಧಾನ ದ್ವಾರಬಾಗಿಲು ಪೂಜಾ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭಾಗವಹಿಸಿದರು. | Kannada Prabha

ಸಾರಾಂಶ

ಸರ್ವಧರ್ಮಗಳ ಪರಿಪಾಲನೆಯಲ್ಲಿ ತಾಲೂಕಿನ ಜಡೆ ಮಠ ಅನನ್ಯ ಕೊಡುಗೆ ನೀಡಿದೆ. ಈ ಕಾರಣದಿಂದಲೇ ಜಡೆ ಮಠ ಲಕ್ಷಾಂತರ ಭಕ್ತರನ್ನು ಹೊಂದಿ ನಾಡಿನಲ್ಲಿ ಪಸರಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಸರ್ವಧರ್ಮಗಳ ಪರಿಪಾಲನೆಯಲ್ಲಿ ತಾಲೂಕಿನ ಜಡೆ ಮಠ ಅನನ್ಯ ಕೊಡುಗೆ ನೀಡಿದೆ. ಈ ಕಾರಣದಿಂದಲೇ ಜಡೆ ಮಠ ಲಕ್ಷಾಂತರ ಭಕ್ತರನ್ನು ಹೊಂದಿ ನಾಡಿನಲ್ಲಿ ಪಸರಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಸುಕ್ಷೇತ್ರ ಶ್ರೀ ಮುರುಘಾ ಮಠದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಕಲ್ಯಾಣ ಮಂಟಪದ ಪ್ರಧಾನ ದ್ವಾರಬಾಗಿಲು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಾರ್ಥ ತುಂಬಿದ ಬದುಕಿನಲ್ಲಿ ನಿಸ್ವಾರ್ಥತೆಯಿಂದ ಸಮಾಜ ಸೇವೆಯಲ್ಲಿ ತೊಡಗುವ ಯಾವುದೇ ವ್ಯಕ್ತಿಗೆ ಪ್ರತಿಯೊಬ್ಬರೂ ಮನ್ನಣೆ ನೀಡಬೇಕು. ಆಗ ಸಮಾಜ ಸುಧಾರಣೆ ಸಾಧ್ಯವಾಗುತ್ತದೆ ಎಂದ ಅವರು, ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ ೨೫ ಲಕ್ಷ ರು.ಗಳನ್ನು ದೇಣಿಗೆಯಾಗಿ ನೀಡಲಾಗುವುದು. ಆದಷ್ಟು ಬೇಗ ಸಮುದಾಯ ಭವನ ನಿರ್ಮಾಣಗೊಂಡು ಲೋಕಾರ್ಪಣೆಗೊಳ್ಳಲಿ ಎಂದು ಶುಭ ಹಾರೈಸಿದರು.

ಪಟ್ಟಣದ ಮುರುಘಾ ಮಠದ ಆವರಣದಲ್ಲಿ ಪೂಜ್ಯರ ಸಂಕಲ್ಪದಂತೆ ಮತ್ತು ಎಲ್ಲಾ ಧರ್ಮ, ಸಮುದಾಯದವರ ಕಲ್ಯಾಣ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು ನಡೆಸುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಭವ್ಯ ಕಟ್ಟಡದ ಪ್ರಧಾನ ಬಾಗಿಲು ಪೂಜಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಡೆ ಸಂಸ್ಥಾನ ಮಠ-ಸೊರಬ ಮುರುಘಾ ಮಠದ ಪೀಠಾಧ್ಯಕ್ಷ ಡಾ. ಮ.ನಿ.ಪ್ರ. ಮಹಾಂತ ಸ್ವಾಮಿಗಳು ವಹಿಸಿದ್ದರು. ಜಗದ್ಗುರು ವೃಷಬೇಂದ್ರ ದೇಶಿ ಕೇಂದ್ರ ಮಹಾಸ್ವಾಮಿಗಳು ತರಿಕೆರೆ, ಶಾಂತಾಪುರ ಮಠದ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು, ಯಾದಗಿರಿ ಪ್ರಭುಲಿಂಗಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಮುದಾಯ ನಿರ್ಮಾಣಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಗುರುಕುಮಾರ ಪಾಟೀಲ್ ೨ ಲಕ್ಷ ರು., ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜಗೌಡ ಚಿಕ್ಖಾವಲಿ ೨ ಲಕ್ಷ ರು., ನ್ಯಾರ್ಶಿ ಸುರೇಂದ್ರಗೌಡ ೧೧ ಸಾವಿರ ರು., ಭಾರಂಗಿ ಬಸಣ್ಣ ೧೦೦ ಚೀಲ ಸಿಮೆಂಟ್ ನೀಡುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲಗೌಡ ಅಂಕರವಳ್ಳಿ, ಜಿ.ಪಂ. ಮಾಜಿ ಸದಸ್ಯ ಕೆ.ಜೆ. ಲೋಲಾಕ್ಷಮ್ಮ, ತಾಪಂ ಮಾಜಿ ಅಧ್ಯಕ್ಷ ಹೆಚ್. ಗಣಪತಿ, ಹಿರಿಯ ವಕೀಲರಾದ ಎಂ.ಆರ್. ಪಾಟೀಲ್, ಜಯಶೀಲಗೌಡ, ಡಾ. ಹೆಚ್.ಇ. ಜ್ಞಾನೇಶ್, ವಿಜಯೇಂದ್ರಗೌಡ ಜಡೆ, ಡಿ. ಶಿವಯೋಗಿ, ಅಕ್ಕನ ಬಳಗದ ರೇಣುಕಮ್ಮ ಗೌಳಿ, ರೇಖಾ ಜಗದೀಶಗೌಡ, ಉಮಾ ಚಂದ್ರಶೇಖರ್, ಜಯಮಾಲಾ, ಪುಷ್ಪಾ ವಿಶ್ವನಾಥ, ರೂಪ ಸಿದ್ದಲಿಂಗ, ಹೇಮರಾಜ ಪಾಟೀಲ್, ನಿಜಗುಣ ಚಂದ್ರಶೇಖರ್ ಮೊದಲಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ