ಧಾರವಾಡ:
ಕ್ರಿಸ್ಮಸ್ ಹಬ್ಬದಲ್ಲಿ ರಜೆ ಹೊಂದಿಸಿಕೊಳ್ಳಲು ಹಿಂದೂ ಹಬ್ಬವಾದ ದಸರಾದ ರಜೆಗಳನ್ನು ರದ್ದುಪಡಿಸಿ ಹಬ್ಬದ ಸಮಯದಲ್ಲಿ ಶಾಲೆ ಆರಂಭಿಸಿರುವ ಕ್ರಿಶ್ಚಿಯನ್ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಇತ್ತೀಚೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಡಿಡಿಪಿಐ ಕಚೇರಿ ಎದುರು ಪ್ರತಿಭಟಿಸಲಾಗಿತ್ತು. ಸ್ಪಂದಿಸಿದ ಡಿಡಿಪಿಐ ಎಸ್.ಎಸ್. ಕೆಳದಿಮಠ, ರಜಾ ಅವಧಿಯಲ್ಲಿ ಪರೀಕ್ಷೆ ನಡೆಸುವಂತಿಲ್ಲ ಹಾಗೂ ಸೆ. 25ರಿಂದ ಸಂಪೂರ್ಣ ಶಾಲೆಗೆ ರಜೆ ನೀಡಬೇಕೆಂದು ಆದೇಶಿಸಿದ್ದರು. ಆದರೂ ಬಾಸೆಲ್ ಮಿಶನ್ ಸಂಸ್ಥೆಯು ತರಗತಿ ನಡೆಸುತ್ತಿರುವುದು ಯಾವ ನ್ಯಾಯ ಎಂದು ಸಂಘದ ಮುಖಂಡರಾದ ಅಣ್ಣಪ್ಪದಿವಟಗಿ ಹಾಗೂ ಇತರರು ಖೇದ ವ್ಯಕ್ತಪಡಿಸಿದರು.
ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯು ಪಾಲಕರನ್ನು ಶಾಲೆಗೆ ಕರೆಯಿಸಿ ಮಕ್ಕಳನ್ನು ತರಗತಿಯಿಂದ ಹೊರ ಬಿಡಲಾಯಿತು. ಜೊತೆಗೆ ಅ. 7ರ ವರೆಗೆ ಶಾಲೆಗೆ ರಜೆ ಘೋಷಿಸಲಾಯಿತು.