ಗದಗ: ಪೌಷ್ಠಿಕ ಆಹಾರ ಸೇವನೆಯಿಂದ ಸದೃಢ ಆರೋಗ್ಯ ಪಡೆಯಬಹುದು. ಮಕ್ಕಳು ಹಿತಮಿತ ಆಹಾರ ಸೇವನೆ, ಸರಿಯಾದ ಆರೋಗ್ಯ ಕ್ರಮ ಅನುಸರಿಸಬೇಕೆಂದು ಡಾ. ರಾಮಚಂದ್ರ ಹಂಸನೂರ ಹೇಳಿದರು.
ರಕ್ತ ತಪಾಸಿಗ ಡಾ.ದತ್ತಾತ್ರೇಯ ವೈಕುಂಠೆ ಮಾತನಾಡಿ, ಹಸಿರು ಕಾಯಿಪಲ್ಲೆಗಳು ಮೊಳಕೆ ಕಾಳುಗಳು, ತಪ್ಪಲು ಪಲ್ಲೆಗಳು ಆರೋಗ್ಯಕ್ಕೆ ಪೂರಕವಾಗಿವೆ. ಊಟ ಮಾಡುವಾಗ ಮಕ್ಕಳು ತರಕಾರಿ ಸೇವಿಸುವದನ್ನು ರೂಢಿಸಿಕೊಳ್ಳಬೇಕು ಎಂದರು.
ಈ ವೇಳೆ ಭಾವಸಾರ ವಿಜನ್ದ ಆರ್.ಎಸ್. ತ್ರಿಮಲ್ಲೇ, ಜಯಶ್ರೀ ತ್ರಿಮಲ್ಲೆ, ಕೆ.ಎಸ್.ಬೇಲೇರಿ, ಕೆ.ಬಿ.ಬಾಗೇವಾಡಿ, ವಿ.ಎಚ್. ಪಾಟೀಲ, ಉಮಾ ದಾನೇಶ್ವರಮಠ, ಎಂ.ಎಸ್. ಪಾಟೀಲ, ವಿಜಯಲಕ್ಷ್ಮೀ ಪೂಜಾರ, ವಿ.ವಿ. ಪಾಟೀಲ, ನೀಲಾ ಪಲ್ಲೇದ, ಶಾರದಾ ವಡ್ಡಿನ, ಗೀತಾ ದಾನೇಶ್ವರಮಠ, ಬಸಮ್ಮ ಅರಳಿಕಟ್ಟಿ, ಸಾವಿತ್ರಿ ಕಾತರಕಿ, ಕಸ್ತೂರಿ ಕಟ್ಟಿಮನಿ ಲಕ್ಷ್ಮವ್ವ ನಾಯಕ ಇದ್ದರು. ಎಚ್.ಪಿ. ಹಿರೇಮಠ ಸ್ವಾಗತಿಸಿದರು. ಎಸ್.ಎಂ. ತಳವಾರ ನಿರೂಪಿಸಿದರು. ಜಿ.ಸಿ. ಪಾಟೀಲ ವಂದಿಸಿದರು. ಮುಂತಾದವರಿದ್ದರು.