ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿಡುವಳಲು ಗ್ರಾಮದಲ್ಲಿ ನಿರ್ಮಾಣ ಮಾಡಿರುವಂತ ಗ್ರಾಮ ಪಂಚಾಯಿತಿ ಕಟ್ಟಡವು ಅತ್ಯಂತ ಸುಸಜ್ಜಿತವಾಗಿದ್ದು ಜಿಲ್ಲೆಯಲ್ಲೇ ಒಂದು ಮಾದರಿ ಕೇಂದ್ರವಾಗಿದೆ ಎಂದು ಶಾಸಕ ಬಿ. ಸುರೇಶ್ ಗೌಡ ಬಣ್ಣಿಸಿದರು. ಅವರು ನಿಡುವಳಲು ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿಗಳು ಸ್ಥಳೀಯವಾಗಿ ನಾಗರಿಕರಿಗೆ ಸ್ಪಂದಿಸುವಂತಹ ಕೇಂದ್ರಗಳಾಗಬೇಕು. ಗಾಂಧೀಜಿ ಕಂಡಂತ ಗ್ರಾಮ ಸ್ವರಾಜ್ಯದ ಕಲ್ಪನೆಯಡಿ ಗ್ರಾಮಗಳಲ್ಲಿ ಜನರಿಗೆ ಬೇಗ ಸೌಲಭ್ಯಗಳು ದೊರಕಲಿ ಜನರ ಬಾಗಿಲಿಗೆ ಪಂಚಾಯಿತಿ ಬರಲಿ ಎಂಬ ಸದುದ್ದೇಶದಿಂದ ಗ್ರಾಮ ಪಂಚಾಯಿತಿಗಳ ಪರಿಕಲ್ಪನೆ ಅಸ್ತಿತ್ವಕ್ಕೆ ಬಂದಿವೆ ಎಂದರು. ಗಾಂಧೀಜಿ ಅವರು ಕಂಡಂತ ಕನಸು ನನಸಾಗಬೇಕು ಎಂದರೆ ಕೇವಲ ಕಟ್ಟಡಗಳು ಸಚ್ಚಿತವಾಗಿ ಅಂದ ಚಂದವಾಗಿ ಇದ್ದರೆ ಸಾಲದು ಕಟ್ಟಡದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಕೂಡ ನಾಗರೀಕರಿಗೆ ಉತ್ತಮವಾಗಿ ಸ್ಪಂದಿಸಿ ಜನಪರವಾದಂತಹ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ನಿಡುವಳಲು ಒಂದು ಮಾದರಿ ಕೇoದ್ರ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಯವರು ಇದನ್ನು ನೋಡಬೇಕು ಎಲ್ಲರೂ ಇದೇ ರೀತಿಯ ಕಟ್ಟಡ ನರ್ಮಾಮಣ ಮಾಡಿಕೊಳ್ಳಬಹುದು ಅಷ್ಟು ಸುಂದರವಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತರಾಯಪ್ಪ ಉಪಾಧ್ಯಕ್ಷೆ ಚಂದ್ರಕಲಾ ಯೋಗೀಶ್, ಸದಸ್ಯರುಗಳು ಗ್ರಾಮಸ್ಥರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಬಿಜೆಪಿ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.