ಸಬಿ.ಜಿ.ಕೆರೆ ಬಸವರಾಜ
ಸದಾ ಬರದ ದವಡೆಗೆ ಸಿಲುಕುತ್ತಿದ್ದ ಜನರಿಗೆ ಕಳೆದ ಬಾರಿ ಕರುಣಿಸಿದ ವರುಣ ಈ ಭಾಗದ ಪ್ರಮುಖ ಜಲಪಾತ್ರೆಗಳಲ್ಲಿ ಜೀವ ಕಳೆ ತರಿಸಿ ಅಂತರ್ಜಲ ಸುಸ್ತಿರವಾಗಿಸಿದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಬವಣೆಯಿಂದ ತಾಲೂಕು ಹೊರಬರುವಂತಾಗಿದೆ.
ಹೇಳಿ ಕೇಳಿ ಬರಗಾಲ ಪೀಡಿತ ಪ್ರದೇಶ ಕಳೆದ ಎರಡು ದಶಕದಲ್ಲಿ 14 ಬಾರಿ ತಾಲೂಕು ಬರದ ದವಡೆಗೆ ಸಿಲುಕಿದೆ. ಎತ್ತ ಸಾಗಿದರೂ ಬಂಡೆಗಳ ಸಾಲು. ಉರಿ ಬಿಸಿಲ ತಾಪಕ್ಕೆ ಹೈರಾಣಾಗುತ್ತಿರುವ ಜನ ಜಾನುವಾರುಗಳಿಗೆ ದಾಹ ಇಂಗಿಸಿಕೊಳ್ಳಲುಹನಿ ನೀರು ಸಿಗದಂತಾ ಸ್ಥಿತಿ. ಸಾವಿರ ಅಡಿ ಗುರಿ ಇಟ್ಟು ಕೊರೆದರೂ ಫಲ ನೀಡದ ಕೊಳವೆ ಬಾವಿಗಳು. ಇಂತಹ ಸನ್ನಿವೇಶದ ನಡುವೆ ಬದುಕುತ್ತಿದ್ದ ತಾಲೂಕಿನ ಜನತೆಗೆ ಕಳೆದ ಬಾರಿ ಸುರಿದ ಭರ್ಜರಿ ಮಳೆಯಿಂದ ಪ್ರಮುಖ ಜಲ ಪಾತ್ರೆಗಳು ತುಂಬಿ ಅಂತರ್ಜಲ ಹೆಚ್ಚಿಸಿರುವ ಪರಿಣಾಮ ಪ್ರತಿ ಬಾರಿ ಎದುರಾಗುತ್ತಿದ್ದ ಕುಡಿಯುವ ನೀರಿನ ಆತಂಕ ದೂರವಾಗಿದೆ.
ಕಳೆದ ಬಾರಿಯ ಉತ್ತಮ ಮಳೆಯಿಂದಾಗಿ ಕೆರೆಕಟ್ಟೆಗಳು ಭರ್ತಿಯಾಗಿರುವ ಪರಿಣಾಮ ಪ್ರಸ್ತುತ ದಿನಗಳಲ್ಲಿ ದೇವಸಮುದ್ರ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಇನ್ನೆರಡು ವರ್ಷಗಳ ಕಾಲ ಕೊಳವೆ ಬಾವಿಗಳಲ್ಲಿ ಅಂತರ್ಜಲದ ಕೊರತೆ ಬಾಧಿಸುವುದಿಲ್ಲ.
-ಲಕ್ಷ್ಮಿ ಚಂದ್ರಣ್ಣ, ಗ್ರಾಪಂ ಅಧ್ಯಕ್ಷೆ ದೇವಸಮುದ್ರ
ಬರದ ಬವಣೆಯಿಂದ ಅಂತರ್ಜಲ ಕಡಿಮೆಯಾಗಿ ಸಾವಿರಾರು ಅಡಿ ಬೋರ್ ಕೊರೆದರೂ ಹನಿ ನೀರು ಸಿಗದೆ ಪರಿತಪಿಸುವಂತಾಗಿತ್ತು. ಉತ್ತಮ ಮಳೆಯಿಂದಾಗಿ ಈ ಬಾರಿ ಮಾರ್ಚ್ ಅಂತ್ಯ ಸಮೀಪಿಸುತ್ತಿದ್ದರೂ ಬಿ.ಜಿ.ಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ.ಆದರೂ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದೇವೆ.
-ಎಸ್.ಜಯಣ್ಣ. ಅಧ್ಯಕ್ಷ .ಬಿ.ಜಿ.ಕೆರೆ ಗ್ರಾಮ ಪಂಚಾಯಿತಿ.ತಾಲೂಕಿನ ಗಡಿ ಭಾಗದಲ್ಲಿರುವ ಸಂತೆಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿಲ್ಲ.ಕೆಲ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎನ್ನಲಾಗುತ್ತಿದೆ ಪರಿಶೀಲಿಸಿ ಮತ್ತಷ್ಟು ಪೈಪುಗಳನ್ನು ಇಳಿಸಿ ಸಮಸ್ಯೆ ಬರದಂತೆ ಎಚ್ಚರವಹಿಸುತ್ತೇವೆ
-ಓ.ಶಿಲ್ಪ ಗೋವಿಂದಪ್ಪ, ಅಧ್ಯಕ್ಷೆ ಸಂತೆಗುಡ್ಡ ಗ್ರಾಪಂ