ಕನ್ನಡಪ್ರಭ ವಾರ್ತೆ ಮಂಗಳೂರುಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಯಾವ ಕಾರ್ಯಕ್ರಮ ಜಾರಿಗೆ ತಂದರೂ ಕೆಲವು ಶಕ್ತಿಗಳು ವಿರೋಧ ಮಾಡುತ್ತಲೇ ಬಂದಿವೆ. ಬಡತನ ಹಾಗೂ ಹಸಿವು ನಿರ್ಮೂಲನ ಕಾರ್ಯಕ್ರಮ ಹಾಕಿಕೊಂಡಾಗಲೂ ಜನತೆ ಸೋಮಾರಿಗಳಾಗಿರುತ್ತಾರೆ ಎಂದು ಹೇಳುತ್ತಿದ್ದರು. ರಾತ್ರಿ ಯಾರು ಕೂಡ ಹೊಟ್ಟೆಗೆ ಇಲ್ಲದೆ ಮಲಗಬಾರದು ಎಂದು ಮನಮೋಹನ ಸಿಂಗ್, ಸೋನಿಯಾ ಗಾಂಧಿ ಅವರು ಆಹಾರ ಸ್ಕೀಮ್ ಜಾರಿಗೆ ತಂದರು. ಆಹಾರ ಭದ್ರತೆ ಕಾಯ್ದೆ ಮೂಲಕ ದೇಶದ 80 ಕೋಟಿ ಮಂದಿಗೆ ಅನ್ನ ನೀಡಲಾಗುತ್ತಿದೆ. ಇದರಿಂದ ಯಾರೂ ಕೂಡ ಸೋಮಾರಿ ಆಗುವುದಿಲ್ಲ. ಜನತೆ ಜೀವನ ನಡೆಸಲು ಅನುಕೂಲವಾಗಲಿ, ಬೆಲೆ ಏರಿಕೆ ಹೊಡೆತದಿಂದ ಉಳಿದುಕೊಳ್ಳಲಿ ಎಂದು ಸರ್ಕಾರ ಈ ಪ್ರಯತ್ನ ಮಾಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸಮರ್ಥಿಸಿದ್ದಾರೆ.
ನಾಯಕತ್ವ ಬದಲಾವಣೆಗೆ ಅಲ್ಲ:
ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯಕ್ಕೆ ಆಗಮಿಸಿ, ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಬಗ್ಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆಯೇ ವಿನಃ ನಾಯಕತ್ವ ಬದಲಾವಣೆಗೆ ಅಲ್ಲ. ಶಾಸಕರ ಅನುದಾನ ಹಂಚಿಕೆ ವಿಳಂಬ ಸಮಸ್ಯೆ ಬಗ್ಗೆ ಪರಿಹಾರ ಕೈಗೊಳ್ಳಲು ಸೂಚಿಸಿದ್ದಾರೆ. ಇನ್ನು ಸಚಿವರಲ್ಲೂ ಮಾತನಾಡಿ, ಅವರ ಸಾಧನೆಯ ವರದಿ ಪರಾಮರ್ಶಿಸಿದರೆ ತುಂಬ ಒಳ್ಳೆಯದು ಎಂದರು.ಬಡವರ ಬಗ್ಗೆ ಮೋದಿ ಮೌನ:
ಮಂಗ್ಳೂರಲ್ಲಿ ಸರ್ವಧರ್ಮ ಸಭೆ ನಡೆಯಲಿ
ಮಂಗಳೂರಲ್ಲಿ ಸೌಹಾರ್ದತೆ ವಾತಾವರಣ ನೆಲೆಗೊಳಿಸುವ ಸಲುವಾಗಿ ನಮ್ಮ ತಂಡ ಸರ್ಕಾರಕ್ಕೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಸರ್ವಧರ್ಮ ಗುರುಗಳ ಸಭೆ ನಡೆಯಬೇಕು. ಈ ಮೂಲಕ ಸಮಾಜಕ್ಕೆ ಶಾಂತಿ, ಸೌಹಾರ್ದತೆಯ ಸಂದೇಶ ಸಾರಬೇಕು. ಶಾಂತಿ ಸಮಿತಿ ಸಭೆ, ರಾಜಕಾರಣಿಗಳ ಸಭೆ ನಡೆಸಿದರೆ ಪ್ರಯೋಜನವಾಗದು. ಇಲ್ಲಿ ಶಾಂತಿ, ಸೌಹಾರ್ದತೆ ನೆಲೆಸದಿದ್ದರೆ ಹಳೆ ಕೇರಳದಂತೆ ದ.ಕ. ಹುಚ್ಚಾಸ್ಪತ್ರೆ ಆಗುವುದರಲ್ಲಿ ಸಂಶಯ ಇಲ್ಲ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.