ಕೃಷ್ಣಮಠದಲ್ಲಿ ಗೂಡುದೀಪ ಸ್ಪರ್ಧೆ: ರಕ್ಷಿತ್ ಮಂಗಳೂರು, ಜಗದೀಶ್ ಬಜಪೆ ಪ್ರಥಮ

KannadaprabhaNewsNetwork |  
Published : Oct 29, 2024, 12:59 AM IST
28ಗೂಡುದೀಪ | Kannada Prabha

ಸಾರಾಂಶ

ಸಾಂಪ್ರದಾಯಿಕ ವಿಭಾಗದಲ್ಲಿ ಪ್ರಥಮ ಬಹುಮಾನ ರಕ್ಷಿತ್ ಕುಮಾರ್ ಮಂಗಳೂರು, ಆಧುನಿಕ ವಿಭಾಗದ ಗೂಡುದೀಪ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಜಗದೀಶ್ ಅಮೀನ್ ಬಜಪೆ ಪಡೆದರು.

ಕನ್ನಡಪ್ರಭ ವಾರ್ತೆ ಉಡುಪಿ

ದೀಪಾವಳಿ ಹಬ್ಬದ ಪ್ರಯುಕ್ತ ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದಿಂದ ಆಯೋಜಿಸಲಾದ ಗೂಡು ದೀಪ ಸ್ಪರ್ಧೆಯನ್ನು ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸೋಮವಾರ ಮಧ್ವಾಂಗಣದಲ್ಲಿ ಉದ್ಘಾಟಿಸಿದರು. ಗೂಡುದೀಪ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪುಟಾಣಿಗಳಿಗೆ ಅನುಗ್ರಹಪತ್ರವನ್ನು ವಿತರಿಸಿದರು.

ಪ್ರಾಚೀನ ಸಾಂಸ್ಕೃತಿಕ ಪರಂಪರೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವ ಗುರಿಯೊಂದಿಗೆ ಸಾಂಪ್ರದಾಯಿಕ ಮತ್ತು ಆಧುನಿಕ ಗೂಡುದೀಪಗಳ ರಚನೆಯ ಈ ಸ್ಪರ್ಧೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಈ ಸಂದರ್ಭ ಪರ್ಯಾಯ ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಈಶ್ವರ ಶೆಟ್ಟಿ ಚಿಟ್ಪಾಡಿ ಮುಂತಾದವರಿದ್ದರು.* ಸ್ಪರ್ಧೆಯ ಫಲಿತಾಂಶ:

ಸಾಂಪ್ರದಾಯಿಕ ವಿಭಾಗದಲ್ಲಿ ಪ್ರಥಮ ಬಹುಮಾನ ರಕ್ಷಿತ್ ಕುಮಾರ್ ಮಂಗಳೂರು, ದ್ವಿತೀಯ ಬಹುಮಾನ ನಾಗೇಂದ್ರ ಕೋಟ, ತೃತೀಯ ಬಹುಮಾನ ವಿದ್ಯಾ ಅದಿತಿ ಉಡುಪಿ, ಸಮಾಧಾನಕರ ಬಹುಮಾನ ಕೌಶಿಕ್ ಉಡುಪಿ ಮತ್ತು ಶೋಭಿತ್ ತೆಕ್ಕೆಟ್ಟೆ ಪಡೆದಿರುತ್ತಾರೆ.ಆಧುನಿಕ ವಿಭಾಗದ ಗೂಡುದೀಪ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಜಗದೀಶ್ ಅಮೀನ್ ಬಜಪೆ, ದ್ವಿತೀಯ ಬಹುಮಾನ ಗೀತಾ ಮಲ್ಯ ಮಂಗಳೂರು, ತೃತೀಯ ಬಹುಮಾನ ವೈಶಾಲ್ ಅಂಚನ್ ಕಟೀಲು, ಸಮಾಧಾನಕರ ಬಹುಮಾನ ಪಂಚಮಿ ಪ್ರೀತಂ ಪರ್ಕಳ, ನಾಗಶ್ರೀ ರಾವ್ ಮಾರ್ಪಳ್ಳಿ ಮತ್ತು ಸಿಂಧೂರ ಬೈಲಕೆರೆ ಗಳಿಸಿರುತ್ತಾರೆ.

* ಇಂದು ಪ್ರದರ್ಶನ, ಬಹುಮಾನ ವಿತರಣೆಈ ಸ್ಪರ್ಧೆಯಲ್ಲಿ ರಚಿಸಲಾದ ಗೂಡುದೀಪಗಳನ್ನು ಅ.29ರಂದು ರಾಜಾಂಗಣದಲ್ಲಿ ಪ್ರದರ್ಶನ ಮಾಡಲಾಗುತ್ತದೆ ಮತ್ತು ಸಂಜೆ 5.30ಕ್ಕೆ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಎಂದು ಶ್ರೀಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು