ಎಂಎಸ್‌ಆರ್‌ಎಸ್‌ ಕಾಲೇಜಿನಲ್ಲಿ ಸ್ಟಾಕ್‌ ಮಾರ್ಕೆಟ್‌ ಕುರಿತು ಅತಿಥಿ ಉಪನ್ಯಾಸ

KannadaprabhaNewsNetwork |  
Published : Mar 13, 2025, 12:45 AM IST
12ಎಂಎಸ್‌ಆರ್‌ಎಸ್‌ | Kannada Prabha

ಸಾರಾಂಶ

ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ಲಕ್ ಆಂಡ್ ರಿಯಾಲಿಟಿ ಇನ್ ಸ್ಟಾಕ್ ಮಾರ್ಕೆಟ್ ವಿಷಯದ ಕುರಿತು ಅತಿಥಿ ಉಪನ್ಯಾಸ ಆಯೋಜಿಸಲಾಯಿತು. ಬೆಂಗಲೂರಿನ ಸಿಂಪ್ಲಸ್ ಪೈನಾನ್ಸಿಯಲ್ ಕನ್ಸಲ್ಟೆನ್ಸಿ ಪ್ರ್ಯೆವೇಟ್ ಲಿಮಿಟೆಡ್ ನ ಸ್ಥಾಪಕ ಹಾಗೂ ನಿರ್ದೇಶಕ ದೀಪಕ್ ಕೆ. ರಾವ್ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ಲಕ್ ಆಂಡ್ ರಿಯಾಲಿಟಿ ಇನ್ ಸ್ಟಾಕ್ ಮಾರ್ಕೆಟ್ ವಿಷಯದ ಕುರಿತು ಅತಿಥಿ ಉಪನ್ಯಾಸ ಆಯೋಜಿಸಲಾಯಿತು. ಬೆಂಗಲೂರಿನ ಸಿಂಪ್ಲಸ್ ಪೈನಾನ್ಸಿಯಲ್ ಕನ್ಸಲ್ಟೆನ್ಸಿ ಪ್ರ್ಯೆವೇಟ್ ಲಿಮಿಟೆಡ್ ನ ಸ್ಥಾಪಕ ಹಾಗೂ ನಿರ್ದೇಶಕ ದೀಪಕ್ ಕೆ. ರಾವ್ ಉಪನ್ಯಾಸ ನೀಡಿದರು.

ಶೇರು ಮಾರುಕಟ್ಟೆಯ ವಾಸ್ತವತೆ, ಹೂಡಿಕೆಗಳ ಬಗ್ಗೆ ಸರಿಯಾದ ಯೋಜನೆ ಹಾಗೂ ಅದೃಷ್ಟಕ್ಕಿಂತ ಜಾಣ್ಮೆಯ ಹೂಡಿಕೆಯ ಮಹತ್ವ ಎಂಬ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ವಿದ್ಯಾರ್ಥಿಗಳು ಹಾಗೂ ಬೋಧಕ ವೃಂದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಈ ಉಪನ್ಯಾಸ ವಿದ್ಯಾರ್ಥಿಗಳಿಗೆ ಆರ್ಥಿಕ ಜಾಗೃತಿ ಹಾಗೂ ಪ್ರೇರಣೆ ನೀಡುವಂತೆ ಮಾಡಿತು. ಶೇರು ಮಾರುಕಟ್ಟೆಯ ಪ್ರಾಯೋಗಿಕ ಹೂಡಿಕೆಯ ಪ್ರಾತ್ಯಕ್ಷಿಕೆ ವಿದ್ಯಾರ್ಥಿಗಳಲ್ಲಿ ಹೊಸ ಅರಿವನ್ನು ಮೂಡಿಸಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಮಿಥುನ್ ಚಕ್ರವರ್ತಿ ವಹಿಸಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಸೋನಾ ಎಚ್.ಸಿ. ಸ್ವಾಗತಿಸಿದರು, ದೈವಿಕ್ ಶೆಟ್ಟಿ ನಿರೂಪಿಸಿದರು. ದೀಕ್ಷಿತ್ ಶೆಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ