ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಇಲ್ಲಿನ ಹವ್ಯಕ ಭವನದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದ ಅವರು ಈ ಉದ್ದೇಶದಿಂದ ಡಿ. ೩೦ ರಿಂದ ಜನವರಿ ೯ರ ವರೆಗೆ ಗೋಕರ್ಣದ ಅಶೋಕೆಯ ಮೂಲ ಮಠದಲ್ಲಿ ಹಮ್ಮಿಕೊಳ್ಳಲಾಗಿರುವ ಅತಿರುದ್ರ ಅಭಿಷೇಕ ಸಾಮೂಹಿಕ ರುದ್ರಪಠಣ ಕಾರ್ಯಕ್ರಮದಲ್ಲಿ ಎಲ್ಲ ಸದ್ಭಕ್ತರೂ ಪಾಲ್ಗೊಳ್ಳುವ ಮೂಲಕ ಕೃತಾರ್ಥರಾಗಬೇಕು ಎಂದರು. ಜ. 9ರಂದು ಎಲ್ಲ ಶಿಷ್ಯ ಭಕ್ತರು ಸೇರಿ ಮೂಲ ಮಠದಲ್ಲಿ ಪ್ರಾರ್ಥನೆ ಸಲ್ಲಿಸೋಣ ಎಂದರು.
ಭಕ್ತರು ಪೂಜೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಶ್ರೀರಾಮನ ಕೃಪೆಗೆ ಪಾತ್ರರಾಗಬೇಕು. ಕೇವಲ ಮಂತ್ರಾಕ್ಷತೆಯನ್ನಷ್ಟೇ ಸ್ವೀಕರಿಸಿದರೆ ಸಾಲದು. ಶ್ರೀರಾಮನ ಪೂಜೆ, ಗುರು ದರ್ಶನ ಮತ್ತು ಮಂತ್ರಾಕ್ಷತೆಯ ಮೂಲಕ ಇಚ್ಛಿತ ಫಲವನ್ನು ಪಡೆಯಬಹುದು ಎಂದು ನುಡಿದರು.ಇದಕ್ಕೂ ಮುನ್ನ ಶುಕ್ರವಾರ ಮುಂಜಾನೆ ಆಗಮಿಸಿದ ಶ್ರೀಗಳನ್ನು ಸ್ವಾಗತಿಸಿ, ಧೂಳಿ ಪೂಜೆ ನೆರವೇರಿಸಿದ ಬಳಿಕ ಶ್ರೀರಾಮ ಪೂಜೆಯನ್ನು ರಾಘವೇಶ್ವರ ಭಾರತೀ ಸ್ವಾಮೀಜಿಗಳು ನೆರವೇರಿಸಿದರು. ಭಕ್ತರು, ಶಿಷ್ಯರು ಫಲ ಸಮರ್ಪಿಸಿದರು. ಶ್ರೀಗಳು ಫಲ ಮಂತ್ರಾಕ್ಷತೆ ನೀಡಿದರು.
ಸ್ವರ್ಣ ಪಾದುಕೆ ಕುರಿತಂತೆ ಭಾಸ್ಕರ್ ಹೆಗಡೆ ಅವರು ಸವಿಸ್ತಾರವಾಗಿ ವಿವರಿಸಿದರಲ್ಲದೇ ಸ್ವರ್ಣ ಪಾದುಕೆಯ ಕಾಣಿಕೆ ನೇರವಾಗಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೇ ಸೇರಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸ್ವರ್ಣಪಾದುಕೆ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು. ಗವ್ಯೋತ್ಪನ್ನದ ಮಹತ್ವ ಹಾಗೂ ಪ್ರಯೋಜನ ಕುರಿತು ದತ್ತಾತ್ರೇಯ ಭಟ್ಟ ವಿವರಿಸಿದರು.