ರೈತರ ಸಂಘಟಿಸುವಲ್ಲಿ ಎಚ್‌.ಎಸ್‌.ರುದ್ರಪ್ಪ ಅಪಾರ ಶ್ರಮ

KannadaprabhaNewsNetwork |  
Published : Jul 20, 2025, 01:21 AM IST
ಹೊನ್ನಾಳಿ ಫೋಟೋ 19ಎಚ್.ಎಲ್.ಐ1. ಪಟ್ಟಣದ ನ್ಯಾಮತಿ-ಶಿಕಾರಿಪುರ ರಸ್ತೆಯ ಅಪ್ಪರ್‌ತುಂಗ ಸರ್ಕಲ್ ಬಳಿ ಹೊಸಕೊಪ್ಪ ಗ್ರಾಮದ ದಿ.ಹೆಚ್.ಎಸ್.ರುದ್ರಪ್ಪನವರ 34 ನೇ ವರ್ಷದ  ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ  ಶ್ರದ್ದಾಂಜಲಿ  ಕಾರ್ಯಕ್ರಮದಲ್ಲಿ   ದಿ. ಎಚ್.ಎಸ್.ರುದ್ರಪ್ಪ ಅವರ ಪುತ್ಥಳಿಗೆ  ರೈತ ಸಂಘದವರು  ಪುಪ್ಪಹಾರ ಹಾಕಿ,     ಗೌರವ ಸಮರ್ಪಿಸಿ ಮಾತನಾಡಿದರು.  | Kannada Prabha

ಸಾರಾಂಶ

ರಾಜ್ಯದ ಉದ್ದಗಲಕ್ಕೂ ರೈತರ ಸಂಘಟನೆಗಳನ್ನು ಸಂಘಟಿಸುವಲ್ಲಿ ಹೊಸಕೊಪ್ಪ ಗ್ರಾಮದ ದಿವಂಗತ ಎಚ್.ಎಸ್.ರುದ್ರಪ್ಪ ಅತ್ಯಂತ ಪ್ರಮುಖ ಪಾತ್ರವಹಿಸಿ, ರೈತರ ಹಿತರಕ್ಷಣೆಗೆ ನಿರಂತರ ಶ್ರಮಿಸಿದ್ದರು ಎಂದು ರೈತ ಮುಖಂಡ ಬಿದರಗಡ್ಡೆ ಭರಮಪ್ಪಗೌಡ ಹೇಳಿದ್ದಾರೆ.

- 34ನೇ ಪುಣ್ಯಸ್ಮರಣೆಯಲ್ಲಿ ರೈತ ಮುಖಂಡ ಬಿದರಗಡ್ಡೆ ಭರಮಪ್ಪ ಗೌಡ ಶ್ಲಾಘನೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಜ್ಯದ ಉದ್ದಗಲಕ್ಕೂ ರೈತರ ಸಂಘಟನೆಗಳನ್ನು ಸಂಘಟಿಸುವಲ್ಲಿ ಹೊಸಕೊಪ್ಪ ಗ್ರಾಮದ ದಿವಂಗತ ಎಚ್.ಎಸ್.ರುದ್ರಪ್ಪ ಅತ್ಯಂತ ಪ್ರಮುಖ ಪಾತ್ರವಹಿಸಿ, ರೈತರ ಹಿತರಕ್ಷಣೆಗೆ ನಿರಂತರ ಶ್ರಮಿಸಿದ್ದರು ಎಂದು ರೈತ ಮುಖಂಡ ಬಿದರಗಡ್ಡೆ ಭರಮಪ್ಪಗೌಡ ಹೇಳಿದರು.

ಪಟ್ಟಣದ ನ್ಯಾಮತಿ-ಶಿಕಾರಿಪುರ ರಸ್ತೆಯ ಅಪ್ಪರ್‌ ತುಂಗಾ ಸರ್ಕಲ್ ಬಳಿ ಹೊಸಕೊಪ್ಪ ಗ್ರಾಮದ ದಿ. ಎಚ್.ಎಸ್. ರುದ್ರಪ್ಪ ಅವರ 34ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ದಿ. ಎಚ್.ಎಸ್. ರುದ್ರಪ್ಪ ಪುತ್ಥಳಿಗೆ ಪುಷ್ಪಹಾರ ಹಾಕಿ, ಗೌರವ ಸಮರ್ಪಿಸಿ ಅವರು ಮಾತನಾಡಿದರು.

ಕಳೆದ ನಾಲ್ಕೈದು ದಶಕಗಳ ಹಿಂದೆ ರೈತ ಸಂಘಟನೆಗಳು ಇಲ್ಲದೇ ಇದ್ದ ಸಂದರ್ಭ ಹೊನ್ನಾಳಿ ತಾಲೂಕಿನ ಹೊಸಕೊಪ್ಪದ ದಿ. ಎಚ್.ಎಸ್. ರುದ್ರಪ್ಪ ಅವರು ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ಎಲ್ಲ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ, ರೈತ ಸಂಘಗಳನ್ನು ಹುಟ್ಟುಹಾಕಿದ ಪ್ರಮುಖರಲ್ಲಿ ಒಬ್ಬರು. ಅಂದಿನ ಸಂದರ್ಭದಲ್ಲೇ ರೈತ ಸಂಘಟನೆಗಳಿಂದ ಸರ್ಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸುವಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಿದರು ಎಂದು ಶ್ಲಾಘಿಸಿದರು.

ದಿ.ರುದ್ರಪ್ಪ ಸಹೋದರನ ಪುತ್ರ ಡಾ. ಎಚ್.ಎಸ್. ರುದ್ರೇಶ್ ಮಾತನಾಡಿ ಮೈಸೂರು ಸಂಸ್ಥಾನ ಅವಧಿಯಲ್ಲಿ ಕಡಿದಾಳ್ ಮಂಜಪ್ಪ ಮುಖ್ಯಮಂತ್ರಿ ಆಗಿದ್ದಾಗ ದಿ. ಎಚ್.ಎಸ್. ರುದ್ರಪ್ಪ ಅವರು ಅಂದಿನ ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ, ಕೃಷಿ ಸೇರಿದಂತೆ ಹಲವಾರು ಖಾತೆಗಳನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೈತ ಸಂಘಟನೆಗಳು ರುದ್ರಪ್ಪ ಅವರ ಆದರ್ಶ, ಮೌಲ್ಯಗಳನ್ನು ಮುಂದಿಟ್ಟುಕೊಂಡು ರೈತ ಹೋರಾಟ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದರು.

ಈ ಸಂದರ್ಭ ನ್ಯಾಮತಿ ತಾಲೂಕಿನ ರೈತ ಸಂಘ ಅಧ್ಯಕ್ಷ ದೊಡ್ಡೇರಿ ಬಸವರಾಜಪ್ಪ, ಹೊನ್ನಾಳಿ ರೈತ ಸಂಘದ ಮುಖಂಡ ಹಿರೇಮಠದ ಬಸವರಾಜಪ್ಪ ಮಾತನಾಡಿದರು.

ದಾವಣಗೆರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಶಾಸಕ ಡಿ.ಜಿ. ಶಾಂತನ ಗೌಡ ಅವರ ಪುತ್ರ ಸುರೇಂದ್ರಗೌಡ, ರೈತ ಮುಖಂಡರಾದ ಎಸ್.ಎನ್. ಗೋಪಾಲ ನಾಯ್ಕ, ಸಾಲಬಾಳ, ಗೋರಟ್ಟಿ ಮಂಜಪ್ಪ, ಶಿವಕುಮಾರ ಕುಂದೂರು, ಷಣ್ಮುಖಪ್ಪ, ಹಿರೇಮಠದ ರಮೇಶ್, ಚನ್ನಪ್ಪ, ಆನಂದಪ್ಪ, ನೀಲಪ್ಪ, ಚನ್ನೇಶ್ ಮತ್ತಿತರ ಮುಖಂಡರು ಇದ್ದರು.

- - -

-19ಎಚ್.ಎಲ್.ಐ1.ಜೆಪಿಜಿ:

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ದಿ. ಎಚ್.ಎಸ್.ರುದ್ರಪ್ಪ ಪುತ್ಥಳಿಗೆ ರೈತ ಮುಖಂಡರು ಪುಷ್ಪಹಾರ ಹಾಕಿ, ಗೌರವ ಸಮರ್ಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ