ಕನ್ನಡಪ್ರಭ ವಾರ್ತೆ ಮೈಸೂರು
ಸಹಜ ಸಮೃದ್ಧ ಹಾಗೂ ರೋಟರಿ ಕ್ಲಬ್ ಮೈಸೂರು ಪಶ್ಚಿಮ ಆಶ್ರಯದಲ್ಲಿ ನಡೆದ ಹಲಸಿನ ಹಬ್ಬದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಶಂಕರ ಮತ್ತು ಸಿದ್ದುವಿನಂತ ಹಲಸಿನ ತಳಿಗಳು ತಮ್ಮ ವಿಶಿಷ್ಟ ರುಚಿ ಮತ್ತು ಬಣ್ಣದಿಂದ ಹೆಸರು ಪಡೆದಿವೆ. ಇಂಥ ಪ್ರಾದೇಶಿಕ ಸೊಗಡಿನ ಅನೇಕ ಹಲಸಿನ ತಳಿಗಳು ಕರ್ನಾಟಕದಲ್ಲಿವೆ. ಅವನ್ನು ಜನಪ್ರಿಯಗೊಳಿಸುವ ಕೆಲಸ ನಡೆಯಬೇಕಿದೆ. ಇಂಥ ಮೇಳಗಳನ್ನು ಆಯೋಜಿಸುವ ಮೂಲಕ, ಗ್ರಾಹಕರಲ್ಲಿ ಹಲಸಿನ ಬಗ್ಗೆ ಜಾಗೃತಿ ಮೂಡಿಸುವುದು ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು.ಹಲಸಿನ ಹಣ್ಣಿನ ತೊಳೆ ತಿನ್ನುವ ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದರು. 50 ಸೆಕೆಂಡಿನಲ್ಲಿ 20 ಹಲಸಿನ ತೊಳೆ ತಿನ್ನುವ ಸ್ಪರ್ಧೆ ಏಡಿಸಲಾಗಿತ್ತು. ಕೆ.ಸಿ. ಸೋಮೇಶ್ 45 ಸೆಕೆಂಡಿನಲ್ಲಿ 15 ಹಲಸಿನ ತೊಳೆ ತಿಂದು ಪ್ರಥಮ ಸ್ಥಾನ ಗಳಿಸಿದರು. ಎಸ್.ಡಿ. ಮೋಹನ್ ಕುಮಾರ್ ದ್ವಿತೀಯ ಬಹುಮಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ 1.30 ನಿಮಿಷದಲ್ಲಿ 15 ಹಲಸಿನ ತೊಳೆ ತಿಂದ ಸಹನಾ ಮೊದಲ ಬಹುಮಾನಗಳಿಸಿದರು. ಸುಷ್ಮಾ 2ನೇ ಬಹುಮಾನ ಗಳಿಸಿದರು.