ಹೊಳೆನರಸೀಪುರದ ಹಂಗರಹಳ್ಳಿ ಲೆವೆಲ್‌ ಕ್ರಾಸಿಂಗ್‌: ವಾಹನ ಸಂಚಾರಕ್ಕೆ ಅವಕಾಶ

KannadaprabhaNewsNetwork |  
Published : Apr 18, 2024, 02:17 AM ISTUpdated : Apr 18, 2024, 02:18 AM IST
17ಎಚ್ಎಸ್ಎನ್11 : ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿ ಸಮೀಪದ ರೈಲ್ವೇ ಹಳಿ ಹತ್ತಿರ ಗೇಟ್ ಮರು ಸ್ಥಾಪಿಸಿದ್ದು, ಹಾಸನ ಮೈಸೂರು ನೇರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. | Kannada Prabha

ಸಾರಾಂಶ

ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿ ಸಮೀಪ ಹಿಂದಿನಂತೆ ರೈಲ್ವೆ ಹಳಿ ಸಮೀಪ ಗೇಟ್ ಅಳವಡಿಸಿ, ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಸನ ಮೈಸೂರು ರಸ್ತೆ ನೇರ ಓಡಾಟ ಮತ್ತೆ ಪುನರಾರಂಭವಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದರು.

ಫ್ಲೈ ಓವರ್‌ ಪೂರ್ಣವಾಗುವವರೆಗೆ ಲೆವೆಲ್‌ ಕ್ರಾಸಿಂಗ್‌ನಲ್ಲೇ ಓಡಾಟ । ಚಾಲಕರು, ಸವಾರರ ಸಂತಸ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಹಂಗರಹಳ್ಳಿ ಸಮೀಪ ಹಿಂದಿನಂತೆ ರೈಲ್ವೆ ಹಳಿ ಸಮೀಪ ಗೇಟ್ ಅಳವಡಿಸಿ, ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಸನ ಮೈಸೂರು ರಸ್ತೆ ನೇರ ಓಡಾಟ ಮತ್ತೆ ಪುನರಾರಂಭವಾಗಿದ್ದು, ವಾಹನ ಚಾಲಕರು ಹಾಗೂ ಸವಾರರು ಸಂತಸ ವ್ಯಕ್ತಪಡಿಸಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪಟ್ಟಣದಿಂದ ಹಾಸನಕ್ಕೆ ತೆರಳಬೇಕಾದ ಸಂದರ್ಭದಲ್ಲಿ ಅವರ ಕಾರು ಸುತ್ತಿ ಬಳಸಿ ತೆರಳಿತ್ತು. ಇದನ್ನು ಕಂಡು ವಿಷಯ ತಿಳಿದ ದೇವೇಗೌಡರು, ಜನತೆ ಅನುಭವಿಸುವ ಹಿಂಸೆ ಹಾಗೂ ಇಂಧನ ವ್ಯಯದ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಸಲಹೆ ನೀಡಿದ್ದರು. ಇದರ ಪರಿಣಾಮ ಫ್ಲೈ ಓವರ್ ಸಂಚಾರಕ್ಕೆ ಮುಕ್ತವಾಗುವ ತನಕ ಹಿಂದಿನಂತೆ ರೈಲ್ವೆ ಹಳಿ ಸಮೀಪ ಗೇಟ್ ಅಳವಡಿಸಿ, ಸಂಚಾರಕ್ಕೆ ಅವಕಾಶ ಕಲ್ಪಿಸಲು ಸೂಚಿಸಲಾಗಿದೆ.

ಪರಿಣಾಮ ಸೋಮವಾರ ಸಂಜೆಯಿಂದ ಹಾಸನ ಮೈಸೂರು ನೇರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾರಿ ವಾಹನಗಳನ್ನು ಹೊರತುಪಡಿಸಿ ಸೋಮವಾರ ಸಂಜೆಯಿಂದಲೇ ವಾಹನ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ನ್ಯಾಮನಹಳ್ಳಿಯ ಉದ್ಯಮಿ ಎನ್.ಆರ್.ಅನಂತಕುಮಾರ್ ಮಾಹಿತಿ ನೀಡಿದರು.

ತಾಲೂಕಿನ ಹಂಗರಹಳ್ಳಿ ಸಮೀಪದ ರೈಲ್ವೆ ಮೇಲ್ಸೇತುವೆ ದುರಸ್ತಿ ಕಾಮಗಾರಿಯ ಸಲುವಾಗಿ ಹೊಳೆನರಸೀಪುರದಿಂದ ಹಾಸನಕ್ಕೆ ತೆರಳುವ ನೇರ ಮಾರ್ಗ ಕಳೆದ ೭ ತಿಂಗಳಿಂದ ಸ್ಥಗಿತವಾಗಿತ್ತು. ಪಟ್ಟಣದಿಂದ ಪಡುವಲಹಿಪ್ಪೆ, ಹನುಮನಹಳ್ಳಿ ಮಾರ್ಗವಾಗಿ ಸುತ್ತಿ ಬಳಸಿ ವಾಹನಗಳು ಸಂಚರಿಸುತ್ತಿದ್ದ ಕಾರಣ ಹೆಚ್ಚು ಇಂಧನ ಜತೆಗೆ ಸಮಯ ವ್ಯಯವಾಗುತ್ತಿತ್ತು. ಜತೆಗೆ ಜನತೆ ಮಾನಸಿಕ ಹಿಂಸೆ ಅನುಭವಿಸುತ್ತಿದ್ದರು. ಹಂಗರಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗರು ಹಾಸನಕ್ಕೆ ತಿರುಗಾಡಲು ಸುತ್ತಿ ಬಳಸಿ ಓಡಾಡಬೇಕಿತ್ತು. ಇದರ ಸಂಬಂಧ ಕೆಲವು ತಿಂಗಳ ಹಿಂದೆ ಇಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು. ಇದೀಗ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿ ಸಮೀಪದ ರೈಲ್ವೆ ಹಳಿ ಹತ್ತಿರ ಗೇಟ್ ಮರು ಸ್ಥಾಪಿಸಿದ್ದು, ಹಾಸನ ಮೈಸೂರು ನೇರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಹೊರ ದೇಶಗಳೊಂದಿಗೆ ಪೈಪೋಟಿ ನಡೆಸಿ
ಕ್ರೀಡಾ ಸಾಧಕಿ ಶಗುನ್‌ಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸನ್ಮಾನ