ಹರಪನಹಳ್ಳಿ: ಮೊಬೈಲ್ಗಳಿಗೆ ಟವರ್ ಇದ್ದಂತೆ ದೇವಸ್ಥಾನಗಳಿಗೆ ಗೋಪುರಗಳೇ ಟವರ್. ಗೋಪುರಗಳು ದೇವಸ್ಥಾನದಲ್ಲಿರುವ ಮೂರ್ತಿಗೆ ಶಕ್ತಿ ತುಂಬುತ್ತವೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ತಿಳಿಸಿದರು.
ಅಧಿಕ ಮಾಸ ಶ್ರೇಷ್ಠ ಮಾಸವಾಗಿದ್ದು, ಇಂತಹ ಸಂದರ್ಭದಲ್ಲಿ ನಂದಿಬಸವೇಶ್ವರ ದೇವಸ್ಥಾನದ ಕಳಸರೋಹಣ ಮಾಡಿರುವುದು ಉತ್ತಮ ಕಾರ್ಯವಾಗಿದೆ. ದೇವಸ್ಥಾನ ಕಟ್ಟಿದ ಮೇಲೆ ಗೋಪುರ, ಕಳಸಾರೋಹಣ ಆದಾಗ ಮಾತ್ರ ಅಲ್ಲಿನ ದೇವರಿಗೆ ಶಕ್ತಿ ತುಂಬಿದಂತಾಗುತ್ತದೆ ಎಂದು ನುಡಿದರು.
ತಂದೆ, ತಾಯಿಗಳು ತಮ್ಮ ಮಕ್ಕಳಿಗೆ ವಿದ್ಯಾ, ವಿನಯ, ಸಂಸ್ಕಾರದಂತಹ ಶಿಕ್ಷಣವನ್ನು ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಬೆಳೆಸಬೇಕು ಎಂದು ಸಲಹರೆ ನೀಡಿದರು.ಯುವಜನತೆ ಮದ್ಯ ವ್ಯಸನದಿಂದ ಹೊರಗೆ ಬನ್ನಿ, ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಿ, ನಾಡಿನಲ್ಲಿ ಉತ್ತಮ ಮಳೆಯಾಗಿ, ರೈತರು ಉತ್ತಮ ಬೆಳೆ ಬೆಳೆದು ಸಮೃದ್ಧವಾಗಿ ಬೆಳೆ ಬರಲಿ ಎಂದು ಆರ್ಶಿವಚನ ನೀಡಿದರು.
ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ, ಅಡವಿಹಳ್ಳಿ ಹಾಲಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ, ಚಿರಸ್ತಹಳ್ಳಿ ಮಲ್ಲಿಕಾರ್ಜುನಸ್ವಾಮಿ ಕಲ್ಮಠ ಜಿ.ನಂಜನಗೌಡ್ರು, ಓಂಕಾರಗೌಡ, ಬಣಕಾರ ಮಲ್ಲಿಕಾರ್ಜುನ, ಪೂಜಾರ ದಕ್ಷಿಣ ಮೂರ್ತಿ, ಬೆಣ್ಣಿ ಪೂಜಾರ ಬಸಪ್ಪ, ಬಳ್ಳಾರಿ ನಾಗಪ್ಪ, ಎ.ಜಿ. ಮಂಜುನಾಥ, ಹಾವನೂರು ಹಾಲಪ್ಪ, ಗುಬ್ಬವ್ವರ ಪೂಜಾರ ಬಸವರಾಜ, ಬಿ.ಜಿ. ಶರಣಪ್ಪ, ನಿಂಬಳಗೇರಿ ಬಸವರಾಜ, ಎನ್.ಕೊಟ್ರಪ್ಪ, ಐ.ಎಂ. ಬಸವರಾಜಯ್ಯ, ಕೆ.ಅಂಜಿನಪ್ಪ, ಕೆ.ಕೊಟ್ರಪ್ಪ, ಪೂಜಾರ ಬಸವರಾಜ, ಎಂ.ಕರಿಯಪ್ಪ, ಉಪ್ಪಾರ ಬಸವರಾಜ, ಚಾಕರಿ ಮಂಜಪ್ಪ ಸೇರಿದಂತೆ ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.