ಕನ್ನಡಪ್ರಭ ವಾರ್ತೆ ಆನೇಕಲ್ಆನೇಕಲ್ ತಾಲೂಕಿನ ಹಾರಗದ್ದೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ನ ಮ್ಯಾನೇಜರ್ ಒಬ್ಬರು ಸಹೋದ್ಯೋಗಿಗಳ ಕಿರುಕುಳ ಸಹಿಸದೆ ಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಗಣಿ ಠಾಣಾ ವ್ಯಾಪ್ತಿಯ ಹಾರಗದ್ದೆಯಲ್ಲಿ ಬುಧವಾರ ಸಂಜೆ ನಡೆದಿದೆ.
ಈ ಘಟನೆ ಸಂಬಂಧ ಹಾರಗದ್ದೆ ವಾಸಿಗಳಾದ ಬ್ಯಾಂಕ್ ಅಕೌಂಟೆಂಟ್ ನಾಗರಾಜ್, ಕಂಪ್ಯೂಟರ್ ಆಪರೇಟರ್ ಸಂದೀಪ್ ಹಾಗೂ ಕ್ಯಾಷಿಯರ್ ರೂಪಾ ಸಂಬಂಧಿ ಶ್ರೀನಿವಾಸ್ ಎಂಬುವರನ್ನು ಬಂಧಿಸಲಾಗಿದೆ.
ಡೆತ್ ನೋಟಲ್ಲಿ ಏನಿದೆ?ಬ್ಯಾಂಕ್ ಅಕೌಂಟೆಂಟ್ ನಾಗರಾಜ್, ಕ್ಯಾಷಿಯರ್ ರೂಪಾ, ರೂಪಾ ಸಂಬಂಧಿ ಶ್ರೀನಿವಾಸ್ ಹಾಗೂ ಕಂಪ್ಯೂಟರ್ ಆಪರೇಟರ್ ಸಂದೀಪ್ ತನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ನಲ್ಲಿ ಬರೆಯಲಾಗಿದೆ.
ಅಕೌಂಟೆಂಟ್ ನಾಗರಾಜ್ 15 ಲಕ್ಷ ರು. ಬ್ಯಾಂಕ್ ಹಣ ದುರುಪಯೋಗ ಮಾಡಿಕೊಂಡು ಕೆಲವೇ ದಿನಗಳಲ್ಲಿ ಹಿಂತಿರುಗಿಸುವುದಾಗಿ ಅಲವತ್ತು ಕೊಂಡಿದ್ದರು. ಈ ಬಗ್ಗೆ ಇತರೆ ಸಿಬ್ಬಂದಿಗೆ ನಾಗರಾಜ್ ತಿಳಿಸಿದ್ದ ಕಾರಣ ಇತರೆ ಸಿಬ್ಬಂದಿ ಸಹ ಇದನ್ನೇ ನೆಪವಾಗಿಸಿಕೊಂಡು ಬ್ಲಾಕ್ ಮೇಲ್ ಮಾಡಿದರು. ಕಂಪ್ಯೂಟರ್ ಆಪರೇಟರ್ ಸಂದೀಪ್ ಹತ್ತು ಲಕ್ಷ ಪಡೆದಿದ್ದರೆ, ಕ್ಯಾಷಿಯರ್ ರೂಪಾ ಸಹ ದೊಡ್ಡ ಮೊತ್ತ ಪಡೆದು ತನ್ನ ಸಂಬಂಧಿ ಶ್ರೀನಿವಾಸ್ ಮೂಲಕ 43 ಲಕ್ಷ 50 ಸಾವಿರ ಹಣದ ಜೊತೆ ಅಡಮಾನದ ಚಿನ್ನಾಭರಣ ನೀಡದೇ ಮೋಸ ಮಾಡಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಪ್ರಕಾಶ್ ವಿವರಿಸಿದ್ದಾರೆ.
ನಿಯಮಾವಳಿ ಮೀರಿ ಹೆಚ್ಚು ಸಾಲ
ಕಳೆದ ಜೂನ್ ನಲ್ಲಿ ಹೊಸ ಆಡಳಿತ ಮಂಡಳಿ ರಚನೆ ಆಗಿದ್ದು ಸಭೆ ಕರೆದು ಲೆಕ್ಕಪತ್ರ ತೋರಿಸಲು ಕೇಳಿದಾಗ ಸಮಯಾವಕಾಶ ಪಡೆದು ಕೊಂಡಿದ್ದ ಮ್ಯಾನೇಜರ್ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.