ವಿವಿಧ ಶಿವನ ದೇವಸ್ಥಾನಗಳಲ್ಲಿ ಹರಿಕಥೆ, ಜಾಗರಣೆ, ಶಿವನ ಸ್ಮರಣೆ

KannadaprabhaNewsNetwork |  
Published : Feb 27, 2025, 12:31 AM IST
26ಕೆಎಂಎನ್ ಡಿ22 | Kannada Prabha

ಸಾರಾಂಶ

ಹಲಗೂರಿನ ಭೀಮಾ ನದಿ ತೀರದ ಸೋಮೇಶ್ವರ ಮತ್ತು ಬೆನಮನಹಳ್ಳಿ ಅರ್ಕೆಶ್ವರ ಬಸವನ ಬೆಟ್ಟದ ಹೆಬ್ಬೆಟ್ಟದ ಬಸವೇಶ್ವರ ದೇವಸ್ಥಾನ ಸೇರಿದಂತೆ ಮುತ್ತತ್ತಿ ರಸ್ತೆಯ ವಿದ್ಯಾ ಗಣಪತಿ ದೇವಸ್ಥಾನ ನಡುಕೇರಿ ವೀರಭದ್ರ ಸ್ವಾಮಿ ಇನ್ನೂ ವಿವಿಧ ಕಡೆ ಶಿವ ರಾತ್ರಿ ಹಬ್ಬದ ಅಂಗವಾಗಿ ಶಿವನ ಮೂರ್ತಿಯನ್ನು ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಹಾಗೂ ನಡೆದ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜೆಗಳನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹಲಗೂರು

ಮಹಾಶಿವರಾತ್ರಿ ಪ್ರಯುಕ್ತ ಬುಧವಾರ ಶಿವನ ದೇವಾಲಯಗಳಲ್ಲಿ ವಿವಿಧ ಪೂಜೆಗಳು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಭಕ್ತರು ಬೆಳಗ್ಗೆಯಿಂದ ರಾತ್ರಿಯವರೆಗೆ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು. ರಾತ್ರಿ ಶಿವನಾಮ ಸ್ಮರಿಸುತ್ತಾ ಜಾಗರಣೆ ಮಾಡಿ ಭಕ್ತಿ ಮೆರೆದರು.

ಸಮೀಪದ ಕೊನ್ನಾಪುರ ಗ್ರಾಮದ ಶಂಭುಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಜಾಗರಣೆ ಪ್ರಯುಕ್ತ ದೇವಾಲಯದ ಅವರಣದಲ್ಲಿ ಹರಿಕಥೆ ನಡೆಯಿತು. ಸಾವಿರಾರು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.

ಹಲಗೂರಿನ ಭೀಮಾ ನದಿ ತೀರದ ಸೋಮೇಶ್ವರ ಮತ್ತು ಬೆನಮನಹಳ್ಳಿ ಅರ್ಕೆಶ್ವರ ಬಸವನ ಬೆಟ್ಟದ ಹೆಬ್ಬೆಟ್ಟದ ಬಸವೇಶ್ವರ ದೇವಸ್ಥಾನ ಸೇರಿದಂತೆ ಮುತ್ತತ್ತಿ ರಸ್ತೆಯ ವಿದ್ಯಾ ಗಣಪತಿ ದೇವಸ್ಥಾನ ನಡುಕೇರಿ ವೀರಭದ್ರ ಸ್ವಾಮಿ ಇನ್ನೂ ವಿವಿಧ ಕಡೆ ಶಿವ ರಾತ್ರಿ ಹಬ್ಬದ ಅಂಗವಾಗಿ ಶಿವನ ಮೂರ್ತಿಯನ್ನು ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಹಾಗೂ ನಡೆದ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜೆಗಳನ್ನು ನಡೆಸಲಾಯಿತು.

ಸಮೀಪದ ಅಂತರವಳ್ಳಿ ಶ್ರೀಸಿದ್ದೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಬುಧವಾರ ಮುಂಜಾನೆ ಹೋಮ, ಹವನ ಇತ್ಯಾದಿ ಪೂಜಾ ನಡೆದವು. ಮಹಾ ಶಿವರಾತ್ರಿ ಪ್ರಯುಕ್ತ ಸಿದ್ದೇಶ್ವರ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ, ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಬುಧವಾರ ರಾತ್ರಿ ಭಕ್ತರು ಇಡೀ ರಾತ್ರಿ ಬೆಟ್ಟದ ತಪ್ಪಲಿನಲ್ಲಿ ಕುಳಿತು ಶಿವ ಸ್ಮರಣೆ ಮಾಡಿ ಶಿವನ ಕೃಪೆಗೆ ಪಾತ್ರರಾದರು.

ಮಾರಗೌಡನಹಳ್ಳಿ ನಾಗಲಿಂಗೇಶ್ವರಸ್ವಾಮಿ, ಹುಲ್ಲಾಗಾಲ ಮತ್ತು ಚನ್ನೀಪುರ ಗ್ರಾಮದ ಮಹದೇಶ್ವರ ಸ್ವಾಮಿ, ತೊರೆಕಾಡನಹಳ್ಳಿ ಮುನೇಶ್ವರಸ್ವಾಮಿ, ದೇವಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಹಲಗೂರು ಶ್ರೀಅಘೋರ ಭದ್ರಕಾಳಿ ಶಕ್ತಿ ಪೀಠದ ವಿದ್ವಾನ್ ಶ್ರೀಪ್ರಸಾದ್ ಗುರೂಜೀ ಮಾತನಾಡಿ, ಸೋಮೇಶ್ವರ ದೇವಾಲಯದಲ್ಲಿ ಪ್ರಾತಃ ಕಾಲದಲ್ಲಿ ಶಿವನ ಮೂರ್ತಿಯನ್ನು ಶುಚಿಗೊಳಿಸಿ ಪಂಚಾಮೃತ, ಅಭಿಷೇಕ, ರುದ್ರಾಭಿಷೇಕ ಮಾಡುವುದರ ಜೊತೆಗೆ ಸಹಸ್ರಾರು ಬಿಲ್ಪಾರ್ಚನೆಯಿಂದ ಪೂಜಾ ಕಾರ್ಯಕ್ರಮ ನೆರವೇರಿಸಲಾಗಿದೆ ಎಂದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ