ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದಲ್ಲಿ ಶುಕ್ರವಾರ ಜನಿವಾರಧಾರಿಗಳ ಸಮಾಜ, ವಿಶ್ವಹಿಂದು ಪರಷತ್, ವಿಶ್ವಕರ್ಮ ಸಮಾಜ, ವಿಪ್ರ ಮಹಿಳಾ ಮಂಡಲ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಹಿಂದೂ ಸಮಾಜ ಒಗ್ಗಟ್ಟಾಗಿರಬೇಕು, ಹಿಂದೂಗಳ ಮೇಲೆ ಇದೇ ರೀತಿ ದಾಳಿಗಳಾದರೆ ಆಶ್ಚರ್ಯ ಪಡುವಂಥ ಸ್ಥಿತಿ ಇಲ್ಲ, ಉಗ್ರರದಾಳಿಗಳು ನಡೆಯದಂತೆ ಸರ್ಕಾರಗಳು ಕಠಿಣ ಕಾನೂನು ಜಾರಿಗೆ ತರಬೇಕು. ಇಲ್ಲವಾದರೆ ಸಾಧು-ಸಂತರು, ಸಮಾಜವೇ ಸೂಕ್ತ ಉತ್ತರ ನೀಡಲು ಮುಂದಾಗಲಿದೆ ಎಂದು ಎಚ್ಚರಿಸಿದರು.
ಸನಾತನ ಹಿಂದೂಗಳ ಧಾರ್ಮಿಕ ಸಂಕೇತವಾಗಿರುವ ಜನಿವಾರ ತೆಗೆಯುಂತೆ ಒತ್ತಾಯಿಸಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿದ ಅವರು, ಧಾರ್ಮಿಕ ನಂಬಿಕೆಗೆ ಧಕ್ಕೆ ಬರುವಂತೆ ನಡೆದುಕೊಂಡ ಅಧಿಕಾರಿಗಳನ್ನು ಅಮಾನತ್ತು ಗೊಳಿಸಿದರೆ ಸಾಲದು. ಶಾಶ್ವತವಾಗಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಬ್ರಾಹ್ಮಣ ಸಮಾಜದ ಪಂ.ರಂಗಾಚಾರ್ಯ ಜೋಷಿ ಮಾತನಾಡಿ, ಸರ್ಕಾರದ ಕೆಲ ಅಧಿಕಾರಿಗಳು ಕುಮ್ಮಕ್ಕಿನಿಂದಾಗಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಯಿಸುವ ಕೆಲಸ ಮಾಡಿದ್ದಾರೆ. ಅಂಥವರನ್ನು ಸೇವೆಯಿಂದ ವಜಾ ಗೊಳಿಸಬೇಕು. ಯಾರಿಗೂ ಹಾನಿ ಉಂಟು ಮಾಡದೇ ಬದಕುವ ಸಮಾಜವನ್ನು ಕೆಣಕುವ ಯತ್ನ ಮಾಡಬಾರದು ಎಂದು ಎಚ್ಚರಿಸಿದರು. ಮುಖಂಡ ರಾಜೇಂದ್ರ ಹುಲ್ಯಾಳಕರ ಮಾತನಾಡಿ, ಬ್ರಾಹ್ಮಣರ ಆಸ್ತಿ-ಪಾಸ್ತಿ ಕಸಿದು ಕೊಂಡಿದ್ದೀರಿ, ಸಮಾಜಕ್ಕೆ ಯಾವುದೇ ಮೀಸಲಾತಿ ಇಲ್ಲವಾದರೂ ಬುದ್ದಿವಂತಿಕೆಯಿಂದ ಬದುಕುತ್ತಿರುವ ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ. ತಲೆ ಕತ್ತರಿಸುವ ಕೆಲಸ ಮಾಡಬೇಡಿ. ನಮ್ಮ ಧಾರ್ಮಿಕ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಬೇಡಿ ಎಂದು ಆಗ್ರಹಿಸಿದರು.