ಇಲ್ಲಿನ ವಾಕರ್ಸ್ ವಿಂಗ್ ಸಂಸ್ಥೆಯ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರ್ಷ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಇಲ್ಲಿನ ವಾಕರ್ಸ್ ವಿಂಗ್ ಸಂಸ್ಥೆಯ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರ್ಷ ಆಯ್ಕೆಯಾದರು. ಹಂಪಿಯ ಖಾಸಗಿ ಹೋಟೆಲ್ ನಲ್ಲಿ ಅಧ್ಯಕ್ಷ ದಿನೇಶ್ ಬೆಳ್ಳಿಯಪ್ಪ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಅಧಿಕಾರ ಹಸ್ತಾಂತರಿಸಲಾಯಿತು. ಕಾರ್ಯದರ್ಶಿಯಾಗಿ ಎಸ್.ಡಿ. ವಿಜೇತ್, ಖಜಾಂಚಿಯಾಗಿ ಬಿ.ಕೆ. ಉದಯ್ ಕುಮಾರ್ ಆಯ್ಕೆಯಾದರು. ಈ ಸಂದರ್ಭ ಮಾಜಿ ಅಧ್ಯಕ್ಷರಾದ ಎ.ಸಿ. ಶಿವಪ್ರಸಾದ್, ಎಚ್.ಸಿ. ನಾಗೇಶ್, ಪಿ.ಕೆ. ರವಿ, ಬಿ.ಎಸ್. ಸುಂದರ್, ಮೋಹನ್ ನಿಶಾಂತ್, ನವೀನ್ ಧರ್ಮಪ್ಪ, ಉದಯ ರವಿ, ಎಚ್.ಬಿ. ಹೃಶಿಕೇಶ್, ಬಿ.ಸಿ. ವೆಂಕಟೇಶ್, ಬಿ.ಎಂ. ದಿನೇಶ್, ಬಿ.ಟಿ. ತಿಮ್ಮ ಶೆಟ್ಟಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.