ಅಜೀಜಅಹ್ಮದ ಬಳಗಾನೂರ
ರೈತರ ಹಣೆಬರಹನಾ ಸರಿ ಇಲ್ರಿ!. ಒಮ್ಮೊಮ್ಮೆ ಮಳಿಯಾಗ್ದ ಬೆಳೆಯಲ್ಲ ಒಣಗಿ ಹೊಕ್ಕಾವು, ಮತ್ತೊಮ್ಮೆ ಹೆಚ್ಚು ಮಳೆಯಾಗಿ ಬಿತ್ತಿದ ಬೆಳೆಯಲ್ಲಾ ಹಾಳಾಗಿ ಹೊಕ್ಕಾವು. ಮಳಿ ಹೆಚ್ಚಾದ್ರೂ ರೈತಂಗ ಕಷ್ಟ, ಮಳಿಯಾಗದಿದ್ರೂ ಕಷ್ಟಾರಿ... ಹ್ವಾದ್ ತಿಂಗಳ ಸುರಿದ ಮಳಿಯಿಂದ ಬೆಳೆದಿದ್ದ ಬೆಳೆ ಹಾಳಾಗಿ ಕೈಸುಟ್ಟುಕೊಂಡೀವಿ. ಇಂಥದ್ರಾಗ ದೀಪಾವಳಿ ಹಬ್ಬಾ ಬಂದೈತಿ... ಹ್ಯಾಂಗ್ ಮಾಡಬೇಕು ಎನ್ನೋದಾ ತಿಳಿವಲ್ದು...!
ಉತ್ತರ ಕರ್ನಾಟಕದಾದ್ಯಂತ ಸೆಪ್ಟಂಬರ್, ಅಕ್ಟೋಬರ್ ಮೊದಲ ವಾರದಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ ಬಿತ್ತಿದ ಬೆಳೆ ಹಾಳಾಗಿ ರೈತರು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದಾರೆ. ಇದೀಗ ದೀಪಾವಳಿ ಬಂದಿದ್ದು ಕೈಯಲ್ಲಿ ಕಾಸು ಇಲ್ಲದೆ ಚಿಂತಿತರಾಗಿದ್ದಾರೆ.6 ಲಕ್ಷ ಹೆಕ್ಟೇರ್ ಹಾನಿ:
ಕಣ್ಣೀರು ತರಿಸಿದ ಈರುಳ್ಳಿ:
ದೀಪಾವಳಿ ಹಬ್ಬ ಬರುವ ವೇಳೆಗೆ ಬಹುತೇಕ ರೈತರು ತಾವು ಬೆಳೆದ ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು. ಬಳಿಕ ಬರುತ್ತಿದ್ದ ಹಬ್ಬವನ್ನು ಸಂಭ್ರಮದಿಂದಲೇ ಆಚರಿಸುತ್ತಿದ್ದರು. ಆದರೆ, ಈ ವರ್ಷ ಅತಿವೃಷ್ಟಿಯಿಂದಾಗಿ ಬಿತ್ತಿದ್ದ ಬೆಳೆ ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಇಂತಹ ವೇಳೆ ಬಂದ ದೀಪಾವಳಿಯನ್ನು ರೈತರು ಒಲ್ಲದ ಮನಸ್ಸಿನಿಂದ ಆಚರಿಸುತ್ತಿದ್ದಾರೆ.ಸಾಲಾ-ಸೋಲಾ ಮಾಡಿ ಬೀಜ, ಗೊಬ್ಬರ ಹಾಕಿ ಬಿತ್ತಿದ್ವಿ. ಹೆಚ್ಚು ಮಳಿಯಾಗಿ ಬಿತ್ತಿದ ಬೆಳೆಯಲ್ಲಾ ಹಾಳಾಗಿ ಹೋಗ್ಯಾವು. ಹಬ್ಬ ಆಚರಿಸೋದು ಒತ್ತಟ್ಟಿಗಿರಲಿ, ಎರಡು ಹೊತ್ತು ತಿನ್ನಾಕೂ ರೊಕ್ಕ ಇಲ್ಲದಂತಾ ಪರಿಸ್ಥಿತಿ ನಮಗಾಗೈತಿ. ಹಬ್ಬ ಹ್ಯಾಂಗ ಆಚರಿಸ್ಬೇಕು ಅನ್ನೋದ ತಿಳಿವಲ್ದು.
ಶಂಕರ ಅಂಬಲಿ, ಕರ್ನಾಟಕ ರೈತಸೇನೆ ರಾಜ್ಯಾಧ್ಯಕ್ಷ