ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಶಿಂಷಾ ಸಹಕಾರ ಬ್ಯಾಂಕ್ನ ಪರವಾನಗಿ ರದ್ದುಗೊಳಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಆರ್ಬಿಐ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.ಆರ್ಬಿಐ ಆದೇಶ ಪ್ರಶ್ನಿಸಿ ಬ್ಯಾಂಕ್ನ ಅಧ್ಯಕ್ಷ ಎಂ.ಚಂದ್ರು ತಮ್ಮ ಪರ ವಕೀಲರ ಮೂಲಕ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆಗೆ ಅಂಗೀಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಪ್ರತಿವಾದಿಗಳಾಗಿರುವ ಮುಂಬೈನ ಆರ್ಬಿಐ ಕಾರ್ಯನಿರ್ವಾಹಕ ನಿರ್ದೇಶಕ, ಬೆಂಗಳೂರಿನ ಆರ್ಬಿಐನ ಪ್ರಭಾರ ಮುಖ್ಯ ಪ್ರಧಾನ ವ್ಯವಸ್ಥಾಪಕ ಹಾಗೂ ಉಪ ಪ್ರಧಾನ ವ್ಯವಸ್ಥಾಪಕ ಮತ್ತು ಮುಂಬೈನ ಕಂಪನಿಯ ಚೇರ್ಮನ್ ಅವರುಗಳಿಗೆ ನೋಟಿಸ್ ಜಾರಿ ಮಾಡುವಂತೆ ನ್ಯಾಯಮೂರ್ತಿ ಕೃಷ್ಣಕುಮಾರ್ ಸೂಚನೆ ನೀಡಿ ಅರ್ಜಿ ವಿಚಾರಣೆಯನ್ನು ಕಾಯ್ದಿರಿಸಿದ್ದಾರೆ.ಪಟ್ಟಣದ ಶಿಂಷಾ ಸಹಕಾರ ಬ್ಯಾಂಕ್ನ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆರ್ಬಿಐ ಕಳೆದ ಜು.5 ರಿಂದ ಬ್ಯಾಂಕಿಂಗ್ ವ್ಯವಹಾರ ನಿಲ್ಲಿಸುವಂತೆ ಆದೇಶ ನೀಡಿ ಪರವಾನಗಿ ರದ್ದುಪಡಿಸಿ ಆದೇಶ ಹೊರಡಿಸಿತ್ತು.
ಶಿಂಷಾ ಸಹಕಾರ ಬ್ಯಾಂಕ್ ಸಾಕಷ್ಟು ಬಂಡವಾಳ ಮತ್ತು ಗಳಿಕೆ ಹೊಂದಿಲ್ಲ. ಇದರಿಂದ ನಿರಂತರವಾಗಿ ಠೇವಣಿದಾರರ ಹಿತಾಸಕ್ತಿಗೆ ಹಾನಿಯಾಗಿದೆ ಎಂದು ಆರೋಪಿಸಿತ್ತು. ಕರ್ನಾಟಕ ಸಹಕಾರ ಸಂಘಗಳ ರಿಜಿಸ್ಟರ್ಗೆ ಬ್ಯಾಂಕಿನ ವ್ಯವಹಾರವನ್ನು ಮುಕ್ತಾಯಗೊಳಿಸಬೇಕು ಮತ್ತು ಬ್ಯಾಂಕಿಗೆ ಲಿಕ್ವಿಡೇಟರ್ ನೇಮಕ ಮಾಡುವಂತೆ ಆರ್ಬಿಐ ಸೂಚಿಸಿತ್ತು.ಬ್ಯಾಂಕ್ ದಿವಾಳಿಯಾದ ಬಳಿಕ ಠೇವಣಿ ವಿಮೆ ಮತ್ತು ಕ್ರೆಡಿಟ್ ಕಾರ್ಪೊರೇಷನ್ ವತಿಯಿಂದ ಪ್ರತಿ ಗ್ರಾಹಕರಿಗೆ 5 ಲಕ್ಷ ರು ಗಳ ಕ್ಲೈಮ್ ಮತವನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಆರ್ಬಿಐ ಆದೇಶ ಹೊರಡಿಸಿತ್ತು. ಆದೇಶದ ಅನ್ವಯ ಮಾರ್ಚ್ 31ರ ಠೇವಣಿ ವಿಮಾ ಮತ್ತು ಕ್ರೆಡಿಟ್ ಕಾರ್ಪೊರೇಷನ್ 11.81 ಕೋಟಿ ಹಣವನ್ನು ಠೇವಣಿ ದಾರರಿಗೆ ಪಾವತಿಸಲಾಗಿದೆ.