ಕನ್ನಡಪ್ರಭ ವಾರ್ತೆ ಉಡುಪಿ
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರನ್ನು ಭೇಟಿಯಾದಷ್ಟು ಗೆಲವಿನ ಸಾಧ್ಯತೆಗಳು ಹೆಚ್ಚು ಕಂಡು ಬರುತ್ತಿದೆ ಎಂದು ಹೇಳಿದರು.
ಪ್ರಚಾರ ಆರಂಭದ ದಿನಗಳಲ್ಲಿ 60- 40 ಎಂಬ ಅಭಿಪ್ರಾಯ ಇತ್ತು, ಈಗ ಜನರು ಸಮಬಲದ ಭರವಸೆ ನೀಡಿದ್ದಾರೆ, ಜನರ ರಿಯಾಕ್ಷನ್ ನೋಡುವಾಗ ಖುಷಿಯಾಗುತ್ತದೆ, ಜನರ ಅಭಿಪ್ರಾಯ ಮತಕ್ಕೆ ಪರಿವರ್ತನೆ ಆಗಿ ಗೆಲ್ಲಲಿದ್ದೇನೆ ಎಂದರು.ಗ್ಯಾರೆಂಟಿ ಯೋಜನೆ ಬಗ್ಗೆ ಭರವಸೆ ಮೂಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಗೆ ಮುಂಚೆ ಗ್ಯಾರೆಂಟಿಗಳ ಬಗ್ಗೆ ಹೇಳಿದ್ದೆವು, ಆದರೆ ಕೊಟ್ಟಿರಲಿಲ್ಲ. ಹಾಗಾಗಿ ಈ ಭಾಗದ ಜನ ಅದನ್ನು ನಂಬಿರಲಿಲ್ಲ, ಈಗ ಸೌಲಭ್ಯಗಳು ಸಿಕ್ಕಿವೆ, ಹಾಗಾಗಿ ಮತ ಹಾಕುವ ಭರವಸೆ ನೀಡಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾದ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕೃಷ್ಣಮೂರ್ತಿ ಆಚಾರ್ಯ, ಪ್ರಖ್ಯಾತ್ ಶೆಟ್ಟಿ ಮುಂತಾದವರು ಹೆಗ್ಡೆ ಜೊತೆಗಿದ್ದರು. -------------
ಅಡಕೆ ದರ ರು. 70 - 80 ಸಾವಿರಕ್ಕೆ ಏರಿತ್ತು...ಅಡಕೆಗೆ ರೋಗ ಬಂದಾಗ ಧಾರಣೆ 10,000 ಇಳಿದಿತ್ತು, ಈ ಬಗ್ಗೆ ನಾನು ಅಧಿಕಾರಿ, ಸಚಿವರ ಜೊತೆ ಮಾತನಾಡಿ ದರ ರು. 70 - 80 ಸಾವಿರದವರೆಗೆ ಹೋಗಿತ್ತು, ಇದಕ್ಕೆ ನನ್ನಲ್ಲಿ ದಾಖಲೆ ಇದೆ. ಆದರೆ ನೀವು ಮಾಡಿದ್ದಲ್ಲ, ಬಿಜೆಪಿ ಸರ್ಕಾರ ಮಾಡಿದ್ದು ಎಂದು ಸುದ್ದಿ ಹಬ್ಬಿಸಲಾಗುತ್ತಿದೆ
ಅಡಕೆ ಕ್ಯಾನ್ಸರ್ ಕಾರಕ ಎಂದು ಕಾಂಗ್ರೆಸ್ ಸರ್ಕಾರ ಇದ್ದಾಗ ಹೇಳಿದ್ದು ಎಂದೂ ಸುದ್ದಿ ಹಬ್ಬಿಸಲಾಗುತ್ತಿದೆ, ಆದರೆ ವಾಜಪೇಯಿ ಸರಕಾರ ಇದ್ದಾಗ ಆಗಿನ ಅಧಿಕಾರಿಗಳೇ ಹಾಗೇ ಬರೆದಿದ್ದರು. ಅಡಕೆಯ ಬಗ್ಗೆ ನಾನು ಮರು ಅಧ್ಯಯನಕ್ಕೆ ಪ್ರಯತ್ನಿಸಿದ್ದೆ. ಈ ಎಲ್ಲಾ ವಿಚಾರಗಳು ಶೃಂಗೇರಿ ಕಡೆ ಅಡಿಕೆ ಬೆಳೆಗಾರರಿಗೆ ಚೆನ್ನಾಗಿ ಗೊತ್ತಿದೆ ಎಂದು ಸುಳ್ಳು ಸುದ್ದಿಗೆ ಪ್ರತಿಕ್ರಿಯಿಸಿದರು.