ಮಾನವ ಜನ್ಮ ಅತ್ಯಂತ ಪವಿತ್ರವಾದುದು

KannadaprabhaNewsNetwork |  
Published : Sep 28, 2024, 01:23 AM IST
27ಶಿರಾ1: ಶಿರಾದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಜಾಗೃತಿ ಸಭಾ ಕಾರ್ಯಕ್ರಮವನ್ನು ಪೂಜಾರ ಮುದ್ದಾನಹಳ್ಳಿ ಶಿವಾನಂದ ಸಿದ್ದಾರೂಢ ಮಂದಿರದ ಚಿದಾನಂದ ಭಾರತಿ ಸ್ವಾಮೀಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಿರಾ ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಪ್ತಗಿರಿ ವಲಯದ ಜ್ಯೋತಿನಗರ ಕಾರ್ಯಕ್ಷೇತ್ರದಲ್ಲಿ ಸ್ಥಳೀಯರ ಸಹಯೋಗದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಜಾಗೃತಿ ಸಭಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಶಿರಾ

ಮಾನವ ಜನ್ಮ ಅತ್ಯಂತ ಪವಿತ್ರವಾದುದು. ಮಾನವ ಜನ್ಮ ಬಹು ಜನ್ಮಗಳ ಪುಣ್ಯವಾಗಿದ್ದು, ನಾವೆಲ್ಲರೂ ಒಂದೇ ಎಂಬುದನ್ನು ಸಾಮೂಹಿಕ ಸತ್ಯನಾರಾಯಣ ಪೂಜೆ ತೋರಿಸುತ್ತದೆ. ಈ ಕಾರ್ಯ ಸಕಲ ಜೀವರಾಶಿಗಳಿಗೂ ಶ್ರೇಯಸ್ಸನ್ನು ಬಯಸುವಂತಹದ್ದು ಎಂದು ಪೂಜಾರ ಮುದ್ದಾನಹಳ್ಳಿ ಶಿವಾನಂದ ಸಿದ್ದಾರೂಢ ಮಂದಿರದ ಶ್ರೀ ಚಿದಾನಂದ ಭಾರತಿ ಸ್ವಾಮೀಜಿ ನುಡಿದರು. ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಪ್ತಗಿರಿ ವಲಯದ ಜ್ಯೋತಿನಗರ ಕಾರ್ಯಕ್ಷೇತ್ರದಲ್ಲಿ ಸ್ಥಳೀಯರ ಸಹಯೋಗದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಜಾಗೃತಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನು ಯಾವಾಗಲೂ ಸದ್ಗುಣ, ಸಂಯಮ, ಶಾಂತಿಯಿಂದ ಭಗವಂತನಲ್ಲಿ ಭಕ್ತಿ, ಪ್ರೀತಿ, ವಾತ್ಸಲ್ಯವನ್ನು ಇಟ್ಟು ಸರಳವಾಗಿ ಜೀವನ ಮಾಡುವ ಕಲೆಯನ್ನು ತಿಳಿಯುತ್ತಾನೋ ಆಗ ಈ ಜನ್ಮ ಪಾವನವಾಗುತ್ತದೆ. ಶ್ರೀ ಸತ್ಯನಾರಾಯಣ ಸ್ವಾಮಿಯಲ್ಲಿ ನಾವು ಜ್ಞಾನವನ್ನೇ ನೀಡುವಂತೆ ಬೇಡಬೇಕು. ನಮ್ಮನ್ನು ಜ್ಞಾನಿಯನ್ನಾಗಿ ಮಾಡು, ಸಜ್ಜನನನ್ನಾಗಿ ಮಾಡು ಸನ್ಮಾರ್ಗದಲ್ಲಿ ನಡೆಸುವಂತೆ ಬೇಡಬೇಕು. ನಮ್ಮಲ್ಲಿರುವ ಶಾಂತಿ, ದಯೇ ಸದ್ಭಾವವು ಸದಾ ನಮ್ಮನ್ನು ಕಾಪಾಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಸದಾಶಿವ ಗೌಡ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಸ್.ಕೆ.ರಾಮಚಂದ್ರಗುಪ್ತ, ಬೆಸ್ಕಾಂ ಇಲಾಖೆಯ ಲಕ್ಷ್ಮಿಕಾಂತ್, ಕನಕ ಬ್ಯಾಂಕ್ ವ್ಯವಸ್ಥಾಪಕ ಆರ್.ಲಕ್ಷ್ಮಣ್‌, ನಗರಸಭಾ ಸದಸ್ಯರಾದ ತೇಜು ಭಾನುಪ್ರಕಾಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎನ್.ಜಯಪಾಲ್, ಮಂಜು ಶ್ರೀ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಮಹಾಲಿಂಗಪ್ಪ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷೆ ರಾಧಾ ರವಿ, ಒಕ್ಕೂಟದ ಅಧ್ಯಕ್ಷೆ ಧನಲಕ್ಷ್ಮಿ, ಪತಂಜಲಿ ಯೋಗ ಶಿಕ್ಷಕಿ ಕವಿತಾ, ವಲಯ ಮೇಲ್ವಿಚಾರಕಿ ಮೀನಾ ಸೇರಿದಂತೆ ಯೋಜನೆ ಕಾರ್ಯಕರ್ತರು ಮತ್ತು ಸ್ವ-ಸಹಾಯ ತಂಡದ ಸದಸ್ಯರು ಭಾಗವಹಿಸಿದ್ದರು.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು