ಕುಪ್ಪೆ ಮಹದೇವಸ್ವಾಮಿ
ಎತ್ತ ನೋಡಿದರು ಜೋಡಿ ರಾಸುಗಳ ಸಮೂಹ, ರೈತರ ಮುಗಿಲು ಮುಟ್ಟಿದ ಸಂಭ್ರಮ, ಕಾರಿಗಿಂತ ದುಬಾರಿ ಬೆಲೆ ಬಾಳುವ ಜೋಡೆತ್ತುಗಳ ಮೇಳ, ಮದುವೆ ಮಂಟಪವನ್ನು ಮೀರಿಸುವ ಚಪ್ಪರದ ವೈಭವ.
ಇವು ಮೈಸೂರು ಸಾಲಿಗ್ರಾಮ ತಾಲೂಕಿನ ಇತಿಹಾಸ ಪ್ರಸಿದ್ದ ಚುಂಚನಟ್ಟೆಯ ಗ್ರಾಮಿಣ ಸೊಗಡಿನ ಸಿರಿಯ ಚುಂಚನಕಟ್ಟೆ ಜಾತ್ರೆಯಲ್ಲಿ ಕಂಡು ಬರುತ್ತಿರುವ ದೃಶ್ಯ ವೈಭವ.ದಕ್ಷಿಣ ಭಾರತದಲ್ಲಿಯೆ ಅತ್ಯಂತ ಹೆಸರುವಾಸಿಯಾಗಿರುವ ಜಾತ್ರೆಯ ಆವರಣದಲ್ಲಿ 10 ಸಾವಿಕ್ಕಿಂತ ಹೆಚ್ಚು ಜೋಡಿ ರಾಸುಗಳು ಮೇಳೈಸಿದ್ದು, ನೋಡುಗರನ್ನು ಕಣ್ಮನ ಸೆಳೆಯುವುದರ ಜತೆಗೆ ಗೋ-ಸಂಪತ್ತಿನ ದರ್ಬಾರ್ ಕಳೆಗಟ್ಟಿದೆ.
ಚುಂಚನಕಟ್ಟೆ ಜಾತ್ರೆಗೆ ಮೈಸೂರು ಜಿಲ್ಲೆಯಿಂದಲ್ಲದೆ ಹಾಸನ, ಚಾಮರಾಜನಗರ, ಕೊಡಗು, ಮಂಡ್ಯ ಸೇರಿದಂತೆ ಇತರ ಜಿಲ್ಲೆಗಳಿಂದ ರೈತರು ತಮ್ಮ ಜಾನುವಾರುಗಳೊಂದಿಗೆ ಬಂದು ಪ್ರದರ್ಶನ ಮಾಡುವುದರ ಜತೆಗೆ ಭರ್ಜರಿ ವ್ಯಾಪಾರವನ್ನು ಮಾಡುತ್ತಾರೆ.
ರಾಸುಗಳನ್ನು ನೋಡಲು ನಿತ್ಯ ಸಾವಿರಾರು ಮಂದಿ ದೂರದುರುಗಳಿಂದ ಆಗಮಿಸುತ್ತಿದ್ದು, ಲಕ್ಷಾಂತರ ರು. ಬೆಲೆ ಬಾಳುವ ಜೋಡಿಗಳನ್ನು ನೋಡಿ ಅವುಗಳ ಮೈದಡವಿ ಸಂತಸ ಪಡುತ್ತಿದ್ದಾರಲ್ಲದೆ ಜಾತ್ರೆಯ ಸೊಬಗನ್ನು ಸವಿಯುತ್ತಿದ್ದಾರೆ.
ಇದರ ಜತೆಗೆ ಜಾತ್ರಾ ಆವರಣ ಮತ್ತು ಶ್ರೀರಾಮ ದೇವಾಲಯದ ರಸ್ತೆಯಲ್ಲಿ ತಲೆ ಎತ್ತಿರುವ ಸಿಹಿ ತಿಂಡಿ, ವಿವಿದ ಆಟಿಕೆ ಮತ್ತಿತರ ಅಂಗಡಿಗಳು ನೋಡುಗರನ್ನು ಸೆಳೆಯುತ್ತಿದ್ದು ಚುಂಚನಟ್ಟೆ ಈಗ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ.13ರಂದು ಸೀತಾ ಶ್ರೀರಾಮ
ತಿಂಗಳ ಮೊದಲ ವಾರದಲ್ಲಿ ನಡೆಯುವ ಜಾನುವಾರು ಜಾತ್ರೆಯೊಂದಿಗೆ ಚುಂಚನಕಟ್ಟೆಯ ಸೀತಾ ಸಮೇತ ಶ್ರೀರಾಮ ದೇವಾಲಯದಲ್ಲಿ ತಿಂಗಳು ಪೂರ್ತಿ ವಿವಿದ ಧಾರ್ಮಿಕ ಕಾರ್ಯಗಳು, ಸೀತಾ ಕಲ್ಯಾಣ, ಬ್ರಹ್ಮರಥೋತ್ಸವ, ತೆಪ್ಪೋತ್ಸವ ನಡೆಯಲಿವೆ.