ಯಲಬುರ್ಗಾ: ನೀರಾವರಿ ಯೋಜನೆ ಮತ್ತು ಸಮಸ್ಯೆಗಳ ಕುರಿತು ಬೆಳಗಾವಿ ಅಧಿವೇಶನದಲ್ಲಿ ಹೆಚ್ಚು ವಿಸ್ತಾರವಾಗಿ ಮಾತನಾಡಿದ್ದೇನೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಕೇಂದ್ರ ಸರ್ಕಾರ ನರೇಗಾ ಯೋಜನೆಯ ಹೆಸರು ಬದಲಾಯಿಸಿದ್ದು ತಪ್ಪು. ಕೇಂದ್ರವು ರಾಜ್ಯಕ್ಕೆ ಹಣ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಮಂಡನೆಯಾಗಲಿರುವ ಬಜೆಟ್ನ್ನು ಬರೆಯಲು ಸಿಎಂ ಸಿದ್ದರಾಮಯ್ಯ ನನಗೆ ಜವಾಬ್ದಾರಿ ವಹಿಸಿದ್ದಾರೆ ಎಂದರು.
ತಾಲೂಕಿನ ಚಿಕ್ಕವಂಕಲಕುಂಟಾ, ಉಚ್ಚಲಕುಂಟಾ, ಬುಕನಟ್ಟಿ, ತಿಪ್ಪನಾಳ, ಕಟಗಿಹಳ್ಳಿ, ಹಿರೇವಡ್ರಕಲ್, ಗಾಣಧಾಳ, ಮರಕಟ್, ಚೌಡಾಪುರ, ವನಜಭಾವಿ, ಗುಳೆ, ಚಿಕ್ಕಮನ್ನಾಪುರ, ಶಿಡ್ಲಭಾವಿ, ಕೃಷ್ಣಾಪುರ, ಬೋದೂರು, ಗುಂಟಮಡು ಗ್ರಾಮಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸವರಾಜ ರಾಯರಡ್ಡಿ ಚಾಲನೆ ನೀಡಿದರು.ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ನೀಲಗಂಗಾ ಬಬಲಾದ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಸುಧೀರ ಕೊರ್ಲಹಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಅಧಿಕಾರಿಗಳಾದ ಬಿ. ಮಲ್ಲಿಕಾರ್ಜುನ, ಬೆಟದೇಶ ಮಾಳೆಕೊಪ್ಪ, ಲಿಂಗನಗೌಡ ಪಾಟೀಲ್, ಪ್ರಮೋದ ತುಂಬಳ, ಮಹ್ಮದ್ ಖಲೀಮುದ್ದೀನ್, ಅಶೋಕ ಗೌಡರ, ಪಿಡಿಒ ಹನುಮಂತಪ್ಪ ರೇಣಿ, ಪ್ರಮುಖರಾದ ವೀರನಗೌಡ ಪಾಟೀಲ್, ಮಹೇಶ ಹಳ್ಳಿ, ಷಣ್ಮುಖಪ್ಪ ಬಳ್ಳಾರಿ, ರೇವಣಪ್ಪ ಸಂಗಟಿ, ರಾಮಣ್ಣ ಸಾಲಭಾವಿ, ಶರಣಪ್ಪ ಗಾಂಜಿ, ಡಾ. ಶಿವನಗೌಡ ದಾನರಡ್ಡಿ, ಅಪ್ಪಣ್ಣ ಜೋಶಿ, ರುದ್ರಪ್ಪ ಮರಕಟ್, ಸುಭಾಷ್ ಜಿರ್ಲಿ, ನಾಗರಾಜ ನವಲಹಳ್ಳಿ, ಮಲ್ಲಿಕಾರ್ಜುನ ಜಕ್ಕಲಿ, ಹನುಮಂತಪ್ಪ ಹುಣಸಿಹಾಳ, ಶರಣಗೌಡ ಬಸಾಪುರ ಇದ್ದರು.