ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಪತ್ರಿಕಾಭವನದ ಆವರಣದಲ್ಲಿ ಭಾನುವಾರ ಸಂಜೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಗಲಿರುಳೆನ್ನದೇ ಜೀವದ ಹಂಗು ತೊರೆದು ಸಮಾಜ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯವಾಗಿದೆ. ನಗರದ ಪತ್ರಿಕಾಭವನದ ಆವರಣದ ದುರಸ್ತಿ, ಶಡ್ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.
ದಿ.ಬಾಬು ರೆಡ್ಡಿ ತುಂಗಳ ಪ್ರಶಸ್ತಿಯ ದತ್ತಿದಾನಿ ಡಾ,ವಿಜಯಲಕ್ಷ್ಮೀ ತುಂಗಳ ಮಾತನಾಡಿ, ದಿ.ಬಾಬುರೆಡ್ಡಿ ಅವರು ಕುರುಕ್ಷೇತ್ರ ಎಂಬ ಪತ್ರಿಕೆ ಪ್ರಾರಂಭಿಸಿ, ಹರಿತವಾದ ಲೇಖನಗಳನ್ನು ಪ್ರಕಟಿಸಿ ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡಿದವರು ಅವರ ಸ್ಮರಣಾರ್ಥ ಪ್ರತಿವರ್ಷ ಪ್ರಶಸ್ತಿ ನೀಡುತ್ತಿರುವುದಾಗಿ ಹೇಳಿದರು.ತಹಸೀಲ್ದಾರ್ ಅನೀಲ ಬಡಿಗೇರ ಮಾತನಾಡಿ, ಸರ್ಕಾರಿ ಯೋಜನೆಗಳ ಜಾಗೃತಿ ಮೂಡಿಸಿ ಜನಸಾಮಾನ್ಯರಿಗೆ ತಲುಪಿಸುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದರು.
ದಿ.ಬಾಬುರೆಡ್ಡಿ ತುಂಗಳ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಅಪ್ಪು ಪೋತರಾಜ ಅನಿಸಿಕೆ ಹಂಚಿಕೊಂಡರು. ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಿದೆ. ಇದು ಎಲ್ಲ ಸಹೋದ್ಯೋಗಿಗಳಿಗೆ ಸಲ್ಲಿಸಿದ ಗೌರವವಾಗಿದೆ ಎಂದರು. ಪತ್ರಕರ್ತರಲ್ಲಿ ಸಾಕಷ್ಟು ಜನ ಬಡವರಿದ್ದಾರೆ ಎಲ್ಲರಿಗೂ ಸರ್ಕಾರದಿಂದ ಸೌಲಭ್ಯಗಳು ದೊರಕುವಂತಾಗಲು, ಶಾಸಕರು, ಅಧಿಕಾರಿಗಳು ಮುಂದಾಗಬೇಕು ಎಂದರು.
ಸನ್ಮಾನ:
ಪ್ರಾರಂಭದಲ್ಲಿ ಅಯೂಬ್ ಧನ್ನೂರ ಅವರಿಂದ ಜಾದೂ ಪ್ರದರ್ಶನ, ಪತ್ರಕರ್ತ ಮಲ್ಲುಮಠ ಅವರಿಂದ ಚಲನಚಿತ್ರಗೀತೆಗಳ ಗಾಯನ ಕಾರ್ಯಕ್ರಮಗಳು ನಡೆದವು. ವಿಜಯಲಕ್ಷ್ಮೀ ದುದಗಿ ಪ್ರಾರ್ಥನಾಗೀತೆ ಹಾಡಿದರು. ತಾಲೂಕು ಘಟಕದ ಅಧ್ಯಕ್ಷ ಲಕ್ಷ್ಮೀಕಾಂತ ದುದಗಿ ಅಧ್ಯಕ್ಷತೆ ವಹಿಸಿದ್ದರು. ಎಂ.ಎನ್.ನದಾಫ್ ಸ್ವಾಗತಿಸಿದರು. ಆರ್.ಎಸ್.ಹೊನಗೌಡ ಭಿನ್ನವತ್ತಳಿಕೆ ಓದಿದರು. ತೋಟಗಾರಿಕೆ ಇಲಾಖೆ ಅಧಿಕಾರಿ ಸಚಿನ ಮಾಚಕನೂರ, ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿ ಸಂತೋಷ ಬಾಡಗಿ, ಕಾರ್ಯಕಾರಿ ಸಮಿತಿ ಸದಸ್ಯ ಗೋಪಾಲ ಪಾಟೀಲ, ಎಂ.ಎನ್.ನದಾಫ್, ಕೇಶವ ಕುಲಕರ್ಣಿ ಇದ್ದರು.ಪ್ರಜಾಪ್ರಭುತ್ವದ 4ನೇ ಅಂಗವಾಗಿರುವ ಪತ್ರಿಕಾರಂಗಕ್ಕೆ ತನ್ನದೇ ಆದ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಇದೆ. ಸಮಾಜದ ಓರೆ-ಕೊರೆಗಳನ್ನು ತಿದ್ದಿ ಜಾಗೃತಿ ಮೂಡಿಸುವ ಕಾರ್ಯನಿರ್ವಹಿಸುತ್ತ, ಎಲ್ಲ ಸಭೆ-ಸಮಾರಂಭಗಳ ಭಾಗವಾಗಿ, ಸಮಾಜದ ಕಷ್ಟ-ಸುಖಗಳಿಗೆ ಸ್ಪಂದಿಸಿ ಸೇವೆ ಸಲ್ಲಿಸುತ್ತಾರೆ. ತಾಲೂಕು ಮಟ್ಟದ ಪತ್ರಕರ್ತರ ಸೇವೆಗೆ ತಕ್ಕ ಸಂಭಾವನೆ ಇರುವುದಿಲ್ಲ ಎಂಬುದು ಅಷ್ಟೇ ಸತ್ಯ.