ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಜಿಲ್ಲಾಡಳಿತ ವಿವಿಧ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಡಿಎಸಿಜಿ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ’ವ್ಯಸನ ಮುಕ್ತ ದಿನಾಚರಣೆ ಉದ್ಘಾಟಿಸಿ ಮಾತ ನಾಡಿ 1975ರಲ್ಲಿ ಜೋಳಿಗೆ ಹಿಡಿದು ಸಮಾಜ ಸುಧಾರಣೆಗೆ ಹೊರಟ ಇಳಕಲ್ ಮಠದ ಶ್ರೀಗಳ ಕೊಡುಗೆ ಸ್ಮರಿಸಿದ ಅವರು, ಶ್ರೀಗಳು ಭಿಕ್ಷಾಧಾರಿಯಾಗಿ ಜನರ ಬಳಿಗೆ ಹೋಗಿ ಧಾನ್ಯ ಅಥವಾ ಹಣ ಬೇಡದೆ ’ನಿಮ್ಮಲ್ಲಿರುವ ದುರ್ವ್ಯಸನಗಳನ್ನು ಈ ಜೋಳಿಗೆಗೆ ಸಮರ್ಪಿಸಿ ಎಂದು ಕರೆ ನೀಡಿದ್ದರು.
ಸಮಾಜವನ್ನು ಜಾಗೃತಗೊಳಿಸಲು ಅವರು ಕೈಗೊಂಡ ಈ ಕಾರ್ಯ ಅತ್ಯಂತ ಶ್ಲಾಘನೀಯ. ಅವರ ಈ ಕ್ರಾಂತಿಕಾರಿ ಕಾರ್ಯ ಗೌರವಿಸಿ ರಾಜ್ಯ ಸರ್ಕಾರ ಪ್ರತಿವರ್ಷ ಆ.1 ರಂದು ಅವರ ಜನ್ಮದಿನವನ್ನು ’ವ್ಯಸನಮುಕ್ತ ದಿನ’ವನ್ನಾಗಿ ಆಚರಿಸಿ ಕೊಂಡು ಬರುತ್ತಿದೆ ಎಂದರು.ಹಿಂದಿನ ಕಾಲದಲ್ಲಿ ಮದ್ಯಪಾನ, ಧೂಮಪಾನ ಅಥವಾ ತಂಬಾಕು ಸೇವನೆ ಮಾತ್ರ ವ್ಯಸನಗಳಾಗಿದ್ದವು. ಆದರೆ ಇಂದಿನ ಆಧುನಿಕ ಯುಗದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಬಳಕೆ ಯುವಜನತೆಯಲ್ಲಿ ದೊಡ್ಡ ವ್ಯಸನವಾಗಿ ಪರಿಣಮಿಸಿದೆ. ತಂತ್ರಜ್ಞಾನ ವಿಚಾರ ಕ್ರಾಂತಿ ಮೂಡಿಸಬೇಕಿತ್ತೇ ವಿನಃ ಅಪರಾಧ ಕ್ರಾಂತಿಗಲ್ಲ. ಮೊಬೈಲ್ ಅತಿಯಾದ ಬಳಕೆಯಿಂದ ಇಡೀ ಜಗತ್ತಿನ ಯುವ ಸಮುದಾಯ ದಾರಿ ತಪ್ಪುತ್ತಿರುವುದು ಕಳವಳಕಾರಿ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.
ವ್ಯಸನ ಎಂದರೆ ಕೇವಲ ಮದ್ಯಪಾನ, ಧೂಮಪಾನ, ಗಾಂಜಾ ಅಥವಾ ಡ್ರಗ್ಸ್ ಮಾತ್ರವಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ಕೈಯಲ್ಲಿರುವ ಮೊಬೈಲ್ ಕೂಡ ಒಂದು ದೊಡ್ಡ ವ್ಯಸನವಾಗಿ ಮಾರ್ಪಟ್ಟಿದೆ. ಮೊಬೈಲ್ನಲ್ಲಿರುವ ಒಳ್ಳೆಯ ವಿಷಯಗಳನ್ನು ಸ್ವೀಕರಿಸಿದರೆ ಒಳಿತು, ಆದರೆ ಗೇಮಿಂಗ್ ಹಾಗೂ ಇಂಟರ್ನೆಟ್ ದುರ್ಬಳಕೆ ಯಿಂದ ಅನೇಕ ಅನಾಹುತಗಳು ಸಂಭವಿಸುತ್ತಿವೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಇಂದಿನ ಯುವಜನತೆ ಯಾವುದೇ ದುರಾಭ್ಯಾಸಗಳಿಗೆ ಬಲಿಯಾಗದೆ ಜಾಗೃತರಾಗಿರಬೇಕು. ದುರಾಭ್ಯಾಸ ಜೀವನವನ್ನು ನಾಶಪಡಿ ಸುತ್ತವೆ. ಆದರೆ ಸಾರ್ವಜನಿಕರ ಸೇವೆ ಹಾಗೂ ಕೆಲಸದಲ್ಲಿ ನಿರತರಾಗುವ ವ್ಯಸನ ಇದ್ದರೆ ಅದು ಸಮಾಜಕ್ಕೆ ಆಸ್ತಿ ಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಕೆ. ಮಂಜುನಾಥ್, ಡಿ.ಎ.ಸಿ.ಜಿ.ಸರ್ಕಾರಿ ಪಾಲಿಟೆಕ್ನಿಕ್ನ ಉಪಪ್ರಾಂಶುಪಾಲ ಶ್ರೀಧರ್ ಆಚಾರ್, ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್, ಜಿಲ್ಲಾ ನಿವೃತ್ತ ಗ್ರಂಥಾಲಯಾಧಿಕಾರಿ ಮಹೇಶಪ್ಪ ಇದ್ದರು.
ವ್ಯಸನಮುಕ್ತ ಸಮಾಜ ನಿರ್ಮಾಣ ಕೇವಲ ಸರ್ಕಾರದ ಹೊಣೆಯಲ್ಲ, ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಶಾಸಕನಾಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದೇವೆ. ಯಾವುದೇ ರಾಜಕೀಯ ಹಿನ್ನೆಲೆ ಇರಲಿ ಎಷ್ಟೇ ಪ್ರಭಾವಿ ವ್ಯಕ್ತಿಯಾಗಿರಲಿ, ಮಾದಕ ವಸ್ತು ಸಂಬಂಧಿತ ಪದಾರ್ಥ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಜೈಲಿಗಟ್ಟಲು ಸೂಚಿಸ ಲಾಗಿದೆ.